ಅಪರಾಧ

ದರ್ಶನ್ ಭೇಟಿಯಾದ ಕುಟುಂಬ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟ ದರ್ಶನ್ ಅವರನ್ನು ಇಡೀ ಕುಟುಂಬ ಗೌಪ್ಯವಾಗಿ ಭೇಟಿ ಮಾಡಿದೆ, ಈ ಮೂಲಕ ಜೈಲು ನಿಯಮ ಮೀರಿ ದರ್ಶನ್ ಗೆ ರಾಜತಿಥ್ಯ ನೀಡಲಾಗುತ್ತಿದೆಯೇ ಎಂಬ ಚರ್ಚೆ ಆರಂಭವಾಗಿದ,
ಸೋಮವಾರ ಬೆಳಗ್ಗೆ ದರ್ಶನ್ ತಾಯಿ ಮೀನಾ, ತಮ್ಮ ದಿನಕರ್, ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಮಾಧ್ಯಮಗಳ ಕಣ್ಣು ತಪ್ಪಿಸಿ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದಾರೆ
ಬಂಧಿಖಾನೆ ಇಲಾಖೆ ಕಾನೂನು ಗಳಿಗೆ ತೂರಿ ರಾಜಾತಿಥ್ಯ ನೀಡಲಾಗುತ್ತಿದ್ದು, ದರ್ಶನ್ ಕುಟುಂಬದವರನ್ನು ಸ್ವತಃ ಪೊಲೀಸರಿಗೆ ಖುದ್ದಾಗಿ ಒಳಗೆ ಕರೆದೊಯ್ದು ಭೇಟಿ ಮಾಡಿಸಿದ್ದಾರೆ,
ಸುಮಾರು 10 ಗಂಟೆಗೆ ಸುಮಾರಿಗೆ ಜೈಲು ಬಳಿ ಬಂದ ದರ್ಶನ್ ಕುಟುಂಬದ ಸದಸ್ಯರನ್ನು ಪೊಲೀಸ್ ಹೆಡ್ ಕಾನ್ಸ್‍ಟೇಬ್ಲ ಉದಯ್ ಎಂಬುವವರು ಒಳಗೆ ಕರೆದೊಯ್ದಿದ್ದಾರೆ, ಕೆಲವು ದಿನಗಳ ಹಿಂದೆಯಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರನ್ನು ಉದಯ್ ದರ್ಶನ್ ಅವರನ್ನು ಭೇಟಿ ಮಾಡಿಸಿದ್ದರು,

Trending

Exit mobile version