ದೇಶ

Breakin News : ಮಾಜಿ ಸಿಎಂ ವೈಎಸ್‍ಆರ್ ಪ್ರತಿಮೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು!

ಆಂಧ್ರಪ್ರದೇಶ: ಇಲ್ಲಿನ ಬಾಪಟ್ಲಾ ಜಿಲ್ಲೆಯಲ್ಲಿನ ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಪ್ರತಿಮೆಯ್ನು ಧ್ವಂಸ ಮಾಡಲಾಗಿದೆ,
ಬಾಪಟ್ಲಾ ಜಿಲ್ಲೆಯ ಅಡ್ಡೆಪಳ್ಳಿ ಎಂಬ ಗ್ರಾಮದಲ್ಲಿ ರಾಜಶೇಖರ್ ರೆಡ್ಡಿ ಅವರ ಮೂರ್ತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ, ಅಲ್ಲದೆ ತೆಲುಗು ದೇಶಂ ಪಾರ್ಟಿಯ ಧ್ವಜಸ್ಧಂಬವನ್ನು ಧ್ವಂಸಗೊಳಿಸಿದ್ದಾರೆ ಎಂದು ಡಿಎಸ್‍ಪಿ ಮುರಳಿ ಕೃಷ್ಣ ದೃಢಪಡಿಸಿದ್ದಾರೆ,
ಕಿಡಿಗೇಡಿಗಳ ಈ ಕುಕೃತ್ಯದ ಹಿಂದಿನ ಉದ್ದೇಶ ತಿಳಿದುಬಂದಿಲ್ಲವಾದರೂ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು ಅವರನ್ನು ಅದಷ್ಟು ಬೇಗ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ
ಆಂಧ್ರಪ್ರದೇಶ ಇದೀಗ ಜಗನ್ ರೆಡ್ಡಿಯವರ ವೈಎಸ್‍ಆರ್ ಕಾಂಗ್ರೆಸ್ ಸೋತು ಸುಣ್ಣವಾಗಿದ್ದು, ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಆಡಳಿತ ನಡುಸುತ್ತಿದ್ದಾರೆ, ಈ ಮಧ್ಯೆ ವೈಎಸ್‍ಆರ್ ಪ್ರತಿಮೆ ಹಾಗೂ ಟಿಡಿಪಿಯ ಧ್ವಜಸ್ಧಂಬಕ್ಕೆ ಹಾನಿ ಮಾಡಿರುವವರ ಉದ್ದೇಶ ಏನೆಂಬುದು ಚರ್ಚೆಗೆ ಗ್ರಾಸವಾಗಿದ,

Trending

Exit mobile version