ಅಪರಾಧ

ಡಿ ಬಾಸ್ ಫ್ಯಾನ್ಸ್‍ಗಿಲ್ಲ ಜೈಲಿನ ಬಳಿ “ದರ್ಶನ”

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಕೇಸ್‍ನಲ್ಲಿ ನಟ ದರ್ಶನ್ & ಗ್ಯಾಂಗ್ ಈಗಾಗಲೇ ಜೈಲು ಸೇರಿದ್ದಾರೆ, ಆರೋಪಿ ದರ್ಶನ್ ಸದ್ಯ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದು ಅವರನ್ನು ಕಾಣಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳ ದಂಡೇ ಹರಿದುಬರುತ್ತಿದೆ,
ಅದರೆ ಆರೋಪಿಗಳ ಕುಟುಂಬಸ್ಧರಿಗೆ ಮಾತ್ರ ಜೈಲಿನ ಒಳಗೆ ನಿಯಮಾನುಸಾರ ಪ್ರವೇಶಕ್ಕೆ ಅವಕಾಶವಿದೆ, ಅದರೂ ತಮ್ಮ ‘ಡಿ’ ಬಾಸ್ ಅವರನ್ನು ಒಮ್ಮೆಯಾದರೂ ನೋಡಲು ಬಿಡಿ ಎಂದು ದರ್ಶನ್ ಫ್ಯಾನ್ಸ್ ಪರಪ್ಪನ ಅಗ್ರಹಾರ ಜೈಲಿನ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ,
ತಮ್ಮ ದರ್ಶನ್ ಭೇಟಿಗೆ ಬಂದ ಅಭಿಮಾನಿಯೋರ್ವರು ಮಾತನಾಡಿ ದರ್ಶನ್ ತಪ್ಪು ಮಾಡಿದರೆ ಶಿಕ್ಷೆಯಾಗಲಿ, ಅದರೆ ಅವರ ಮೇಲಿರುವ ಅಭಿಮಾನ ನಮಗೆ ಯಾವತ್ತಿಗೂ ಕಡಿಮೆ ಆಗಲ್ಲ, ಇನ್ನು ಅವರು ತಪ್ಪ ಮಾಡಿದ್ದಾರೆಂದೂ ಬಿಂಬಿಸಲಾಗುತ್ತಿದೆ, ನಮ್ಮ ಬಾಸ್ ಆ ರೀತಿಯ ಕೆಟ್ಟ ಮನುಷ್ಯ ಅಲ್ಲ ಎಂದೂ ಜೈಲಿನ ಬಳಿ ಫ್ಯಾನ್ಸ್ ಅಭಿಪ್ರಾಯ ಪಡುತ್ತಿದ್ದಾರೆ,

Trending

Exit mobile version