ಬೆಂಗಳೂರು

ನೀರಿನ ದರ ಹೆಚ್ಚಳ ಅನಿವಾರ್ಯ ಸುಳಿವು ನೀಡಿದ ಡಿಕೆಶಿ!

ಬೆಂಗಳೂರು; ನಗರದಲ್ಲಿ ಕುಡಿಯುವ ನೀರಿನ ದರ ಕಳೆದ 14 ವರ್ಷಗಳಿಂದ ಏರಿಕೆಯಾಗಿಲ್ಲ, ನಗರದ ಪರಿಸ್ಧಿತಿಯಲ್ಲಿ ನೀರಿನ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ,
ಈ ಬಗ್ಗೆ ಮಾತನಾಡಿದ ಅವರು ಹಲವು ವರ್ಷಗಳಿಂದ ನೀರಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸುತ್ತಿರುವ ಬೆಂಗಳೂರು ಜಲಮಂಡಳಿಗೆ ಅಂದಿನ ರಾಜ್ಯ ಸರ್ಕಾರಗಳು ಹಲವು ಕಾರಣ ಹೇಳಿ ಮುಂದೂಡಿತ್ತು ಅದರೆ ಈ ಬಾರಿ ದರ ಏರಿಕೆ ಮಾಡುತ್ತೇವೆ ಎಂದರು,
ಬೆಂಗಳೂರು ಜಲ ಮಂಡಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳ, ವಿದ್ಯುತ್ ಬಿಲ್ ಕಟ್ಟಲು ಕೂಡ ಹಣವಿಲ್ಲದಂತಾಗಿದೆ, ಅಪಾರ ಜನಸಂಖ್ಯೆ ಕರ್ಖಾನೆಗಳು, ಕಚೇರಿಗಳು ಸಾಕಷ್ಟು ಇರುವ ಬೆಂಗಳೂರಿಗೆ ಕುಡಿಯುವ ನೀರು ಬೇಕು, ನೀರಿನ ದರ ಹೆಚ್ಚು ಮಾಡಬೇಕೆ ಬೇಡವೇ ಎಂದು ಸಾರ್ವಜನಿಕರೇ ಹೇಳಲಿ ಎಂದು ಡಿಕೆಶಿ ಹೇಳಿದರು,
ಈಗಾಗಲೇ ಜಲಮಂಡಳಿ ವಿಪರೀತ ನಷ್ಟದಲ್ಲಿದೆ, ಹೀಗೆ ಅದರೆ ಮುಂದಿನ ದಿನಗಳಲ್ಲಿ ಮನೆ, ಆಫೀಸ್, ಕಾರ್ಖಾನೆಗಳಿಗೆ ನೀರು ಸರಬರಾಜು ಮಾಡಲು ಕಷ್ಟವಾಗುತ್ತದೆ, ಇದರಿಂದ ಯಾರಿಗೂ ತೊಂದರೆಯಾಗದ ಹಾಗೆ ನೋಡಿಕೊಳ್ಳುತ್ತೇವೆ ಎಂದು ಡಿಕೆ ಹೇಳಿದರು,

Trending

Exit mobile version