ಅಪರಾಧ

ದರ್ಶನ್ ಫ್ಯಾನ್ಸ್ ವಿಕೃತಿ- ಕೆಟ್ಟ ಅಭಿಮಾನಿಗಳ ವಿರುದ್ಧ ದೂರು ನೀಡಿದ ಒಳ್ಳೆ ಹುಡುಗ!

ಬೆಂಗಳೂರು; ದರ್ಶನ್ ಅಭಿಮಾನಿಗಳಿಂದ ನನಗೆ ಬೆದರಿಕೆ ಕರೆ, ಮೆಸೇಜ್ ಹಾಗೂ ಸೋಶಿಯಲ್ ಮೀಡಿಯಾ ವಾರ್ನಿಂಗ್ ಬರ್ತಿದೆ ಎಂದು ನಟ ಪ್ರಥಮ್ ಪೊಲೀಸರಿಗೆ ದೂರು ನೀಡಿದ್ದಾರೆ, ಅಭಿಮಾನಿಗಳ ವಿಕೃತಿಯಿಂದ ತಮಗೆ ರಕ್ಷಣೆ ನೀಡಬೇಕೆಂದು ಅವರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ
ಬದುಕು ಸುಂದರವಾದದ್ದು, ಅಂಧಾಭಿಮಾನಿಗಳೇ ನಿಮ್ಮ ಬದುಕನ್ನು ತಂದೆ ತಾಯಿಗಳಿಗೆ ಮೀಸಲಿಡಿ ಎಂದು ಪ್ರಥಮ್ ಹೇಳಿದ್ದು, ಕನ್ನಡ, ಕಾವೇರಿ, ಸಂಸ್ಕøತಿ ಉಳಿಸೋಕೆ ಬೇಕಾದ್ರೆ ಜೈಲಿಗೆ ಹೋಗಿ ಯಾರಿಗೋಸ್ಕರನೋ ಲೈಫ್ ಹಾಳು ಮಾಡ್ಕೋಬೇಡಿ ಅಂತ ಪ್ರಥಮ್ ಪೋಸ್ಟ್ ಕೂಡ ಶೇರ್ ಮಾಡಿಕೊಂಡಿದ್ದಾರೆ
ಈ ಮೂಲಕ ಪ್ರಥಮ್ ಅವರು ಕೊಲೆ ಆರೋಪದ ಮೇಲೆ ಜೈಲು ಪಾಲಾಗಿರುವ ದರ್ಶನ್ ಅಭಿಮಾನಿಗಳಿಗೆ ಚಾಟಿ ಬೀಸಿದ್ದಾರೆ.
ವಿಕೃತ ರೀತಿಯಲ್ಲಿ ಹತ್ಯಗೈದ ಆರೋಪದ ಮೇಲೆ ದರ್ಶನ್ ಜೈಲು ಸೇರಿದ್ದಾಗ ಅವನ ಅಭಿಮಾನಿಗಳು ಪೊಲೀಸ್ ಠಾಣೆಯ ಮುಂದೆ ಕಿಕ್ಕಿರಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ್ದ ನಟ ಪ್ರಥಮ್ ಅವರು ಆ ಅಭಿಮಾನಿಗಳಿಗೂ ಲಾಠಿಯಲ್ಲಿ ಬಾರಿಸಬೇಕು ಎಂದಿದ್ದರು, ಇದಕ್ಕೆ ದರ್ಶನ್ ಅಭಿಮಾನಿಗಳು ತಮ್ಮ ಎಂದಿನ ಶೈಲಿಯಲ್ಲಿ ಅಸಹ್ಯ ಭರಿತ ಶಬ್ದಗಳಿಂದ ಪ್ರಥಮ್ ವಿರುದ್ಧ ಕಿಡಿಕಾರಿದ್ದರು,

Trending

Exit mobile version