Connect with us

ದೇಶ

ನೋಯ್ಡಾ ಯೂಟ್ಯೂಬರ್ ಮನೆ ಮುಂದೆ ಕರ್ನಾಟಕ ಪೊಲೀಸ್ : ವಿವಾದಕ್ಕೆ ಕಾರಣವಾಯ್ತು ಪೊಲೀಸರ ನಡೆ!

ಲಕ್ನೋ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ವಿಡಿಯೋ ಹರಿಬಿಟ್ಟ ಆರೋಪದ ಮೇಲೆ ಉತ್ತರ ಪ್ರದೇಶದ ಅಜಿತ್ ಭಾರತಿ ಎಂಬ ಯೂಟ್ಯೂಬರ್ ಬಂಧನಕ್ಕೆ ಕರ್ನಾಟಕ ಪೊಲೀಸ್ ಮುಂದಾಗಿದ್ದಾರೆ
ಉತ್ತರ ಪ್ರದೇಶದ ನೋಯ್ಡಾಗೆ ತೆರಳಿರುವ ಕರ್ನಾಟಕ ಪೊಲೀಸರು ಯೂಟ್ಯೂಬರ್ ಮನೆ ಮುಂದೆ ತೆರಳಿ ನೋಟಿಸ್ ನೀಡಿದ್ದಾರೆ, ಬಳಿಕ ಸ್ಧಳೀಯ ಪೊಲೀಸರ ಜತೆ ಮಾತುಕತೆ ನಡೆಸಿ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ,
ಇನ್ನು ಪೊಲೀಸರು ಸಮವಸ್ತ್ರದ ಬದಲಾಗಿ ಸಾಮಾನ್ಯ ಉಡುಪುಗಳಲ್ಲಿ ತೆರಳಿದ್ದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ, ಸ್ಧಳೀಯರು ಜತೆ ವಾಗ್ವಾದಕ್ಕೆ ಕಾರಣವಾಗಿದ,
ಘಟನೆ ಬಗ್ಗೆ ಯೂಟ್ಯೂಬರ್ ಅಜಿತ್ ಭಾರತಿ ಟ್ವೀಟ್ ಮಾಡಿ 2 ಗಂಟೆ ಸುಮಾರಿಗೆ ಕರ್ನಾಟಕ ಪೊಲೀಸ್ ಎಂದು ಕರೆಸಿಕೊಳ್ಳವ ಮೂವರು ಯುವಕರು ನನ್ನ ಮನೆಯ ಕೆಳಗೆ ಬಂದು ನೋಟಿಸ್ ನೀಡಲು ಬಂದಿದ್ದೇವೆ ಎಂದರು, ನಾನು ನೋಯ್ಡಾ ಪೊಲೀಸರಿಗೆ ವರದಿ ಮಾಡಲಾಗಿದೆಯೇ? ಸ್ಧಳೀಯ ಪೊಲೀಸ್ ಠಾಣೆ ಯಾವುದು? ಎಂದು ಪ್ರಶ್ನಿಸಿದೆ, ಆ ಬಳಿಕ ನಾನು ತಕ್ಷಣ ಸ್ಧಳೀಯ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದೇನೆ
ಶೀಘ್ರದಲ್ಲೇ ಉತ್ತರ ಪ್ರದೇಶ ಪೊಲೀಸರು ಬಂದರು, ಆ ಬಳಿಕ ಬೆಂಗಳೂರಿನಿಂದ ಬಂದಿದ್ದ ಯುವಕರನ್ನು ಮಾತನಾಡಿಸಿ ನಂತರ ಕರೆದುಕೊಂಡು ಹೋದರು, ಈ ಬಗ್ಗೆ ತ್ವತಿತವಾಗಿ ಸ್ಪಂದಿಸಿದ್ದಕ್ಕಾಗಿ ಸ್ಧಳೀಯ ಪೊಲೀಸರಿಗೆ ಅನೇಕ ಧನ್ಯವಾದಗಳು ಎಂದು ಹೇಳಿದ್ದಾರೆ,
ಅದೇ ರೀತಿ ನೋಯ್ಡಾಗೆ ತೆರಳಿ ಯುಟ್ಯೂಬರ್ ಬಂಧನಕ್ಕೆ ಕರ್ನಾಟಕ ಪೊಲೀಸರು ಮುಂದಾಗಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ, ನೆಟ್ಟಿಗರು ಯೂಟ್ಯೂಬರ್ ಬೆಂಬಲಿಸಿ, ಕರ್ನಾಟಕ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಘಟನೆಯೇನು?
ರಾಮ ಮಂದಿರದ ಜಾಗದಲ್ಲಿ ಬಾಬರಿ ಮಸೀದಿ ಮರು ನಿರ್ಮಾಣ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಅಜಿತ್ ಭಾರತಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ವಿಡಿಯೋ ಹರಿಬಿಟ್ಟಿದ್ದರು, ಈ ಸಂಬಂಧ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಹಾಗೂ ವಕೀಲ ಬಿ.ಕೆ.ಬೋಪಣ್ಣ ನೀಡಿದ ದೂರು ಆಧರಿಸಿ ಅಜಿತ್ ಭಾರತಿ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ದೇಶ

ನಾವು ಉಗ್ರವಾದ ಪೋಷಿಸಿದ್ದು ನಿಜ ಎಂದು ತಪ್ಪೊಪ್ಪಿಕೊಂಡ ಪಾಕ್ ನಾಯಕಿ!

ಪಾಕಿಸ್ತಾನವು ಉಗ್ರರನ್ನು ಹಾಗೂ ಉಗ್ರರ ಚಟುವಟಿಕೆಯನ್ನು ಪೋಷಿಸಿಕೊಂಡು ಬಂದಿರುವುದು ಸತ್ಯ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಾಯಕಿ ಹಾಗೂ ಸಂಸದೆ ಶೆರ್ರಿ ರೆಹಮಾನ್ ಅವರು ಒಪ್ಪಿಕೊಂಡಿದ್ದಾರೆ,
ಸ್ಕೈ ನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಸಂಸದೆ ಶೆರ್ರಿ ರೆಹಮಾನ್ ಭಾಗಿಯಾಗಿದ್ದು, ನಿರೂಪಕಿ ಹಾಗೂ ಸಂಸದೆಯ ನಡುವೆ ಮಾತಿನ ಚಕಮಕಿ ನಡೆದಿದೆ, ಸಂದರ್ಶನದ ಬಿರುಸಿನ ನಡುವೆ ನಿರೂಪಕಿ ಸಾಕ್ಷ್ಯಾಧಾರಗಳನ್ನು ತೋರಿಸಿದ್ದು, ಈ ವೇಳೆ ಪಾಕಿಸ್ತಾನದ ಸಂಸದೆಯ ಬಾಯಿಂದ ಪಾಕಿಸ್ತಾನ ಹಾಗೂ ಉಗ್ರರಿಗೂ ಇರುವ ನಂಟಿನ ಅಸಲಿ ವಿಚಾರಗಳು ಬಹಿರಂಗೊಂಡಿದೆ,
ನಿರೂಪಕಿ ಯಾಲ್ದಾ ಹಕೀಮ್ ಬ್ರಿಗೇಡ್ 313 ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೆರ್ರಿ ರೆಹಮಾನ್ ಈ ಹಿಂದೆ ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸಿಕೊಂಡು ಬಂದಿದ್ದು ನಿಜ, ಆದರೆ ನಾವು ಈಗ ಉಗ್ರವಾದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ, ಪಾಕಿಸ್ತಾನ ರಾಷ್ಟ್ರವು ಬದಲಾಗಿದೆ ಎಂದರು,
ಇನ್ನು ಕಾಶ್ಮೀರವನ್ನು ಗುರಯಾಗಿಸಿಕೊಂಡು ಭಾರತದಲ್ಲಿ ನಡೆಯುತ್ತಿರುವ ದಾಳಿ ಬಗ್ಗೆ ನಿರೂಪಕಿ ಪ್ರಸ್ತಾಪಿಸದಾಗ ಉತ್ತರಿಸಿದ ಶೆರ್ರಿ ರೆಹಮಾನ್ ಭಾರತದಲ್ಲೂ ಆಂತರಿಕ ಸಂಘರ್ಷಗಳು ನಡೆಯುತ್ತಿವೆ, ಅಲ್ಲಿನ ಭದ್ರತೆಗೆ ಏನಾದರೂ ಸಮಸ್ಯೆಯಾದರೆ ಅದಕ್ಕೆ ನಾವು ಜವಾಬ್ದಾರರೇ? ಎಂದು ಪ್ರಶ್ನಿಸಿದರು,

Continue Reading

ಕ್ರೀಡೆ

ಒಂದೇ ತಿಂಗಳಲ್ಲಿ 6 ಕ್ರಿಕೆಟಿಗರು ನಿವೃತ್ತಿ-ಲಿಸ್ಟ್ ನಲ್ಲಿದ್ದಾರೆ ಭಾರತದ ದಿಗ್ಗಜರು!

ನವದೆಹಲಿ: ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಯೊಂದಿಗೆ ಶುರುವಾದ ಸ್ಟಾರ್ ಆಟಗಾರರ ಗುಡ್ ಬೈ ಪರ್ವ ಮುಂದುವರೆದಿದೆ, ಅದರಲ್ಲೂ ಮೇ ಮತ್ತು ಜೂನ್ ತಿಂಗಳ ನಡುವೆ ಒಟ್ಟು 6 ಆಟಗಾರರು ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ,
ರೋಹಿತ್ ಶರ್ಮಾ: ಭಾರತದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಕಳೆದ ತಿಂಗಳು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು, ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಹಿಟ್ ಮ್ಯಾನ್ ಇನ್ಮುಂದೆ ಏಕದಿನದಲ್ಲಿ ಮಾತ್ರ ಟೀಮ್ ಇಂಡಿಯಾ ಪ್ರತಿನಿಧಿಸಲಿದ್ದಾರೆ,
ವಿರಾಟ್ ಕೊಹ್ಲಿ: ರೋಹಿತ್ ಶರ್ಮಾ ಬೆನ್ನಲ್ಲೇ ವಿರಾಟ್ ಕೊಹ್ಲಿನ ಕೂಡ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ, ಮೇ 12 ರಂದು ಟೆಸ್ಟ್ ಗೆ ನಿವೃತ್ತಿ ಪ್ರಕಟಿಸಿದ್ರು, ಕಿಂಗ್ ಕೊಹ್ಲಿ ಇನ್ನು ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ,
ಏಂಜೆಲೊ ಮ್ಯಾಥ್ಯೂಸ್: ಶ್ರೀಲಂಕಾ ತಂಡದ ಸ್ಟಾರ್ ಆಲ್‍ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ, ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್‍ವೆಲ್ ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ,
ಆದರೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮುಂದುವರೆಯಲಿದ್ದಾರೆ,
ಹೆನ್ರಿಕ್ ಕ್ಲಾಸೆನ್: ಸೌತ್ ಆಫ್ರಿಕಾದ ಹೊಡಿಬಡಿ ದಾಂಡಿಗ ಹೆನ್ರಿಕ್ ಕ್ಲಾಸೆನ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ, ಕೇವಲ 33 ವರ್ಷದ ಕ್ಲಾಸೆನ್, ಮುಂಬರುವ ದಿನಗಳಲ್ಲಿ ಟಿ20 ಲೀಗ್ ಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ,
ನಿಕೋಲಸ್ ಪೂರನ್: ವೆಸ್ಟ್ ಇಂಡೀಸ್ ನ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಕೂಡ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ, ಅದು ಕೂಡ 29 ನೇ ವಯಸ್ಸಿನಲ್ಲಿ ಎಂಬುದು ಅಚ್ಚರಿ.

Continue Reading

ಕ್ರೀಡೆ

ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವಳಾಗಿ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ ಹೇಗೆ ರೂಪಿಸುತ್ತದೆ ನಾನು ನೇರವಾಗಿ ಅನುಭವಿಸಿದ್ದೇನೆ ದೀಪಿಕಾ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆ, ಬ್ಯಾಡ್ಮಿಂಟನ್ ಲೆಜೆಂಡ್​​ ಪ್ರಕಾಶ್ ಪಡುಕೋಣೆ ಅವರ 70ನೇ ಹುಟ್ಟುಹಬ್ಬವನ್ನಿಂದು ಬಹಳ ವಿಶೇಷವಾಗಿ ಆಚರಿಸಿದರು.

‘ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್’ (ಪಿಎಸ್​ಬಿ) ಬೆಂಗಳೂರು, ಎನ್​​ಸಿಆರ್, ಮುಂಬೈ, ಚೆನ್ನೈ, ಜೈಪುರ, ಪುಣೆ, ನಾಸಿಕ್, ಮೈಸೂರು, ಪಾಣಿಪತ್, ಡೆಹ್ರಾಡೂನ್, ಉದಯಪುರ, ಕೊಯಮತ್ತೂರು, ಸಾಂಗ್ಲಿ ಮತ್ತು ಸೂರತ್ ಸೇರಿದಂತೆ 18 ನಗರಗಳಲ್ಲಿ 75ಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಇನ್​​​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾದ ಮಾಧ್ಯಮ ಪ್ರಕಟಣೆ ಮೂಲಕ ಹೇಳಿದ್ದಾರೆ.

“ಬ್ಯಾಡ್ಮಿಂಟನ್‌ನ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುವುದು ನಮ್ಮ ಆಶಯ” ಎಂದೂ ಸಹ ದೀಪಿಕಾ ತಿಳಿಸಿದ್ದಾರೆ. ಈ ಮೂಲಕ ಕೇಂದ್ರಗಳ ಸಂಖ್ಯೆ ವಿಸ್ತರಿಸುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್​​ನಲ್ಲಿ, “ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವಳಾಗಿ, ಈ ಕ್ರೀಡೆಯು ಒಬ್ಬರ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೇಗೆ ರೂಪಿಸುತ್ತದೆ ಎಂಬುದನ್ನು ನಾನು ನೇರವಾಗಿ ಅನುಭವಿಸಿದ್ದೇನೆ. ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (PSB) ಮೂಲಕ, ಬ್ಯಾಡ್ಮಿಂಟನ್‌ನ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ಹಂತದ ಜನರಿಗೆ ತಲುಪಿಸಲು ಮತ್ತು ಆರೋಗ್ಯಕರ, ಫೋಕಸ್ಡ್​​ ಮತ್ತು ಕ್ರೀಡೆಯಿಂದ ಪ್ರೇರಿತವಾದ ಪೀಳಿಗೆಯನ್ನು ನಿರ್ಮಿಸಲು ನಾವು ಆಶಿಸುತ್ತೇವೆ. ಅಪ್ಪಾ, ನಿಮ್ಮನ್ನು ಚೆನ್ನಾಗಿ ತಿಳಿದಿರುವವರಿಗೆ ಈ ಕ್ರೀಡೆಯ ಬಗ್ಗೆ ನಿಮ್ಮ ಉತ್ಸಾಹವೂ ತಿಳಿದಿದೆ. 70ನೇ ವಯಸ್ಸಿನಲ್ಲಿಯೂ ನೀವು ಬ್ಯಾಡ್ಮಿಂಟನ್​ಗೆ ನಿಮ್ಮನ್ನು ಸಮರ್ಪಿಸಿದ್ದೀರಿ. ನಿಮ್ಮ ಉತ್ಸಾಹವನ್ನು ನಿಜವಾಗಿಸಲು ನಾವು ಬದ್ಧರಾಗಿದ್ದೇವೆ. ಎಲ್ಲರಿಗಾಗಿ ಬ್ಯಾಡ್ಮಿಂಟನ್! 70ನೇ ಹುಟ್ಟುಹಬ್ಬದ ಶುಭಾಶಯಗಳು ಪಪ್ಪಾ!” ಎಂದು ಬರೆದುಕೊಂಡಿದ್ದಾರೆ.

ನಟಿ ಶೇರ್ ಮಾಡಿದ ಪ್ರಕಟಣೆಯಲ್ಲಿ, ಪಿಎಸ್‌ಬಿಯ ಮಾರ್ಗದರ್ಶಕ ಮತ್ತು ಸಲಹೆಗಾರ ಪ್ರಕಾಶ್ ಪಡುಕೋಣೆ ತಮ್ಮ ಮನದಾಳವನ್ನೂ ಹಂಚಿಕೊಂಡರು. “ಕ್ರೀಡೆಯು ಬೆಳವಣಿಗೆಯ ಅವಿಭಾಜ್ಯ ಅಂಗವಾಗಿದೆ. ಇದು ಶಿಸ್ತು, ಸ್ಥಿತಿಸ್ಥಾಪಕತ್ವ ಮತ್ತು ಗೆಲುವಿನ ಮನಸ್ಥಿತಿಯನ್ನು ಹುಟ್ಟಿಸುತ್ತದೆ. ಪಿಎಸ್‌ಬಿಯೊಂದಿಗೆ, ಗುಣಮಟ್ಟದ ತರಬೇತಿಯನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವುದು, ತಳಮಟ್ಟದಿಂದ ಪ್ರತಿಭೆಯನ್ನು ಪೋಷಿಸುವುದು ಮತ್ತು ಭಾರತೀಯ ಬ್ಯಾಡ್ಮಿಂಟನ್‌ನ ಭವಿಷ್ಯಕ್ಕೆ ಬಲವಾದ ಅಡಿಪಾಯವನ್ನು ಹಾಕುವುದು ನಮ್ಮ ಗುರಿ” ಎಂದು ಹೇಳಿದರು.

ಭಾರತದ 18 ನಗರಗಳಲ್ಲಿ 75 ಕೇಂದ್ರಗಳು ಆರಂಭಗೊಂಡಿದ್ದು, ಈ ವರ್ಷದ ಕೊನೆಗೆ 100 ಕೇಂದ್ರಗಳು ಮತ್ತು 2027ರ ಹೊತ್ತಿಗೆ 250 ಕೇಂದ್ರಗಳಿಗೆ ವಿಸ್ತರಿಸುವ ಗುರಿಯನ್ನು ‘ಪಡುಕೋಣೆ ಸ್ಕೂಲ್​ ಆಫ್​​ ಬ್ಯಾಡ್ಮಿಂಟನ್’ ಹೊಂದಿದೆ. ದೀಪಿಕಾ ಪಡುಕೋಣೆ ಇದರ ಸಂಸ್ಥಾಪಕಿಯಾದರೆ, ಪ್ರಕಾಶ್​ ಪಡುಕೋಣೆ ಮಾರ್ಗದರ್ಶಕರಾಗಿ ಪಿಎಸ್​ಬಿಯ ಭಾಗವಾಗಿದ್ದಾರೆ

Continue Reading

Trending