ದೇಶ
ದರ್ಶನ್ ಒಳ್ಳೆಯವರೇ… ಕುಕೃತ್ಯ ಸಮರ್ಥಿಸಿಕೊಂಡ ಶಾಸಕ!

ಬೆಂಗಳೂರು; ನಟ ದರ್ಶನ್ ಕೊಲೆಗಡುಕನಲ್ಲ ಒಳ್ಳೆ ವ್ಯಕ್ತಿತ್ವದವರಾಗಿದ್ದು ಸ್ವಲ್ಪ ಸಿಡುಕು ಮನೋಭಾವವಿದೆ ಎಂದು ದರ್ಶನ್ ಕೃತ್ಯವನ್ನು ಮದ್ದೂರು ಕಾಂಗ್ರೆಸ್ ಶಾಸಕ ಉದಯ್ ಸಮರ್ಥಿಸಿಕೊಂಡರು,
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದರು, ದರ್ಶನ್ಗೆ ಸ್ವಲ್ಪ ಮುಂಗೋಪ ಸಿಟ್ಟು ಜಾಸ್ತಿ ಅದರೆ ಕೊಲೆ ಮಾಡುವವನಲ್ಲ, ಆತ ಆಭಿಮಾನಿಗಳ ಬಳಿ ಮಾಧ್ಯಮದವರ ಬಳಿ ಸ್ವಲ್ಪ ಮುಂಗೋಪದಿಂದ ಮಾತನಾಡುತ್ತಾನೆ ಅಷ್ಟೇ, ಸದ್ಯಕ್ಕೆ ಪೊಲೀಸ್ ತನಿಖೆ ನಡೆಯುತ್ತಿದೆ, ತನಿಖೆ ಮುಗಿದ ಮೇಲೆ ಮಾತಾಡೋಣ ಎಂದು ಹೇಳಿದರು,
ನನಗೆ ಹಲವು ವರ್ಷಗಳಿಂದ ದರ್ಶನ್ ಸ್ನೇಹಿತ,ಅದರೆ ಈ ರೀತಿ ಮಾಡಿದ್ದಾರೆ ಎನ್ನುವುದು ಅವರ ಜೊತೆಗಿರುವವರು ಮಾಡಿದ್ರಾ? ಇವರ ಮೇಲೆ ಏನಾದರೂ ಹಾಕಿದ್ರಾ ಗೊತ್ತಿಲ್ಲ, ತನಿಖೆಯಿಂದ ಎಲ್ಲವೂ ಹೊರಗೆ ಬರಬೇಕು, ನಾನು ಈಗಲೇ ಏನನ್ನೂ ಹೇಳೋಕೆ ಆಗಲ್ಲ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ, ತನಿಖೆ ಆಗಿ ಸತ್ಯ ಹೊರಗೆ ಬರಲಿ, ಇನ್ನೇನು ಕೆಲವೇ ದಿನಗಳಲ್ಲಿ ಏನು ಅಂತ ಹೊರಬರುತ್ತದೆ, ರಾಜ್ಯದ ಜನರಿಗೂ ಗೊತ್ತಾಗುತ್ತದೆ, ನಾವ್ಯಾರೂ ದರ್ಶನ್ ರಕ್ಷಣೆ ಮಾಡುವಂತೆ ಸಿಎಂ ಬಳಿ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು,
ಗನ್ ಮ್ಯಾನ್ ಮೇಲೆ ದರ್ಶನ್ ಬೆಂಬಲಿಗರ ಹಲ್ಲೆ ಎನ್ನುವುದು ನನಗೆ ಗೊತ್ತಿಲ್ಲ, ಅದೆಲ್ಲವೂ ಸುಳ್ಳು ನನಗೆ ಐದಾರು ಮಂದಿ ಗನ್ ಮ್ಯಾನ್ ಇದ್ದಾರೆ, ಹಲ್ಲೆ ಮಾಡಿದ್ದರೆ ನನಗೆ ಗೊತ್ತಾಗುತ್ತಿರಲಿಲ್ವೇ? ಅಂತಾದ್ದೂ ಯಾವುದೂ ಆಗಿಲ್ಲ, ಅದೆಲ್ಲವೂ ಸುಳ್ಳು ಸೃಷ್ಟಿಯಷ್ಟೇ ಎಂದು ತಿಳಿಸಿದರು,