ಅಪರಾಧ

ದರ್ಶನ್ ಕುಕೃತ್ಯಕ್ಕೆ ಛೀಮಾರಿ ಹಾಕಿದ ನಟಿ ರಮ್ಯಾ ಪೊಲೀಸರಿಗೆ ಹ್ಯಾಟ್ಸ್ ಆಫ್!

ಬೆಂಗಳೂರು: ಕಾನೂನು ಧಿಕ್ಕರಿಸುವ ಶ್ರೀಮಂತರು, ಶಕ್ತಿಶಾಲಿಗಳ ಹಿಂಸೆಗೆ ಬಲಿಯಾಗುವವರ ಮಹಿಳೆಯರು, ಮಕ್ಕಳು ಮತ್ತು ಬಡವರು. ಕರ್ನಾಟಕದಲ್ಲಿ ಇಂತಹ ಕೃತ್ಯಗಳನ್ನು ಬಯಲಿಗೆಳೆದ ಪೊಲೀಸರು ಮತ್ತು ಮಾಧ್ಯಮಗಳಿಗೆ ಹ್ಯಾಟ್ಸ್ ಆಫ್ ಎಂದು ನಟಿ ರಮ್ಯಾ ಹೇಳಿಕೊಂಡಿದ್ದಾರೆ,
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿರುವ ರಮ್ಯಾ ವಿಚಾರಣೆ ಕೋರ್ಟ್‍ನಲ್ಲಿ ತಾರ್ಕಿಕ ಅಂತ್ಯ ಕಂಡಾಗ ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ,
ಇಂತಹ ಪ್ರಕರಣದಲ್ಲಿ ನ್ಯಾಯ ಮೇಲುಗೈ ಸಾಧಿಸಿದಿದ್ದರೆ ನಾವು ಸಾರ್ವಜನಿಕರಿಗೆ ಯಾವ ಸಂದೇಶ ನೀಡಿದಂತಾಗುತ್ತದೆ ಎಂದು ಪ್ರಶ್ನಿಸಿದ್ದಾರೆ,
ನಟ ದರ್ಶನ್ ಮತ್ತ ಅವರ ಗ್ಯಾಂಗ್ ಬರ್ಬರವಾಗಿ ರೇಣುಕಾಸ್ವಾಮಿ ಎಂಬಾತನ್ನು ಹತ್ಯೆಗೈದಿತ್ತು, ರೇಣುಕಾಸ್ವಾಮಿ ಅವರಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ,

Trending

Exit mobile version