ದೇಶ
ದರ್ಶನ್ ಗ್ಯಾಂಗ್ ಕೃತ್ಯ; ಆಟೋ ಮೇಲಿನ ದರ್ಶನ್ ಸ್ಟಿಕ್ಕರ್, ಬರಹಕ್ಕೆ ಅಭಿಮಾನಿಗಳ ಕೊಕ್!

ಬೆಂಗಳೂರು: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಹತ್ಯೆ (Renukaswamy Case) ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಬಂಧನವಾಗಿದೆ. ನಾಡಿನೆಲ್ಲಡೆ ದರ್ಶನ್ ಈ ಹೇಯ ಕೃತ್ಯದ ಬಗ್ಗೆ ಅಸಮಾಧಾನ ವ್ಯಕ್ತವಾಗ್ತಿದೆ. ಇದೀಗ ಆಟೋ ಚಾಲಕರು (Auto Drivers) ಅಭಿಮಾನದಿಂದ ಹಾಕಿದ್ದ ದರ್ಶನ್ (Actor Darshan )ಭಾವಚಿತ್ರದ ಸ್ಟಿಕ್ಕರ್ ಹಾಗೂ ಬರಹ ತೆಗೆದು ಹಾಕಿ ಆಕ್ರೋಶ ಹೊರ ಹಾಕ್ತಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನ ಆಗಿರುವ ದರ್ಶನ್ ಅಂಡ್ ಗ್ಯಾಂಗ್ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆರ್.ಆರ್ ನಗರದ ಶೆಡ್ನಲ್ಲಿ ಚಿತ್ರ ಹಿಂಸೆ ಕೊಟ್ಟು ಹತ್ಯೆ ಮಾಡಿರುವ ಆರೋಪ ಹೊತ್ತಿರುವ ದರ್ಶನ್ ತನ್ನ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾನೆ. ನಟ ದರ್ಶನ್ ಅಂದರೆ ಆಟೋ ಚಾಲಕರಿಗೆ ಅಭಿಮಾನ ಹೆಚ್ಚಿತ್ತು. ಇದೀಗ ಈ ಕೃತ್ಯದ ಬಳಿಕ ಅಭಿಮಾನದಿಂದ ತಮ್ಮ ವಾಹನದ ಮೇಲೆ ಹಾಕಿದ್ದ ದರ್ಶನ್ ಭಾವಚಿತ್ರ ಹಾಗೂ ಹಲವು ರೀತಿಯ ಬರಹಗಳನ್ನು ಅಭಿಮಾನಿಗಳು ಕಿತ್ತು ಹಾಕಲು ಶುರು ಮಾಡಿದ್ದಾರೆ.
ಬೆಂಗಳೂರಲ್ಲಿ ಆಟೋ ಚಾಲಕರ ಬಹುಪಾಲು ವಾಹನಗಳ ಮೇಲೆ ದರ್ಶನ್ ಅಭಿಮಾನ ರಾರಾಜಿಸುತ್ತಿರುತ್ತದೆ. ಡಿ ಬಾಸ್, ದಚ್ಚು, ದರ್ಶನ್, ಕರಿಯ ಎಂಬಿತ್ಯಾದಿ ಬರಹಗಳ ಸ್ಟಿಕ್ಕರ್ ಹಾಕಿಸಲಾಗಿತ್ತು. ಇದೀಗ ಕೊಲೆ ಪ್ರಕರಣದಲ್ಲಿ ಬಂಧನವಾದ ಬಳಿಕ ಆಟೋ ಚಾಲಕರು, ಅಭಿಮಾನಿಗಳು ತಾವು ಅಭಿಮಾನದಿಂದ ಹಾಕಿರುವ ದರ್ಶನ್ ಸ್ಟಿಕ್ಕರ್ ತೆರವು ಮಾಡ್ತಿದ್ದಾರೆ. ಓರ್ವ ಕೊಲೆಗಾರನನ್ನು ಆರಾಧಿಸುವ ಅಗತ್ಯ ನಮಗಿಲ್ಲ ಎನ್ನುವುದು ಅಭಿಮಾನಿಗಳಾಗಿದ್ದವರ ಮಾತು.