ಬೆಂಗಳೂರು
ದರ್ಶನ್ ಗೆ ಶಾಸಕ, ಸಚಿವರಾಗುವ ರಾಜಯೋಗವಿದೆಯಂತೆ!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ ಅವರ ಜಾತಕದಲ್ಲಿ ಶನಿಯಿಂದ 19 ವರ್ಷಗಳ ಸಂಕ್ರಣದೊಂದಿಗೆ ರಾಜಯೋಗ ರಚನೆಯಾಗಲಿದ್ದು ಅವರು ರಾಜಕೀಯದಲ್ಲಿ ಒಳ್ಳಯ ಸ್ಧಾನಮಾನ ಗಳಿಸಲಿದ್ದಾರೆ, ಭವಿಷ್ಯದಲ್ಲಿ ಶಾಸಕರು, ಸಚಿವರಾಗುವ ಲಕ್ಷಣ ತೋರುತ್ತಿದೆ ಎಂದು ಜ್ಯೋತಿಷಿ ಆರ್ಯವರ್ಧನ್ ಭವಿಷ್ಯ ನುಡಿದಿದ್ದಾರೆ,
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಆರ್ಯವರ್ಧನ್ ದರ್ಶನ್ ಹುಟ್ಟಿದ ದಿನಾಂಕವನ್ನು ಅದರ ವಿರೋಧಿ ಸಂಖ್ಯೆ 21 ಕ್ಕೆ ಹೋಲಿಕೆ ಮಾಡಿ ನೋಡಿದಾಗ ಅವರ ಹೆಸರು ಸರಿ ಇಲ್ಲ ಎಂಬುದು ತಿಳಿದು ಬರುತ್ತದೆ, ಅಲ್ಲದೆ ರಾಹುಭಕ್ತಿ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಕಾಡಲಿದ್ದು ಪಾಶ್ರ್ವವಾಯುವಿಗೆ ತುತ್ತಾದರೂ ಅಚ್ಚರಿಯಿಲ್ಲ, ಶುಕ್ರನ ದೆಸೆಯಿಂದ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ,
ದರ್ಶನ್ ಬಂಧನವಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್, ಹೆಚ್ ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗುವ ಚನ್ನಪಟ್ಟಣದಿಂದ ದರ್ಶನ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಜನೆ ರೂಪಿಸಿತ್ತೆಂದು ಆರೋಪಿಸಿದ್ದುದು ತಿಳಿದಿರುವ ವಿಚಾರವೇ,