ಅಪರಾಧ
ಲಬೋ ಲಬೋ ಎನ್ನುತ್ತಿರುವ ಪವಿತ್ರಾ ದರ್ಶನ್!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧಿತನಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲ ರಾತ್ರಿ ಕಳೆದಿದ್ದಾರೆ, ಕಳೆದ ಹನ್ನೆರುಡು ದಿನಗಳಿಂಗ ವಿಚಾರಣೆ ಎದುರಿಸಿ ಈಗ ಕೇಂದ್ರ ಕಾರಾಗೃಹ ಪಾಲಾಗಿದ್ದಾರೆ,
ಜೈಲಿನ ಆಸ್ಪತ್ರೆ ಪಕ್ಕದಲ್ಲೇ ಇರುವ ಎರಡು ಕೊಠಡಿಯಲ್ಲಿ ದರ್ಶನ್ & ಗ್ಯಾಂಗ್ ಅನ್ನು ಇರಿಸಲಾಗಿದೆ, ದರ್ಶನ್ ಹಾಗೂ ಪ್ರದೂಶ್ ಒಂದು ಕೊಠಡಿಯಲ್ಲಿ ಇರಿಸಿದ್ದರೆ, ಧನರಾಜ್ ಹಾಗೂ ವಿನಯ್ ಮತ್ತೊಂದು ಕೊಠಡಿಯಲ್ಲಿ ಸೆರೆ ಇಡಲಾಗಿದೆ, ಇವರನ್ನು ಇಟ್ಟಿರುವ ಬ್ಯಾರಕ್ ಗಳ ಅಕ್ಕ ಪಕ್ಕ ಬೇರೆ ಯಾವುದೇ ಕ್ರಮಿನಲ್ ಆರೋಪಿಗಳೂ ಇಲ್ಲ, ಪರಪ್ಪನ ಅಗ್ರಹಾರ ಜೈಲಿಗೆ ಬರುತ್ತಿದ್ದಂತೆ ಯಾರ ಬಳಿಯೂ ಮಾತನಾಡದೆ ನೇರವಾಗಿ ಕೊಠಡಿಗೆ ಹೋದ ದರ್ಶನ್ ನಡೆದರು, ನಟ ದರ್ಶನ್ ಗೆ ರಾತ್ರಿ ಊಟಕ್ಕೆ ಜೈಲು ಸಿಬ್ಬಂದಿ ಚಪಾತಿ ಊಟ ನೀಡಿದರ, ಅದರೆ ಈ ಊಟ ತಿನ್ನಲಾಗದೇ ದರ್ಶನ್ ಚಡಪಡಿಸಿದರು, ಅಷ್ಟೇ ಅಲ್ಲ ಈ ಮೊದಲು ಪೊಲೀಸ್ ಕಸ್ಟಡಿಯಲ್ಲಿದ್ದಾಲೂ ಸರಿಯಾಗಿ ಊಟ ಸೇವಿಸಿರಲಿಲ್ಲ, ಈಗ ಜೈಲು ಪಾಲಾಗಿದ್ದು ಅಲ್ಲಿಯೂ ಸರಿಯಾಗಿ ಊಟ ಸೇವಿಸಲಾಗದೆ ಸುಮ್ಮನೆ ಕುಳಿತಿದ್ದರು, ಜೈಲಿನಲ್ಲಿ ಇಡೀ ರಾತ್ರಿ ಸರಿಯಾಗಿ ನಿದ್ದೆ ಮಾಡದ ದರ್ಶನ್, ಸುಮ್ಮನೆ ಯೋಚನೆ ಮಾಡುತ್ತಿದ್ದರು,
ಇದೇ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರ ಜೈಲು ಸೇರಿ 3 ದಿನಗಳು ಕಳದಿದೆ, ನಿನ್ನೆ ರಾತ್ರಿ ದರ್ಶನ್ ಜೈಲು ಸೇರಲು ನಾನೇ ಕಾರಣ ಎಂದು ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ, ಅತ್ತ ದರ್ಶನ್ ಸಹ ಮಂಕಾಗಿ ಕುಳಿತಿದ್ದು ಇತ್ತ ಪವಿತ್ರ ಸಹ ಯಾರ ಬಳಿಯು ಮಾತಾಡ್ತಿಲ್ಲ ಎಂದು ತಿಳಿದುಬಂದಿದೆ, ಮಹಿಳಾ ಬ್ಯಾರಕ್ ನಲ್ಲ ಸಹ ಖೈದಿಗಳ ಜೊತೆ ಪವಿತ್ರ ಗೌಡ ಏನೂ ಮಾತನಾಡಿಲ್ಲ, ಬದಲಿಗೆ ಕಣ್ಣೀರು ಹಾಕಿ ಪಶ್ಚಾತಾಪ ಪಟ್ಟಿದ್ದಾರೆ,