ಅಪರಾಧ

ಆತ್ಮಹತ್ಯೆಗೆ ಯತ್ನಿಸಿದ ಒಡತಿಯ ಜೀವ ಕಾಪಾಡಿದ ಸಾಕು ನಾಯಿ

ದಕ್ಷಿಣ ಕನ್ನಡ: ಗಂಡನ ಜೊತೆ ಜಗಳವಾಡಿ ನೇತ್ರಾವತಿ ನದಿಗೆ ಹಾರಲು ಯತ್ನಿಸಿದ ಮಹಿಳೆಯನ್ನು ರಕ್ಷಿಸಿದ್ದಾರೆ, ಮಹಿಳೆ ಪ್ರಾಣ ಕಾಪಾಡುವಲ್ಲಿ ಅವರ ಮನೆಯ ನಾಯಿತ ನಿಯತ್ತು ಕಾರಣವಾಗಿದೆ,
ಅಂದಹಾಗೆ ಈ ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ, 16 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದ ಜೋಡಿಯ ನಡುವೆ ವಿರಸ ಮೂಡಿದ್ದು, ಗುರುವಾರ ರಾತ್ರಿ ಗಂಡ ಹೆಂಡತಿಯ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ, ಇದರಿಂದ ಬೇಡರಗೊಂಡ ಮಹಿಳೆ ಮನೆಯಿಂದ ನಾಲ್ಕು ಕಿ.ಮೀ ದೂರದ ಉಪ್ಪಿನಂಗಡಿಗೆ ನಡೆದುಕೊಂಡೇ ಬಂದು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಲು ಸೇತುವೆ ಮೇಲೆ ಕುಳಿತಿದ್ದರು, ಇದನ್ನು ಗಮನಿಸಿ ಸಂಶಯಗೊಂಡ ಬೈಕ್ ಸವಾರರೊಬ್ಬರು, ಈ ಬಗ್ಗೆಯ ಸ್ಧಳೀಯ ಸಾಮಾಜಿಕ ಮುಂದಾಳು ಯು.ಟಿ.ಫಯಾಜ್ ಅವರಿಗೆ ವಿಷಯ ತಿಳಿಸಿದರು,
ತಕ್ಷಣವೇ ಸ್ಧಳಕ್ಕೆ ಧಾವಿಸಿದ ಫಯಾಜ್ ಸೇತುವೆಯ ದಂಡೆಯಲ್ಲಿ ಕುಳಿತು ಇನ್ನೇನು ಹಾರಬೇಕೆನ್ನುವಂತಿದ್ದ ಮಹಿಳೆಯನ್ನು ಎಳದು ರಕ್ಷಿಸಿದರು, ಬಳಿಕ ಸಮೀಪದಲ್ಲೇ ಇರುವ ತನ್ನ ಮನೆಗೆ ಕರೆದೊಯ್ದು ಕುಟುಂಬಸ್ಧರೊಂದಿಗೆ ಸಂತೈಸಿ ನಂತರ ಸ್ಧಳೀಯರ ನೆರವಿನೊಂದಿಗೆ ಪೊಲೀಸರಿಗೊಪ್ಪಿಸಿದರು,
ಮಹಿಳೆಯು ಜಗಳವಾಡಿ ಮನೆಯಿಂದ ಹೊರಬಿದ್ದ ತಕ್ಷಣ ನಾಯಿಯೂ ಕೂಡ ಅವರನ್ನು ಹಿಂಬಾಲಿಸಿದೆ, ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಏನೋ ಸಮಸ್ಯೆ ಇರಬಹುದು ಎಂದು ಸಂಶಯಗೊಂಡು, ಫಯಾಜ ಎಂಬುವರಿಗೆ ಕರೆ ಮಾಡಿದ್ದಾನೆ, ಮಹಿಳೆಯ ಪ್ರಾಣ ಉಳಿಸುವಲ್ಲಿ ನಾಯಿಯ ಪಾತ್ರವೂ ಇದೆ ಎಂದು ಫಯಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ,

Trending

Exit mobile version