ಸಿನಿಮಾ
ಡಿಎಂಕೆ ಸರ್ಕಾರದ ವಿರುದ್ಧ ದಳಪತಿ ವಿಜಯ್ ವಾಗ್ದಾಳಿ.. ಯಾವ ಕಾರಣಕ್ಕೆ ಟೀಕೆ ಗೊತ್ತಾ? – Vijay Slams DMK govt
ಚೆನ್ನೈ (ತಮಿಳುನಾಡು): ನಟ – ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ವಿಜಯ್, ‘ತಮಿಳುನಾಡು ಸರ್ಕಾರ ಡ್ರಗ್ಸ್ ನಿಯಂತ್ರಣದಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದ್ದಾರೆ. ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಟ, ಉತ್ತಮ ಶಿಕ್ಷಣ ಹೊಂದಿರುವ ನಾಯಕರು ರಾಜಕೀಯಕ್ಕೆ ಬರಬೇಕು ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು. ಉತ್ತಮ ನಾಯಕರು ಮತ್ತು ನಾಯಕತ್ವದ ಗುಣಗಳ ಬಗ್ಗೆ ಒತ್ತಿ ಹೇಳಿದರು.
ಸಮಾಜ ಸೇವೆಗಳಿಗೂ ಹೆಸರುವಾಸಿಯಾಗಿರುವ ವಿಜಯ್ ಈ ಹಿಂದೆ ತಮಿಳುನಾಡಿನ 10 ಮತ್ತು 12ನೇ ತರಗತಿಯ ಟಾಪರ್ಸ್ ಅನ್ನು ಗೌರವಿಸುವುದಾಗಿ ತಿಳಿಸಿದ್ದರು. ಅದರಂತೆ ಇಂದು ಚೆನ್ನೈನಲ್ಲಿ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದಾರೆ. ಚೆನ್ನೈನ ತಿರುವನ್ಮಿಯೂರಿನಲ್ಲಿಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ಮತ್ತೊಂದು ಕಾರ್ಯಕ್ರಮವನ್ನು ಜುಲೈ 3ಕ್ಕೆ ನಿಗದಿಪಡಿಸಲಾಗಿದೆ.
ವಿದ್ಯಾರ್ಥಿಗಳನ್ನು ಸನ್ಮಾನಿಸಿದ ನಂತರ ಸಮಾರಂಭದಲ್ಲಿ ಮಾತನಾಡಿದ ವಿಜಯ್, “ನಮಗೆ ಉತ್ತಮ ನಾಯಕರು ಬೇಕು. ನಾನಿಲ್ಲಿ ರಾಜಕೀಯವಾಗಿ ಹೇಳುತ್ತಿಲ್ಲ. ನೀವು ಏನು ಮಾಡುತ್ತಿದ್ದೀರೋ, ಅದರಲ್ಲೇ ನಿಮಗೆ ನಾಯಕತ್ವದ ಗುಣ ಇರಬೇಕು, ಅದನ್ನೇ ನಾನಿಲ್ಲಿ ಹೇಳುತ್ತಿದ್ದೇನೆ” ಎಂದು ತಿಳಿಸಿದರು. ಜೊತೆಗೆ, ಭವಿಷ್ಯದಲ್ಲಿ ರಾಜಕೀಯವೂ ಕೂಡ ಕೆರಿಯರ್ ಆಗಿ ಆಯ್ಕೆಯಾಗಬೇಕು. ಅದು ನನ್ನ ಆಶಯ. ಉತ್ತಮ ಶಿಕ್ಷಣ ಹೊಂದಿರುವ ನಾಯಕರು ರಾಜಕೀಯಕ್ಕೆ ಬರಬೇಕು ಎಂದು ನೀವು ಯೋಚಿಸುತ್ತೀರಾ? ಎಂದು ನಟ ಪ್ರಶ್ನಿಸಿದರು.
ತಮ್ಮ ದಾರಿಯಲ್ಲಿ ಬರುವ ಪ್ರತಿಯೊಂದು ಮಾಹಿತಿಯನ್ನು ಕ್ರಾಸ್-ಚೆಕ್ ಮಾಡಲು ಕೇಳಿಕೊಂಡ ನಟ, “ಸೋಷಿಯಲ್ ಮೀಡಿಯಾ ಚಾನಲ್ಗಳು ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ನಮಗೆ ಅನೇಕ ವಿಷಯಗಳನ್ನು ನೀಡುತ್ತವೆ. ಎಲ್ಲವನ್ನೂ ನೋಡಿ. ಆದರೆ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವಿಶ್ಲೇಷಿಸಿ” ಎಂದು ಕೇಳಿಕೊಂಡರು.
“ಆಗ ಮಾತ್ರ ನಮ್ಮ ರಾಷ್ಟ್ರ ಮತ್ತು ಜನರ ನೈಜ ಸಮಸ್ಯೆಗಳನ್ನು ಮತ್ತು ಸಾಮಾಜಿಕ ತೊಡಕುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೆಲ ರಾಜಕೀಯ ಪಕ್ಷಗಳು ಮತ್ತು ನಕಲಿ ಪ್ರಚಾರಗಳನ್ನು ನಂಬದೇ ಈ ವಿಷಯಗಳನ್ನು ಅರಿತುಕೊಂಡರೆ, ನೀವೆಲ್ಲರೂ ವಿಶಾಲ ಚಿಂತನೆ ಮಾಡಲು ಸಾಧ್ಯವಾಗುತ್ತದೆ. ಆಗ ಮಾತ್ರ ಉತ್ತಮ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಇದಕ್ಕಿಂತ ದೊಡ್ಡ ರಾಜಕೀಯ ಬೇರೊಂದಿಲ್ಲ” ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಇನ್ನೂ ತಮಿಳುನಾಡಿನಲ್ಲಿ ಯುವಕರ ಡ್ರಗ್ಸ್ ಸೇವನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಜಯ್, “ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಡ್ರಗ್ಸ್ ಯುವಕರಿಗೆ ಸಾಮಾನ್ಯವಾಗಿಬಿಟ್ಟಿದೆ. ರಾಜಕೀಯ ನಾಯಕನಾಗಿ ಮತ್ತು ಪೋಷಕರಾಗಿ ನನಗೂ ಭಯವಾಗಿದೆ. ಡ್ರಗ್ಸ್ ಅನ್ನು ನಿಯಂತ್ರಿಸುವುದು, ಯುವಕರನ್ನು ಉಳಿಸುವುದು ಸರ್ಕಾರದ ಜವಾಬ್ದಾರಿ. ಪ್ರಸ್ತುತ ಸರ್ಕಾರ ಅದರಲ್ಲಿ ವಿಫಲವಾಗಿದೆ” ಎಂದು ಆಕ್ರೋಶ ಹೊರ ಹಾಕಿದರು.
ಅದರ ಬಗ್ಗೆ ಮಾತನಾಡಲು ನಾನು ಇಲ್ಲಿಲ್ಲ. ಅದಕ್ಕಿದು ವೇದಿಕೆ ಕೂಡ ಅಲ್ಲ. ಸರ್ಕಾರಕ್ಕಿಂತ ಹೆಚ್ಚಾಗಿ, ನಾವು ನಮ್ಮನ್ನು ನೋಡಿಕೊಳ್ಳಬೇಕು. ಡ್ರಗ್ಸ್ ಬೇಡ. ತಾತ್ಕಾಲಿಕ ಸಂತೋಷಕ್ಕೆ ನೋ ಎಂದು ಹೇಳಿ. ಇದನ್ನು ಪ್ರಮಾಣವಾಗಿ ತೆಗೆದುಕೊಳ್ಳಿ” ಎಂದು ಹೇಳಿದರು.
ಕ್ರೀಡೆ
ವಾಂಖೆಡೆ ಸ್ಟೇಡಿಯಂನಲ್ಲಿ ಕರೀನಾ ಸಿಟ್ಟು – ವೈರಲ್ ವಿಡಿಯೋ ಸದ್ದು!
ಮುಂಬೈ: ಬಾಲಿವುಡ್ನ ಸ್ಟೈಲಿಶ್ ಜೋಡಿ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ತಮ್ಮ ಮಕ್ಕಳೊಂದಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಆಗಮಿಸಿದ್ದು ಗಮನ ಸೆಳೆದಿದೆ. ಈ ವೇಳೆ ನೀಲಿ ಬಣ್ಣದ ಜರ್ಸಿ ಧರಿಸಿ ಗ್ಯಾಲರಿಯಲ್ಲಿ ಕುಳಿತು ತಂಡಕ್ಕೆ ಉತ್ಸಾಹ ತುಂಬುತ್ತಿರುವುದು ಕಾಣಿಸಿಕೊಂಡಿತು.
ಆದರೆ, ಪಂದ್ಯದ ಮಧ್ಯೆ ನಡೆದ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಿಫ್ಟ್ಗಾಗಿ ಕಾಯುತ್ತಿರುವ ವೇಳೆ ಕರೀನಾ ಕಪೂರ್ ಸುತ್ತ ಅಭಿಮಾನಿಗಳು ಸೆಲ್ಫಿಗಾಗಿ ಗುಂಪುಗೂಡಿದ್ದು, ಇದರಿಂದ ಅವರು ಕಿರಿಕಿರಿಗೊಂಡಂತೆ ಕಾಣಿಸಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಅವರು ಯಾರೋ ವ್ಯಕ್ತಿಯ ಮೇಲೆ ಸಿಟ್ಟಾಗಿರುವಂತೆ ಕಾಣುತ್ತಿದ್ದು, ಸೈಫ್ ಅಲಿ ಖಾನ್ ಕೂಡ “ಏನಾಯಿತು?” ಎಂದು ಪ್ರಶ್ನಿಸುವ ದೃಶ್ಯ ಕಾಣಿಸುತ್ತದೆ.
ಯಾರ ಮೇಲೆ ಕರೀನಾ ಕೋಪಗೊಂಡಿದ್ದರು ಎಂಬುದು ಸ್ಪಷ್ಟವಾಗಿಲ್ಲದಿದ್ದರೂ, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ನಂತರ ಅವರು ಕುಟುಂಬದೊಂದಿಗೆ ಪಂದ್ಯವನ್ನು ಸಂತೋಷದಿಂದ ವೀಕ್ಷಿಸುತ್ತಿರುವುದು ಕಂಡುಬಂದಿದೆ.
ಇದಕ್ಕೂ ನಡುವೆ, ಐಪಿಎಲ್ 2026 ಪಂದ್ಯಗಳು ಜೋರಾಗಿ ಸಾಗುತ್ತಿವೆ. ಇತ್ತೀಚಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಸಾಧಿಸಿದೆ. ಇನ್ನೊಂದು ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.
ಚಿತ್ರರಂಗದ ವಿಚಾರದಲ್ಲಿ, ಕರೀನಾ ಕಪೂರ್ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದು, Singham Again ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.
ದೇಶ
‘ಜನ ನಾಯಕನ್’ ವಿಳಂಬ: ರಜನಿಕಾಂತ್ ಶಾಕಿಂಗ್ ರಿಯಾಕ್ಷನ್!
ಚೆನ್ನೈ: ಕಾಲಿವುಡ್ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ Jana Nayagan ಚಿತ್ರದ ಬಿಡುಗಡೆ ವಿಳಂಬವಾಗಿರುವುದು ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. ದಳಪತಿ Thalapathy Vijay ಅಭಿನಯದ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ಈ ಚಿತ್ರ ಮೊದಲು ಜನವರಿ 9ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ Central Board of Film Certification ತಾಂತ್ರಿಕ ಕಾರಣಗಳಿಂದ ಬಿಡುಗಡೆ ಮುಂದೂಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಳಿದಾಗ ಸೂಪರ್ಸ್ಟಾರ್ Rajinikanth, “ಈ ವಿಷಯದ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡಲು ಇಷ್ಟಪಡುವುದಿಲ್ಲ” ಎಂದು ಹೇಳಿ ಮೌನ ವಹಿಸಿದ್ದಾರೆ. ಅವರ ಈ ಪ್ರತಿಕ್ರಿಯೆ ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಇದೀಗ ಚಿತ್ರತಂಡ ಜೂನ್ 2026ರಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜೂನ್ 18ರಂದು ಬಿಡುಗಡೆಯಾಗುವ ಸಾಧ್ಯತೆ ಇದ್ದು, ಜೂನ್ 22ರಂದು ವಿಜಯ್ ಅವರ ಹುಟ್ಟುಹಬ್ಬ ಇರುವುದರಿಂದ ಈ ದಿನಾಂಕಕ್ಕೆ ವಿಶೇಷ ಮಹತ್ವ ಬಂದಿದೆ.
ಈ ನಡುವೆ ರಜನಿಕಾಂತ್ ಅವರು ತಮ್ಮ ಬ್ಲಾಕ್ಬಸ್ಟರ್ ಚಿತ್ರ Jailer ಸೀಕ್ವೆಲ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲ ಭಾಗ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದ್ದು, ಈಗ ಸೀಕ್ವೆಲ್ ಮೇಲೂ ಹೆಚ್ಚಿನ ನಿರೀಕ್ಷೆ ಇದೆ.
ಈ ಸೀಕ್ವೆಲ್ನಲ್ಲಿ Mohanlal ಮತ್ತು Vijay Sethupathi ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಗೀತವನ್ನು Anirudh Ravichander ನೀಡುತ್ತಿದ್ದಾರೆ.
ಒಟ್ಟಿನಲ್ಲಿ, ವಿಜಯ್ ಚಿತ್ರದ ವಿಳಂಬ ಮತ್ತು ರಜನಿಕಾಂತ್ ಅವರ ‘ಜೈಲರ್ 2’ ಸದ್ದು ಎರಡೂ ಸೇರಿ ತಮಿಳು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿವೆ.
ದೇಶ
4 ಗಂಟೆಗೂ ಬೋರ್ ಇಲ್ಲ: ಕೊಹ್ಲಿ ರಿವ್ಯೂ ವೈರಲ್
ಬೆಂಗಳೂರು, ಎ.7: ನಿರ್ದೇಶಕ Aditya Dhar ಅವರ ಭರ್ಜರಿ ಸಿನಿಮಾ Dhurandhar-2 ಇದೀಗ ಬಾಕ್ಸ್ ಆಫೀಸ್ನಲ್ಲಿ ದಾಖಲೆ ನಿರ್ಮಿಸುತ್ತಿದೆ. ನಟ Ranveer Singh ಅಭಿನಯದ ಈ ಚಿತ್ರ ಈಗಾಗಲೇ ಭಾರತದಲ್ಲಿ ₹985 ಕೋಟಿಗೂ ಅಧಿಕ ಗಳಿಕೆ ಮಾಡಿ, ಸಾವಿರ ಕೋಟಿ ಕ್ಲಬ್ ಸೇರುವತ್ತ ದೌಡಾಯಿಸುತ್ತಿದೆ.
ಚಿತ್ರದ ಯಶಸ್ಸಿಗೆ ಮತ್ತಷ್ಟು ಬಲ ನೀಡುವಂತೆ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ Virat Kohli ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯೆ ನೀಡಿದ ಕೊಹ್ಲಿ, “ಭಾರತದಲ್ಲಿ ಇಂತಹ ಸಿನಿಮೀಯ ಅನುಭವವನ್ನು ನಾನು ನೋಡಿಲ್ಲ. ನಾಲ್ಕು ಗಂಟೆಗಳ ಕಾಲ ಒಂದೇ ಕ್ಷಣವೂ ಬೋರ್ ಆಗಲಿಲ್ಲ. ನಿರ್ದೇಶಕ ಆದಿತ್ಯ ಧರ್ ಅವರ ಪ್ರತಿಭೆ ಅದ್ಭುತ. ಆದರೆ ರಣವೀರ್ ಸಿಂಗ್ ಅಭಿನಯ ಈ ಚಿತ್ರದಲ್ಲಿ ಹೊಸ ಮಟ್ಟ ತಲುಪಿದೆ” ಎಂದು ಪ್ರಶಂಸಿಸಿದ್ದಾರೆ.
Dhurandhar-2 ಮೊದಲ ದಿನವೇ ₹102 ಕೋಟಿ ಗಳಿಸಿ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಎರಡನೇ ದಿನ ₹80.72 ಕೋಟಿ ಸಂಗ್ರಹಿಸಿದೆ. ಬಿಡುಗಡೆಗೂ ಮುನ್ನವೇ ಪ್ರೀಮಿಯರ್ ಶೋಗಳಲ್ಲಿ ₹43 ಕೋಟಿ ಗಳಿಕೆ ಕಂಡಿದ್ದು, ತಾಂತ್ರಿಕ ಸಮಸ್ಯೆಗಳಿದ್ದರೂ ಅಭಿಮಾನಿಗಳ ಸ್ಪಂದನೆ ಕಡಿಮೆಯಾಗಲಿಲ್ಲ. ಅಡ್ವಾನ್ಸ್ ಬುಕ್ಕಿಂಗ್ನಲ್ಲಿ 15 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿರುವುದು ಚಿತ್ರದ ಜನಪ್ರಿಯತೆಯನ್ನು ತೋರಿಸುತ್ತದೆ.
ಚಿತ್ರದಲ್ಲಿ R. Madhavan, Arjun Rampal, Sanjay Dutt, Sara Arjun ಮತ್ತು Rakesh Bedi ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆಯುತ್ತಿದೆ.
-
ಅಪರಾಧ8 hours agoಐಪಿಎಲ್ ಟಿಕೆಟ್ ಕಾಳಸಂತೆ: KSCA ಸದಸ್ಯ ಸೇರಿ FIR!
-
ಅಪರಾಧ9 hours agoTCS Nashik Case : ಗರ್ಭಿಣಿ ಎಂದು ಹೇಳಿ ಜಾಮೀನು ಅರ್ಜಿ!
-
ದೇಶ11 hours ago“ನಾನು ಶಿಸ್ತು ಪಾಲಿಸಿದ್ದೇನೆ” – ಜಮೀರ್ ತಿರುಗೇಟು
-
ಅಪರಾಧ3 hours agoಯೋಗೇಶ್ ಗೌಡ ಹತ್ಯೆ: ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ
-
ದೇಶ9 hours ago“PoK ಭಾರತದ್ದೇ” – ಬಿಜೆಪಿ ನಾಯಕ ನರ್ಸಯ್ಯ ಹೇಳಿಕೆ
-
ದೇಶ9 hours agoಟ್ರಾಫಿಕ್ ಸಮಸ್ಯೆಗೆ ದೊಡ್ಡ ಪರಿಹಾರ: 75 ಕಿಮೀ ಎಲಿವೇಟೆಡ್ ರಸ್ತೆ
-
ದೇಶ11 hours agoಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಜಾತ್ರೆ!
-
ದೇಶ6 hours ago“ಪುನರ್ವಿಂಗಡಣೆ = ರಾಜಕೀಯ ನೋಟು ಅಮಾನ್ಯೀಕರಣ!” ತರೂರ್ ಟೀಕೆ
