ದೇಶ

5 ತಿಂಗಳಿಗೆ ಭಾರತ್ ರೈಸ್ ಯೋಜನೆಗೆ ಟಾಟಾ ಹೇಳಿದ ಸರ್ಕಾರ!

ಬೆಂಗಳೂರು: ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಭಾರತ್ ಅಕ್ಕಿ ಜುಲೈನಿಂದ ತಾತ್ಕಾಲಿಕವಾಗಿ ಸ್ಧಗಿತಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ, ಈ ಯೋಜನೆ ಮೂಲಕ 29 ರೂ.ಗೆ ಅಕ್ಕಿ, 27.30 ರೂ.ಗೆ ಗೋಧಿಹಿಟ್ಟು ಹಾಗೂ 60 ರೂ.ಗೆ ಕಡ್ಡಬೇಳೆ ವಿತರಣೆ ಮಾಡಲಾಗುತ್ತಿತ್ತು,
ಕೇಂದ್ರ ಸರ್ಕಾರ 2024ರ ಫೆ.2 ರಂದು ಭಾರತ್ ಅಕ್ಕಿ ವಿತರಣೆ ಆರಂಭಿಸಿತ್ತು, ರಾಜ್ಯದೆಲ್ಲೆಡೆ ಮೊಬೈಲ್ ವ್ಯಾನ್‌ಗಳ ಮೂಲಕ ಅಕ್ಕಿ ಮಾರಾಟ ಮಾಡಲಾಗುತ್ತಿತ್ತು, ಜತೆಗೆ ರಿಲಾಯನ್ಸ್ ಜಿಯೋ ಮಾರ್ಟ್ ಸೇರಿ ಹಲವು ಮಾಲ್‌ಗಳಲ್ಲಿ ಭಾರತ್ ಅಕ್ಕಿ ಮಾರಾಟ ಮಾಡಲಾಗುತ್ತಿತ್ತು, ಹೀಗಾಗಿ ಭಾರತ್ ಅಕ್ಕಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆಯಿತ್ತು,
ಕಳೆದ ವರ್ಷ ಮಳೆಯ ಕೊರತೆಯಿಂದ ಭತ್ತದ ಉತ್ಪಾದನೆ ಕುಂಠಿತಗೊAಡಿತ್ತು, ಹೀಗಿರುವಾಗ 29 ರೂ ಗೆ ಭಾರತ್ ಅಕ್ಕಿ ವಿತರಿಸುವುದು ಸರಕಾರಕ್ಕೆ ಭಾರಿ ಹೊರೆ ಯಾಗುತ್ತದೆ ಎನ್ನಲಾಗಿದ್ದು ಇದರಿಂದಲ್ಲೇ ಭಾರತ್ ಅಕ್ಕಿ ವಿತರಣೆಗೆ ಬ್ರೇಕ್ ಹಾಕಲಾಗಿದೆ,

Trending

Exit mobile version