ಕ್ರೀಡೆ

ರಾಹುಲ್​ ದ್ರಾವಿಡ್​ಗೆ ಅಭಿನಂದನೆಗಳ ಸುರಿಮಳೆ..​ ಹೆಮ್ಮೆಯ ಕನ್ನಡಿಗನ ಬಗ್ಗೆ PM ಮೋದಿ ಏನಂದ್ರು?

2024ರ T20 ವಿಶ್ವಕಪ್​ ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 7 ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಸದ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ಸೇರಿದಂತೆ ಸಹ ಆಟಗಾರರಿಗೆ ಎಲ್ಲೆಡೆಯಿಂದ ಅಭಿನಂದನೆಗಳು ಹರಿದು ಬರುತ್ತಿವೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಕನ್ನಡಿಗ ರಾಹುಲ್ ದ್ರಾವಿಡ್​ ಅವರಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

ಪ್ರಧಾನಿ ಮೋದಿಯವರು T20 ವಿಶ್ವಕಪ್ ಅನ್ನು ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತ ತಂಡದ ಕೋಚ್​ ರಾಹುಲ್ ದ್ರಾವಿಡ್ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಅದ್ಭುತವಾದ ಕೋಚಿಂಗ್ ಪ್ರಯಾಣದಿಂದ ಭಾರತ ತಂಡ ಇಂದು ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಿಮ್ಮ ಡೆಡಿಕೆಷನ್, ಕಾರ್ಯತಂತ್ರದಿಂದ ಒಳ್ಳೆಯ ಪ್ರತಿಭೆಗಳನ್ನ ತಂಡದಲ್ಲಿ ಗುರುತಿಸಿದ್ದೀರಿ. ಈ ಕೊಡುಗೆ ಹಾಗೂ ಸ್ಪೂರ್ತಿ ಮುಂದಿನ ಜನರೇಶನ್​ಗೂ ಸಲ್ಲುತ್ತದೆ. ಭಾರತ ವಿಶ್ವಕಪ್​ ಎತ್ತಿ ಹಿಡಿದಿರುವುದಕ್ಕೆ ನಮಗೆಲ್ಲ ತುಂಬಾ ಖುಷಿ ತಂದಿದೆ. ಆಟಗಾರರನ್ನು ಅಭಿನಂದಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಪ್ರಧಾನಿ ಮೋದಿಯವರು ಎಕ್ಸ್​ ಅಕೌಂಡ್​ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

ಟಿ20 ವಿಶ್ವಕಪ್​ ಗೆಲುವಿನೊಂದಿಗೆ ರಾಹುಲ್​ ದ್ರಾವಿಡ್​ರ ಕೋಚ್​​ ಅವಧಿ ಅಂತ್ಯವಾಗಿದೆ. ನಿರ್ಗಮಿಸ್ತಾ ಇರುವ ಹೆಡ್​​ ಮಾಸ್ಟರ್​ಗೆ ಗೆಲುವಿನ ಉಡುಗೊರೆ ನೀಡಿರುವ ಕ್ರಿಕೆಟರ್ಸ್​, ಮೈದಾನದಲ್ಲೇ ಅವರನ್ನು ಎತ್ತಾಡಿಸಿ ವಿಶೇಷ ಗೌರವ ಸಲ್ಲಿಸಿದರು. ಟ್ರೋಫಿ ಕೈಗೆ ಸಿಕ್ಕ ಬಳಿಕ ಆಟಗಾರರ​ ಸಂತೋಷಕ್ಕೆ ಪಾರವೇ ಇರಲಿಲ್ಲ. ಮೈದಾನದಲ್ಲಿ ಸಖತ್​ ಸ್ಟೆಪ್ಸ್​ ಹಾಕಿ ಮಿಂಚಿದ್ರು. ರಾಹುಲ್ ದ್ರಾವಿಡ್ ಕೂಡ ಟ್ರೋಫಿಯನ್ನು ಒಮ್ಮೆ ಎತ್ತಿ ಎಲ್ಲ ಆಟಗಾರರೊಂದಿಗೆ ಸಂಭ್ರಮಿಸಿದರು.

Trending

Exit mobile version