ಅಪರಾಧ
ದರ್ಶನ್ ಪರ ಯಾರು ಮಾತಾಡಬಾರ್ದು’- ಸಚಿವರಿಗೆ ಸಿಎಂ ಸಿದ್ದರಾಮಯ್ಯ ವಾರ್ನಿಂಗ್!

ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ನಿಂದ ಕೊಲೆ ಕೇಸ್ ಬಗ್ಗೆ ಯಾರು ಮಾತಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ವಾರ್ನಿಂಗ್ ಕೊಟ್ಟಿದ್ದಾರೆ.
ಸದ್ಯ ನಡೆಯುತ್ತಿರೋ ಸಚಿವ ಸಂಪುಟ ಸಭೆಯಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯ, ಇದಕ್ಕಿಂತ ಕ್ರೌರ್ಯ ಮತ್ತೊಂದಿಲ್ಲ. ಈ ರೀತಿಯ ಕೃತ್ಯ ನಾನು ನೋಡೇ ಇಲ್ಲ. ಯಾರು ಈ ವಿಚಾರದಲ್ಲಿ ನನ್ನ ಬಳಿ ಬರಬೇಡಿ. ಯಾವುದೇ ಕಾರಣಕ್ಕೂ ದರ್ಶನ್ ಪರ ನನ್ನ ಮೇಲೆ ಒತ್ತಡ ಹಾಕಬೇಡಿ ಎಂದು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಇನ್ನು, ಈ ಘಟನೆ ಕುರಿತು ಯಾರು ಹೆಚ್ಚಿಗೆ ಮಾತಾಡಬಾರದು. ಅನಗತ್ಯ ಯಾರು ತುಟಿ ಬಿಚ್ಚಬಾರದು. ಕಾನೂನು ತನ್ನ ಕೆಲಸ ಮಾಡಲಿದೆ. ಈ ಘಟನೆ ಎಂಥದ್ದು ಎಂದು ನಾನು ನೋಡಿದ್ದೇನೆ. ದರ್ಶನ್ ಪರ ಮನವಿ ಮಾಡುವುದಾಗಲಿ, ಒತ್ತಡ ಹಾಕುವುದಾಗಲಿ ಯಾರು ಮಾಡಬಾರದು ಎಂದರು.