ದೇಶ
Seurity Breach : ಟೀಂ ಇಂಡಿಯಾ ಫೋಟೋ ತೆಗೆಯಲು ಮರವೇರಿದ ಅಭಿಮಾನಿ- ಭದ್ರತಾ ವೈಫಲ್ಯದ ಬಗ್ಗೆ ಟೀಕೆ!

ಟಿ-20 ವಿಶ್ವಕಪ್ ವಿಜೇತ ಭಾರತ ತಂಡದ ಸಂಭ್ರಮ ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನೆರೆದಿದ್ದು, ವೆರವಣಿಗೆಯುದ್ದಕ್ಕೂ ಅಭಿಮಾನಿಗಳು ನೆಚ್ಚಿನ ಆಟಗಾರರನ್ನು ನೋಡಲು ಮುಗಿಬಿದ್ದಿದ್ದರು,
ಸಂಭ್ರಮ-ಸಡಗರದ ನಡುವೆ ಭಾರತ ತಂಡ ವಿಶ್ವಕಪ್ ಹಿಡಿದು ಮೆರವಣಿಗೆ ಮಾಡುವ ವೇಳೆ ಅಭಿಮಾನಿಯೊಬ್ಬ ಮರದಲ್ಲಿ ಬಚ್ಚಿಟ್ಟುಕೊಂಡು ಫೋಟೋ ತೆಗೆಯಲು ಯತ್ನಿಸಿದ್ದು, ಭದ್ರತಾ ವೈಫಲ್ಯದ ಬಗ್ಗೆ ಆತಂಕ ಮೂಡಿಸಿದೆ,
ಭಾರತ ತಂಡ ಗುರುವಾರ ಮಧ್ಯಾಹ್ನ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಉಪಹಾರ ಸೇವಿಸಿದ ನಂತರ ನೇರವಾಗಿ ಮುಂಬೈಗೆ ಬಂದಿಳಿಯಿತು, ಕೆಲವು ಸಮಯ ವಿಶ್ರಾಂತಿ ಪಡೆದ ನಂತರ ಸಂಜೆ ವಾಂಖೇಡೆ ಕ್ರೀಡಾಂಗಣಕ್ಕೆ ಮೆರವಣಿಗೆ ಹೊರಟಿತು,
ಮೆರವಣಿಗೆ ವೇಳೆ ಅಭಿಮಾನಿಯೊಬ್ಬ ಆಟಗಾರರ ಫೋಟೋ ತೆಗೆಯಲು ಮರವೇರಿದ್ದ, ಇದನ್ನು ಗಮನಿಸಿದ ಆಟಗಾರರು ಕೆಲವು ಕ್ಷಣ ಆಘಾತಕ್ಕೆ ಒಳಗಾದರು,
ಮರದ ಮೇಲೆ ಬಚ್ಚಿಟ್ಟಕೊಂಡಿದ್ದ ಅಭಿಮಾನಿ ಮೊಬೈಲ್ ನಲ್ಲಿ ಫೋಟೊ ಹಾಗೂ ವೀಡಿಯೋ ತೆಗೆಯಲು ಯತ್ನಿಸಿದ, ಆಟಗಾರರು ಗಾಬರಿಗೊಂಡಿದ್ದು, ಕೂಡಲೇ ರೋಹಿತ್ ಶರ್ಮ ಮರದಿಂದ ಕೆಳಗೆ ಇಳಿಯುವಂತೆ ಆತನಿಗೆ ಸೂಚಿಸಿದರು,
ಅದೃಷ್ಟವಶಾತ್ ಯಾವುದೇ ತೊಂದರೆ ಆಗಲಿಲ್ಲ, ಆದರೆ ಮರವೇರಿದ ಅಭಿಮಾನಿಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ,