Connect with us

ಕ್ರೀಡೆ

ನಿವೃತ್ತಿ ಬೆನ್ನಲ್ಲೇ ಕೊಹ್ಲಿಗೆ ಹೊಸ ಜವಾಬ್ದಾರಿ ಹೊರಿಸಿದ ರಾಹುಲ್​ ದ್ರಾವಿಡ್​.. ಆ ಕನಸು ನನಸು ಮಾಡ್ತಾರಾ ಕಿಂಗ್​!

ಕಿಂಗ್​ಕೊಹ್ಲಿಯ ಬಹುಕಾಲದ ಕನಸು ಈ ವರ್ಷ ನನಸಾಗಿದೆ. ಕರಿಯರ್​ ಆರಂಭ ಕನಸನ್ನ ಬೆನ್ನತ್ತಿ, ಅದಕ್ಕಾಗಿ ದಣಿವರಿಯದೇ ದುಡಿದ್ರೂ ಚುಟುಕು ಚಾಂಪಿಯನ್​ ಪಟ್ಟ ಕೊಹ್ಲಿಗೆ ದಕ್ಕಿರಲಿಲ್ಲ. ಕೊನೆಗೂ ಟಿ20 ವಿಶ್ವಕಪ್​ ಗೆದ್ದಾಗಿದೆ. ಇದ್ರ ಬೆನ್ನಲ್ಲೇ ನಿರ್ಗಮಿತ ಕೋಚ್​ ರಾಹುಲ್​ ದ್ರಾವಿಡ್​, ಕಿಂಗ್​ ಕೊಹ್ಲಿ ಹೊಸ ಟಾಸ್ಕ್​ ಕೊಟ್ಟಿದ್ದಾರೆ. ದ್ರಾವಿಡ್​ ನೀಡಿರೋ ಟಾಸ್ಕ್​, ಕೊಹ್ಲಿಯ ಕಿಚ್ಚನ್ನ ಹೆಚ್ಚಿಸಿದೆ. ಆ ಟಾಸ್ಕ್​ ಏನು.? ಇಲ್ಲಿದೆ ಓದಿ.

ಸತತ ಸೋಲು, ವೈಫಲ್ಯ, ಬ್ಯಾಡ್​ ಲಕ್​. ಒಂದಾ..? ಎರಡಾ..? ಕಳೆದ 11 ವರ್ಷಗಳಿಂದ ಟೀಮ್​ ಇಂಡಿಯಾ ಐಸಿಸಿ ಟೂರ್ನಿಯಲ್ಲಿ ಅನುಭವಿಸಿದ್ದು ನಿರಾಸೆಯನ್ನ. ಪರಿಣಾಮ ಸಿಕ್ಕಿದ್ದು ಚೋಕರ್ಸ್​ ಪಟ್ಟ. ಇದೀಗ ತಂಡಕ್ಕಂಟಿದ್ದ ಎಲ್ಲಾ ಕಳಂಕಗಳಿಗೂ ಫುಲ್​ ಸ್ಟಾಫ್​ ಬಿದ್ದಿದೆ. ಬಾರ್ಬಡೋಸ್​ ಭಾರತದ ಝಂಡಾ ಹಾರಿಸಿರೋ ರೋಹಿತ್​ ಶರ್ಮಾ ಪಡೆ, ಟೀಮ್​ ಇಂಡಿಯಾವನ್ನ ಚುಟುಕು ಚಾಂಪಿಯನ್​ ಪಟ್ಟಕ್ಕೇರಿಸಿದೆ.

ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ಟೀಮ್​ ಇಂಡಿಯಾದ ದಿಗ್ಗಜರು ಟಿ20 ಫಾರ್ಮೆಟ್​ಗೆ ಗುಡ್​ ಬೈ ಹೇಳಿದ್ದಾರೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ರವೀಂದ್ರ ಜಡೇಜಾ ಟಿ20 ಇಂಟರ್​ನ್ಯಾಷನಲ್ಸ್​ಗೆ ವಿದಾಯ ಹೇಳಿದ್ರು.​ ರಾಹುಲ್​ ದ್ರಾವಿಡ್​ ಗೆಲುವಿನೊಂದಿಗೆ ಟೀಮ್​ ಇಂಡಿಯಾದ ಕೋಚ್​ ಹುದ್ದೆಯನ್ನ ತೊರೆದಿದ್ದಾರೆ. ಕೋಚ್​ ಹುದ್ದೆಯನ್ನ ತೊರೆದ ರಾಹುಲ್​ ದ್ರಾವಿಡ್​ ಸುಮ್ಮನೇ ಜಾಗ ಖಾಲಿ ಮಾಡಿಲ್ಲ. ಕಿಂಗ್​ ಕೊಹ್ಲಿಗೆ ಹೊಸ ಟಾಸ್ಕ್​ ನೀಡಿ ನಿರ್ಗಮಿಸಿದ್ದಾರೆ. ​

ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ಟಿ20 ಇಂಟರ್​ನ್ಯಾಷನಲ್ಸ್​ಗೆ ಗುಡ್​ ಬೈ ಹೇಳಿದ ಕೊಹ್ಲಿ ಬಳಿಕ ಸಂಭ್ರಮಾಚರಣೆಯಲ್ಲಿ ಮಗ್ನರಾಗಿದ್ರು. ಭಾವುಕರಾಗಿದ್ದ ಟ್ರೋಫಿ ಹಿಡಿದುಕೊಂಡು ಮೈದಾನದ ತುಂಬೆಲ್ಲಾ ಸುತ್ತಾಡಿ ಸಂಭ್ರಮಿಸಿದ್ರು. ಈ ಸಂಭ್ರಮಾಚರಣೆ ಮೈದಾನದ ಉದ್ದಗಲದಿಂದ ಹಿಡಿದು ಡ್ರೆಸ್ಸಿಂಗ್​ರೂಮ್​ನವರೆಗೂ ನಡೀತು. ಡ್ರೆಸ್ಸಿಂಗ್​ ರೂಮ್​ ಸಂಭ್ರಮಿಸ್ತಾ ಇದ್ದ ವೇಳೆಯೇ ನೋಡಿ, ಟೀಮ್​ ಇಂಡಿಯಾದ ನಿರ್ಗಮಿತ ಕೋಚ್​ ರಾಹುಲ್​ ದ್ರಾವಿಡ್​, ವಿರಾಟ್​ ಕೊಹ್ಲಿಗೆ ಒಂದು ಸ್ಪೆಷಲ್​ ಟಾಸ್ಕ್​ ನೀಡಿದ್ದು.

2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ವಿರಾಟ್​ ಕೊಹ್ಲಿ, 2011ರಲ್ಲೇ ಏಕದಿನ ವಿಶ್ವಕಪ್​ ಗೆದ್ರು. 2013ರಲ್ಲಿ ಚಾಂಪಿಯನ್ಸ್​ ಟ್ರೋಫಿ ಜಯಿಸಿದ್ರು. ಆದ್ರೆ, ಟಿ20 ವಿಶ್ವಕಪ್​ ಗೆಲ್ಲಲಾಗದ ಕೊರಗು ವಿರಾಟ್​ ಕೊಹ್ಲಿಯನ್ನ ಬಿಡದೇ ಕಾಡಿತ್ತು. ಟಿ20 ವಿಶ್ವಕಪ್​ ಟೂರ್ನಿಯ ಇತಿಹಾಸದ ಸಾಮ್ರಾಟನಾಗಿ ಮೆರೆದ್ರೂ, ರನ್​ಗಳಿಕೆಯಲ್ಲಿ ದಾಖಲೆ ಬರೆದ್ರೂ, ಕಪ್​ ಕನಸಾಗೇ ಉಳಿದಿತ್ತು. ಕೊನೆಗೂ ಆ ನಿರಾಸೆ, ಹತಾಶೆಗೆ ಈ ಬಾರಿ ಬ್ರೇಕ್​ ಬಿದ್ದಿದೆ. ಚುಟುಕು ವಿಶ್ವಕಪ್​ ಗೆದ್ದ ವಿರಾಟ್​, ವೈಟ್​ಬಾಲ್​ ಫಾರ್ಮೆಟ್​ನ ಪ್ರತಿಷ್ಟಿತ ಮೂರು ICC ಟ್ರೋಫಿಗಳನ್ನ ಗೆದ್ದ ಸಾಧನೆ ಮಾಡಿದ್ದಾರೆ. ಇದನ್ನ ದ್ರಾವಿಡ್​ ಹೇಳಿದ್ದು ALL THREE WHITES TICKED OFF ಅಂತಾ..!

ವೈಟ್​ಬಾಲ್​ ಫಾರ್ಮೆಟ್​ನಲ್ಲಿ ಮೂರೂ ಐಸಿಸಿ ಟ್ರೋಫಿಗಳನ್ನ ಗೆದ್ದ ಸಾಧನೆಯನ್ನ ವಿರಾಟ್​ ಕೊಹ್ಲಿ ಇದೀಗ ಮಾಡಿದ್ದಾಗಿದೆ. ಈಗ ಬ್ಯಾಲೆನ್ಸ್​ ಇರೋದು ಒಂದೇ ಅದೇ ಐಸಿಸಿ ಟೆಸ್ಟ್ ಚಾಂಪಿಯನ್​​ಶಿಪ್​ ಮೆಸ್​​.! ONE RED TO GO. TICK IT ಅಂತಾ ದ್ರಾವಿಡ್​ ಹೇಳಿರೋದು ಇದ್ರ ಬಗ್ಗೇನೆ. ಎರಡು ಬಾರಿ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಟೀಮ್​ ಇಂಡಿಯಾ ಪ್ರವೇಶಿಸಿದೆ. ಆದ್ರೆ, ಫೈನಲ್​ನಲ್ಲಿ ಕಪ್​ ಗೆಲ್ಲುವಲ್ಲಿ ಎಡವಿದೆ. ನಾಯಕನಾಗಿ ಒಮ್ಮೆ, ಬ್ಯಾಟ್ಸ್​ಮನ್​ ಆಗಿ ಮತ್ತೊಮ್ಮೆ ಕೊಹ್ಲಿ ಕೂಡ ಫೇಲ್​ ಆಗಿದ್ದಾರೆ.

ವಿಶ್ವ ಕ್ರಿಕೆಟ್​ ಲೋಕದಲ್ಲಿ ಆಟಗಾರನಾಗಿ, ನಾಯಕನಾಗಿ ವಿರಾಟ್​ ಕೊಹ್ಲಿ ಅಸಾಧ್ಯ ಅಂದಿದ್ದನೆಲ್ಲಾ ಸಾಧಿಸಿ ತೋರಿಸಿದ್ದಾರೆ. ದೇಶ-ವಿದೇಶಗಳಲ್ಲಿ ರನ್ ಕೊಳ್ಳೆ ಶತಕಗಳ ಮೇಲೆ ಶತಕ ಸಿಡಿಸಿದ್ದಾರೆ. ಅದ್ರಲ್ಲೂ, ಟೆಸ್ಟ್​ ಫಾರ್ಮೆಟ್ ವಿರಾಟ್​ ಕೊಹ್ಲಿಯ ಫೇವರಿಟ್​ ಫಾರ್ಮೆಟ್​.! ಈ ಫಾರ್ಮೆಟ್​​ನಲ್ಲಿ ಕಪ್​​ ಗೆಲ್ಲಲೇಬೇಕು ಅನ್ನೋ ಹಂಬಲ ಕೊಹ್ಲಿಗೂ ಇದೆ. ಇದೀಗ ದ್ರಾವಿಡ್​ ಟಾಸ್ಕ್​ ಬೇರೆ ನೀಡಿದ್ದಾರೆ. ಇದು ಕೊಹ್ಲಿಯಲ್ಲಿ ಟೆಸ್ಟ್​ ಚಾಂಪಿಯನ್​ಶಿಪ್​ ಮೆಸ್​ ಗೆಲ್ಲೋ ಕನಸಿಗೆ ಕಿಚ್ಚು ಹಚ್ಚಿರೋದ್ರಲ್ಲಿ ಅನುಮಾನವೇ ಇಲ್ಲ.

ಕ್ರೀಡೆ

ನಾನು ಹುಚ್ಚ ಅಲ್ಲ, ರಾಯಲ್ ಚಾಲೆಂಜ್ ಕೂಡಾ ಕುಡಿಯುವುದಿಲ್ಲ’: RCB ಖರೀದಿ ಕುರಿತ ವದಂತಿಗೆ ಡಿಕೆಶಿ ಪ್ರತಿಕ್ರಿಯೆ

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಡಳಿತ ಮಂಡಳಿಯ ಭಾಗವಾಗಲು ನನಗೆ ಆಫರ್‌ಗಳು ಬಂದಿವೆ. ಆದರೆ ನನಗೆ ಸಮಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸುವ ಕುರಿತ ಊಹಾಪೋಹಗಳ ಪ್ರಶ್ನೆಗೆ, “ನಾನು ಹುಚ್ಚನಲ್ಲ. ನಾನು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ (ಕೆಎಸ್ ಸಿಎ)ನ ಸದಸ್ಯ ಮಾತ್ರ” ಎಂದರು.

ಇದಕ್ಕೆಲ್ಲ ನನಗೆ ಸಮಯವಿಲ್ಲ. ಅಷ್ಟಕ್ಕೂ ನನಗೆ ಆರ್‌ಸಿಬಿ ಏಕೆ ಬೇಕು?. ನಾನು ರಾಯಲ್ ಚಾಲೆಂಜ್ ಕೂಡಾ ಕುಡಿಯುವುದಿಲ್ಲ. ಆದರೆ, ಆಡಳಿತ ಮಂಡಳಿಯ ಭಾಗವಾಗಲು ನನಗೆ ಆಫರ್‌ಗಳು ಬಂದಿವೆ” ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಭೀಕರ ಕಾಲ್ತುಳಿತ: ಐಪಿಎಲ್ ಚಾಂಪಿಯನ್ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ (ಜೂನ್ 4ರಂದು) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಕ್ರಿಕೆಟ್ ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ದುರಂತದ ನಂತರ ಮರುದಿನ (ಜೂನ್ 5ರಂದು) ಕರ್ನಾಟಕ ಸರ್ಕಾರ ನಗರ ಪೊಲೀಸ್ ಆಯುಕ್ತರೂ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು. ಘಟನೆಯ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಿದೆ.

ರಾಜಕೀಯ ಕೆಸರೆರಚಾಟ: ಈ ಘಟನೆಯನ್ನು ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಮಹಾ ಕುಂಭಮೇಳದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಬಿಜೆಪಿ ಏಕೆ ಒತ್ತಾಯಿಸಲಿಲ್ಲ ಎಂದು ಮರು ಪ್ರಶ್ನಿಸಿದ್ದಾರೆ.

ನಾಳೆ ಮಧ್ಯಾಹ್ನ ಹೈಕೋರ್ಟ್ ಆದೇಶ: ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತಮ್ಮ ಬಂಧನ ಕಾನೂನುಬಾಹಿರ ಎಂದು ಮಧ್ಯಂತರ ಪರಿಹಾರ ಕೋರಿ ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಸಲ್ಲಿಸಿದ್ದ ಅರ್ಜಿ ಕುರಿತ ಆದೇಶವನ್ನು ಹೈಕೋರ್ಟ್ ನಾಳೆ ಮಧ್ಯಾಹ್ನ 2.30ಕ್ಕೆ ಕಾಯ್ದಿರಿಸಿದೆ.

Continue Reading

ಕ್ರೀಡೆ

ಟೀಂ ಇಂಡಿಯಾ ಆಯ್ಕೆ, BCCI ವಿರುದ್ಧ ದಾದಾ ಕೆಂಗಣ್ಣು

ಮುಂಬೈ: ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ಹೊರಗಿಡುವ ಬಗ್ಗೆ ಮಾಜಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರೇಯಸ್ ಕಳೆದ ವರ್ಷದಿಂದ ಅದ್ಭುತ ಫಾರ್ಮ್‌ನಲ್ಲಿದ್ದಾರೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ ಪಂಜಾಬ್ ಕಿಂಗ್ಸ್ ಪರ ಅತಿ ಹೆಚ್ಚು ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಶ್ರೇಯಸ್ ಅವರನ್ನು ಮಧ್ಯಮ ಕ್ರಮಾಂಕದ ಅಗ್ರ ಸ್ಪರ್ಧಿಯಾಗಿ ಸೂಚಿಸಲಾಗಿತ್ತು ಆದರೆ ಅವರಿಗೆ ಅಂತಿಮ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಶ್ರೇಯಸ್ ಅವರನ್ನು ಅವರ ಪ್ರಸ್ತುತ ಫಾರ್ಮ್ ಆಧರಿಸಿ ಆಯ್ಕೆ ಮಾಡಬೇಕಿತ್ತು ಮತ್ತು ಅವರು “ಹೊರಗುಳಿಯುವ ಆಟಗಾರ” ಅಲ್ಲ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಕಳೆದ ಒಂದು ವರ್ಷದಿಂದ ತಮ್ಮ ಅತ್ಯುತ್ತಮ ಆಟವಾಡುತ್ತಿದ್ದಾರೆ ಮತ್ತು ಈ ತಂಡದಲ್ಲಿ ಶ್ರೇಯಸ್ ಇರಬೇಕಿತ್ತು. ಕಳೆದ ಒಂದು ವರ್ಷ ಅವರಿಗೆ ಅದ್ಭುತವಾಗಿದೆ. ಅವರು ಹೊರಗುಳಿದ ಆಟಗಾರನಲ್ಲ. ಅವರು ಈಗ ಒತ್ತಡದಲ್ಲಿ ಸ್ಕೋರ್ ಮಾಡುತ್ತಿದ್ದಾರೆ, ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದಾರೆ, ಶಾರ್ಟ್ ಬಾಲ್ ನ್ನು ಚೆನ್ನಾಗಿ ಆಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ವಿಭಿನ್ನವಾಗಿದ್ದರೂ, ಅವರು ಏನು ಮಾಡಬಹುದು ಎಂದು ನೋಡಲು ಈ ಸರಣಿಯಲ್ಲಿ ಅವರನ್ನು ತಂಡದಲ್ಲಿ ನೋಡಲು ಬಯಸುತ್ತೇನೆ” ಎಂದು ಗಂಗೂಲಿ ರೆವ್‌ಸ್ಪೋರ್ಟ್ಜ್‌ಗೆ ತಿಳಿಸಿದ್ದಾರೆ.

ಜೂನ್ 20 ರಿಂದ ಹೆಡಿಂಗ್ಲೆಯಲ್ಲಿ ಮೊದಲ ಪಂದ್ಯದಿಂದ ಪ್ರಾರಂಭವಾಗುವ ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತವು ತನ್ನ ಹೊಸ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯನ್ನು ಪ್ರಾರಂಭಿಸುತ್ತದೆ.

Continue Reading

ಕ್ರೀಡೆ

ಒಂದೇ ತಿಂಗಳಲ್ಲಿ 6 ಕ್ರಿಕೆಟಿಗರು ನಿವೃತ್ತಿ-ಲಿಸ್ಟ್ ನಲ್ಲಿದ್ದಾರೆ ಭಾರತದ ದಿಗ್ಗಜರು!

ನವದೆಹಲಿ: ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಯೊಂದಿಗೆ ಶುರುವಾದ ಸ್ಟಾರ್ ಆಟಗಾರರ ಗುಡ್ ಬೈ ಪರ್ವ ಮುಂದುವರೆದಿದೆ, ಅದರಲ್ಲೂ ಮೇ ಮತ್ತು ಜೂನ್ ತಿಂಗಳ ನಡುವೆ ಒಟ್ಟು 6 ಆಟಗಾರರು ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ,
ರೋಹಿತ್ ಶರ್ಮಾ: ಭಾರತದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಕಳೆದ ತಿಂಗಳು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು, ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಹಿಟ್ ಮ್ಯಾನ್ ಇನ್ಮುಂದೆ ಏಕದಿನದಲ್ಲಿ ಮಾತ್ರ ಟೀಮ್ ಇಂಡಿಯಾ ಪ್ರತಿನಿಧಿಸಲಿದ್ದಾರೆ,
ವಿರಾಟ್ ಕೊಹ್ಲಿ: ರೋಹಿತ್ ಶರ್ಮಾ ಬೆನ್ನಲ್ಲೇ ವಿರಾಟ್ ಕೊಹ್ಲಿನ ಕೂಡ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ, ಮೇ 12 ರಂದು ಟೆಸ್ಟ್ ಗೆ ನಿವೃತ್ತಿ ಪ್ರಕಟಿಸಿದ್ರು, ಕಿಂಗ್ ಕೊಹ್ಲಿ ಇನ್ನು ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ,
ಏಂಜೆಲೊ ಮ್ಯಾಥ್ಯೂಸ್: ಶ್ರೀಲಂಕಾ ತಂಡದ ಸ್ಟಾರ್ ಆಲ್‍ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ, ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್‍ವೆಲ್ ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ,
ಆದರೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮುಂದುವರೆಯಲಿದ್ದಾರೆ,
ಹೆನ್ರಿಕ್ ಕ್ಲಾಸೆನ್: ಸೌತ್ ಆಫ್ರಿಕಾದ ಹೊಡಿಬಡಿ ದಾಂಡಿಗ ಹೆನ್ರಿಕ್ ಕ್ಲಾಸೆನ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ, ಕೇವಲ 33 ವರ್ಷದ ಕ್ಲಾಸೆನ್, ಮುಂಬರುವ ದಿನಗಳಲ್ಲಿ ಟಿ20 ಲೀಗ್ ಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ,
ನಿಕೋಲಸ್ ಪೂರನ್: ವೆಸ್ಟ್ ಇಂಡೀಸ್ ನ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಕೂಡ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ, ಅದು ಕೂಡ 29 ನೇ ವಯಸ್ಸಿನಲ್ಲಿ ಎಂಬುದು ಅಚ್ಚರಿ.

Continue Reading

Trending