ದೇಶ

ರಾಜ್ಯದ ಗೆಡಿಯಲ್ಲಿ ನಿರಂತರವಾಗಿ ನಡೆಯುತ್ತಿದೆ ಭ್ರೂಣ ಹತ್ಯೆ ದಂಧೆ!

ವಿಜಯಪುರ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗಡಿಭಾಗದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ತೀವ್ರಗೊಳಿಸಿದ್ದಾರೆ, ಇಲ್ಲಿನ ಕೆಲ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾ ಆರೋಗ್ಯ ಅಧಿಕಾರಗಳು ದಿಢೀರ್ ಭೇಟಿ ನೀಡಿದರು,
ವಿಜಯಪುರ ಡಿಹಚ್‍ಒ ಡಾ.ಬಸವರಾಜ ಹುಬ್ಬಳ್ಳಿ ನೇತೃತ್ವದಲ್ಲಿ ಗಡಿ ಭಾಗದಲ್ಲಿರುವ ಚಡಚಣ ಪಟ್ಟಣದ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ಮಾಡಿ ಪರಿಶೀಲನೆ ನಡೆಸಿದರು, ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿ ಹಾಕದಿದ್ದನ್ನು ಕಂಡ ಡಿಹಚ್‍ಒ ತರಾಟೆಗೆ ತೆಗೆದುಕೊಂಡರು, ಸಣ್ಣಪುಟ್ಟ ಲೋಪದೋಷ ಕಂಡ ಆಸ್ಪತ್ರೆಗಳಿಗೆ ನೊಟೀಸ್ ನೀಡಿದರು, ಚಡಚಣದ ಆಸ್ಪತ್ರೆಗಳಿಗೆ ಹಾಗೂ ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಕೆಪಿಎಂಇ ಕಾಯ್ದೆಯಡಿ ನೊಂದಣಿ ಕಡ್ಡಾಯ ಮಾಡಿಸಬೇಕು ಹಾಗೂ ಚಿಕಿತ್ಸೆ ದರಪಟ್ಟಿ ಹಾಕಬೇಕು ಎಂದು ಸೂಚಿಸಿದರು,
ಈ ಮಧ್ಯ ಬೆಳಗಾವಿಯಲ್ಲಿ ನಕಲಿ ವೈದ್ಯನ ಫಾರ್ಮ್ ಹೌಸ್ ನಲ್ಲಿ ಹತ್ಯೆಯಾದ ನವಜಾತ ಶಿಶುಗಳು ಪತ್ತೆಯಾಗಿದ್ದವು, ಈ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರು ಹಿಂಡಲಗಾ ಜೈಲಿನಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ,
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಹೊರ ವಲಯದಲ್ಲಿದ್ದ ಫಾರ್ಮ್ ಹೌಸ್ ನಲ್ಲಿ ಭ್ರೂಣ ಹತ್ಯೆ ನಡೆಸಲಾಗುತ್ತಿತ್ತು, ಹೆಚ್ಚಾಗಿ ಮಹಾರಾಷ್ಟ್ರ ಮೂಲದವರನ್ನು ಇಲ್ಲಿಗೆ ಕರೆತಂದು ಅಬಾರ್ಷನ್ ಮಾಡಲಾಗುತ್ತಿತ್ತು, ಈ ಸಂಬಂಧ ವಿಜಯಪುರದಲ್ಲಿ ನಕಲಿ ನರ್ಸ್ ಒಬ್ಬಳನ್ನು ಬಂಧಿಸಲಾಗಿದೆ, ಈಕೆಗೆ ಸಹಕಾರ ನೀಡುತ್ತಿದ್ದ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಕಸ್ಟಡಿಗೆ ಪಡೆಯಲಾಗಿದೆ,

Trending

Exit mobile version