ಕ್ರೀಡೆ

ಸೆಮಿಗೆ ಅಫ್ಘಾನ್ ಲಗ್ಗೆ : ಭಾರತಕ್ಕೆ ಕೃತಜ್ಷತೆ ಸಲ್ಲಿದ್ದೇಕೆ ತಾಲಿಬಾನ್?

ಅಫ್ಘಾನಿಸ್ತಾನ: 2024 ರ ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೆ ಅಫ್ಘಾನಿಸ್ತಾನ ತಂಡ ಪ್ರವೇಶಿಸಿದ್ದಕ್ಕೆ ತಾಲಿಬಾನಿಗಳು ಭಾರತಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ,
ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 8 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಸೆಮಿಸ್‌ಗೆ ಎಂಟ್ರಿ ಕೊಟ್ಟಿದೆ, ಇದರಿಂದ ಅಫ್ಘಾನಿಸ್ತಾನ ಕ್ರಿಕೆಟ್ ಅಭಿಮಾನಿಗಳು ಸಂಭ್ರಮ ಮುಗಿಲು ಮುಟ್ಟಿದೆ, ಅಲ್ಲಿನ ತಾಲಿಬಾನಿಗಳು ಹರ್ಷಗೊಂಡಿದ್ದು ತಮ್ಮ ತಂಡದ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ, ಅಷ್ಟೇ ಅಲ್ಲದೆ ಅಫ್ಘಾನ್ ಕ್ರಿಕೆಟ್ ತಂಡಕ್ಕ ನಿರಂತರವಾಗಿ ಬೆಂಬಲ ನೀಡುತ್ತ ಬಂದಿರುವ ಭಾರತೀಯರಿಗೆ ಹಾಗೂ ಬಿಸಿಸಿಐಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ,
ಅಫ್ಘಾನ್ ಕ್ರಿಕೆಟ್ ಬೆಳವಣಿಗೆಯಲ್ಲಿ ಬಿಸಿಸಿಐ ಪಾತ್ರ:
ವಿಶೇಷವೆಂದರೆ ಬಿಸಿಸಿಐ 2015 ರಿಂದ ಭಾರತದಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ತರಬೇತಿ ನೀಡುತ್ತಿದೆ, ಆ ದೇಶದಲ್ಲಿ ಯಾವಾಗಲೂ ಯುದ್ಧದ ಪರಿಸ್ಧಿತಿ, ಅಂತರಿಕ ಸಂಘರ್ಷ ಇರುವುದರಿಂದ ಅಫ್ಘಾನ ತಂಡ ಸಾಕಷ್ಟು ಪಂದ್ಯಗಳನ್ನು ಗ್ರೇಟರ್ ನೋಯ್ಡಾ ಡೆಹ್ರಾಡೂನ್ ಮತ್ತು ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಆಡಿದೆ,
ಕಂದಹಾರ್‌ನಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲು ಭಾರತ ಸರ್ಕಾರ ಧನ ನೀಡಿರುವುದ ಮತ್ತೊಂದು ಕೊಡುಗೆ ಭಾರತ ಸರ್ಕಾರ 1 ಮಿಲಿಯನ್ ಡಾಲರ್‌ನ್ನು ಅನ್ನು ಕಂದಹಾರ್ ಕ್ರಿಕೆಟ್ ಸ್ಟೇಡಿಯಂ ಅನ್ನು ನಿರ್ಮಿಸಲು ಸಹಾಯ ಮಾಡಿತು, ಅಲ್ಲಿನ ತಂಡವನ್ನು ಬೆಂಬಲಿಸುತ್ತ ಬಂದಿರುವ ಭಾರತಕ್ಕೆ ಇದೀಗ ತಾಲಿಬಾನ್ ಸರ್ಕಾರ ಧನ್ಯವಾದಗಳನ್ನು ತಿಳಿಸಿದೆ.

Trending

Exit mobile version