ದೇಶ

ರಾಮಪಥದಲ್ಲಿ ಗುಂಡಿ, ಮಂದಿರದಲ್ಲಿ ಸೋರಿಕೆ: 6 ಅಧಿಕಾರಿಗಳ ಅಮಾನತು

ಅಯೋಧ್ಯೆ: ಉತ್ತರ ಪ್ರದೇಶಕ್ಕೆ ಮುಂಗಾರು ಪ್ರವೇಶಿಸುತ್ತಿದ್ದಂತೆ ಇತ್ತೀಚೆಗಷ್ಟೇ ನಿರ್ಮಾಣವಾದ ಅಯೋಧ್ಯೆಯ ರಾಮಪಥದಲ್ಲಿ ಗುಂಡಿಗಳು ಬಿದ್ದಿವೆ, ಮಳೆಯ ಪರಿಣಾಮ ರಸ್ತೆಗಳಲ್ಲಾ ಜಲಾವೃತವೂ ಆಗಿದ್ದು, ಇದಕ್ಕೆ ಸಂಬAಧಿಸಿದAತೆ ಉತ್ತರ ಪ್ರದೇಶ ಸರ್ಕಾರ ನಿರ್ಲಕ್ಷದ ಕಾರಣ ನೀಡಿ ಪಾಲಿಕೆಯ 6 ಅಧಿಕಾರಿಗಳನ್ನು ಅಮಾನತುಗೊಳಿಸಿದೆ,
ಜೂನ್ 23 ಹಾಗೂ ಜೂನ್ 25 ರ ನಡುವೆ ಸುರಿದ ಭಾರೀ ಮಳೆಗೆ ಕೇವಲ 6 ತಿಂಗಳ ಹಿಂದೆ ನಿರ್ಮಾಣವಾದ ರಾಮಪಥ ಭಾಗಶಃ ಹಾನಿಯಾಗಿದೆ, ರಾಮಪಥದ ಉದ್ದಕ್ಕೂ ಸುಮಾರು 15 ಬೈಲೇನ್‌ಗಳು ಮತ್ತು ಬೀದಿಗಳು ಜಲಾವೃತಗೊಂಡಿದೆ. ರಸ್ತೆಯ ಬದಿಗಳಲ್ಲಿನ ಹಲವಾರು ಮನೆಗಳು ಕೂಡಾ ನೀರಿನಲ್ಲಿ ಮುಳುಗಿವೆ, 14 ಕಿ.ಮೀ ಉದ್ದದ ರಸ್ತೆಯ ವಿಸ್ತರಣೆಗೊಂಡ 12 ಕ್ಕೂ ಹೆಚ್ಚು ಸ್ಧಳಗಳಲ್ಲಿ ಕುಸಿತಗೊಂಡಿದೆ,
ಇತ್ತ ಇದೇ ವರ್ಷ ಜನವರಿಯಲ್ಲಿ ಉದ್ಘಾಟನೆಗೊಂಡ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲೂ ಮಳೆಯಿಂದಾಗಿ ಸೋರಿಕೆಯ ಆರೋಪಗಳ ಕೇಳಿಬಂದಿದೆ, ಮಂದಿರ ನಿರ್ಮಾಣದಲ್ಲಿ ನಿರ್ಲಕ್ಷö್ಯ ವಹಿಸಿದ್ದಾರೆ ಎಂದು ಆರೋಪಿಸಿರುವ ರಾಮಜನ್ಮಭೂಮಿ ದೇವಸ್ಧಾನದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಶನಿವಾರ ಮಧ್ಯರಾತ್ರಿ ಸುರಿದ ಮಳೆಯಿಂದ ಸೋರಿಕೆ ಉಂಟಾಗಿದ್ದು, ದೇವಾಲಯದ ಅವರಣದಿಂದ ಮಳೆ ನೀರು, ಹರಿದು ಹೋಗಲು ಯಾವುದೇ ವ್ಯವಸ್ಧೆಯನ್ನು ಮಾಡಲಾಗಿಲ್ಲ ಎಂದು ಸೋಮವಾರ ಆರೋಪಿಸಿದ್ದಾರೆ, ಮತ್ತು ದೇವಾಲಯದ ಅಧಿಕಾರಿಗಳು ಇದನ್ನೆಲ್ಲಾ ಸರಿಪಡಿಸುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ,

Trending

Exit mobile version