ಅಪರಾಧ
ಕೊಲೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ದರ್ಶನ್- ರಿಮ್ಯಾಂಡ್ ಕಾಪಿಯಲ್ಲಿ ರಹಸ್ಯ ಬಯಲು!

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಹತ್ಯೆಯಲ್ಲಿ ತನ್ನ ಪಾತ್ರದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ಪೊಲೀಸರು ನ್ಯಾಯಾಲಯಕ್ಕೆ ಆರೋಪಿಗಳ ವಶಕ್ಕೆ ನೀಡಿರುವ ರಿಮ್ಯಾಂಡ್ ಕಾಪಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಉಲ್ಲೇಖಿಸಲಾಗಿದೆ,
ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದನೆಂಬ ಆರೋಪದ ಮೇಲೆ ದರ್ಶನ್ ಮತ್ತು ಅತನ ಗ್ಯಾಂಗ್ ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆಗೈದಿತ್ತು, ಈ ಪ್ರಕರಣದಲ್ಲಿ ನಟ ದರ್ಶನ್ ನೀಡಿರುವ ಸ್ವಿಚ್ಛಾ ಹೇಳಿಕೆ ಬಹಿರಂಗಗೊಂಡಿದೆ,
ಕೊಲೆ ನಡೆದ ಬಳಿಕ ಪ್ರಕರಣದಲ್ಲಿ ಎಲ್ಲಿಯೂ ತನ್ನ ಹೆಸರು ಬರದಂತೆ ಮಾಡಲು ನಾನು ಎ 14 ಆರೋಪಿ ಪ್ರದೋಶ್ ಗೆ 30 ಲಕ್ಷ ರೂ ಕೊಟ್ಟಿದೆ, ಈ ಹಣದಲ್ಲಿ ಪೊಲೀಸರು, ಲಾಯರ್ ಮತ್ತು ಶವ ವಿಲೇವಾರಿಯ ಖರ್ಚು ವೆಚ್ಚವನ್ನು ನೋಡಿಕೊಳ್ಳಲು ಹೇಳಿದ್ದೆ ಎಂದು ನಟ ಸ್ವಇಚ್ಛಾ ಹೇಳಿಕೆ ದಾಖಲಿಸಿದ್ದಾರೆ.
ದರ್ಶನ್ ಹೇಳಿಕೆ ಪಡೆದ ಬಳಿಕ ಪೊಲೀಸರು ಪ್ರದೋಶ್ ಮನೆಯಿಂದ ದರ್ಶನ್ ನೀಡಿದ್ದ ಹಣವನ್ನು ವಶಪಡಿಸಿಕೊಂಡಿದ್ದರು,