ಅಪರಾಧ
ಪೊಲೀಸರಿಗೆ ಸವಾಲಾಗಿದ್ದ ಸಮಸ್ಯೆಯನ್ನು ಬಗೆಹರಿಸಿದ ಎಮ್ಮೆ!

ಲಕ್ನೋ: ಪೊಲೀಸರಿಗೆ ಸವಾಲಾಗಿದ್ದ ಸಮಸ್ಯೆಯನ್ನು ಎಮ್ಮೆ ಕ್ಷಣಾರ್ಧದಲ್ಲಿ ಬಗೆಹರಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದಿದೆ,
ಮಹೇಶ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಯ ಅಸ್ಕರನ್ಪುರ ಗ್ರಾಮದ ನಿವಾಸಿ ನಂದಲಾಲ್ ಸರೋಜ್ ಎಂಬುವವರು ಎಮ್ಮೆ ಕಾಣೆಯಾಗಿತ್ತು, ಪುರೆ ಹರಿಕೇಶ್ ಗ್ರಾಮಕ್ಕೆ ದಾರಿ ತಪ್ಪಿ ಎಮ್ಮೆ ಹೋಗಿದ್ದು, ಅಲ್ಲಿ ಹನುಮಾನ್ ಸರೋಜ್ ಎಂಬಾತ ಅದನ್ನು ಹಿಡಿದಿಟ್ಟುಕೊಂಡಿದ್ದಾನೆ ಎಂದು ಹೇಳಲಾಗಿತ್ತು, ನಂದಲಾಲ್ ಮೂರು ದಿನಗಳ ತೀವ್ರ ಹುಡುಕಾಟದ ನಂತರ ಅಂತಿಮವಾಗಿ ಎಮ್ಮೆ ಹನುಮಾನ್ ಸರೋಜ್ ಬಳಿ ಇರುವುದನ್ನು ಪತ್ತೆಹಚ್ಚಿದ್ದಾನೆ, ಅದರೆ ಹನುಮಾನ್ ಸರೋಜ್ ಎಮ್ಮೆಯನ್ನು ಹಿಂದಿರುಗಿಸಲು ನಿರಾಕರಿಸಿದ್ದಾನೆ..
ಘಟನೆಯ ಹಿನ್ನೆಲೆಯಲ್ಲಿ ನಂದಲಾಲ್ ಮಹೇಶ್ಗಂಜ್ ಪೊಲೀಸ್ ಠಾಣೆಗೆ ತೆರಳಿ ಹನುಮಾನ್ ಸರೋಜ್ ವಿರುದ್ಧ ದೂರು ದಾಖಲಿಸಿದ್ದಾರೆ, ಆರೋಪಿಗಳಿಬ್ಬರನ್ನು ಪೊಲೀಸರು ಠಾಣೆಗೆ ಕರೆಸಿದ್ದರು, ಅದರೆ ಈ ವಿಚಾರವಾಗಿ ಹಲವು ಗಂಟೆಗಳ ಕಾಲ ಪಂಚಾಯ್ತಿ ನಡೆದರೂ ಇಬ್ಬರೂ ಎಮ್ಮೆ ತಮ್ಮದು ಎಂದು ಹೇಳಿಕೊಳ್ಳುತ್ತಿದ್ದರು,
ನಂತರ ಠಾಣೆಯ ಎಸ್ಎಚ್ಒ ಶ್ರವಣ್ ಕುಮಾರ್ ಸಿಂಗ್ ವಿವಾದವನ್ನು ಪರಿಹರಿಸಲು ಮಾರ್ಗವನ್ನು ರೂಪಿಸಿದರು, ನಿರ್ಧಾರವನ್ನು ಎಮ್ಮೆಗಳಿಗೆ ಬಿಡಬೇಕು, ಎಮ್ಮೆಯನ್ನು ಒಂಟಿಯಾಗಿ ರಸ್ತೆಯಲ್ಲಿ ಬಿಡಲಾಗುತ್ತದೆ ಅದು ಯಾರನ್ನು ಹಿಂಬಾಲಿಸುತ್ತದೆಯೋ ಅವರನ್ನು ಅದರ ಮಾಲೀಕ ಎಂದು ಘೋಷಿಸಲಾಗುತ್ತದೆ ಎನ್ನಲಾಯಿತು, ಅದಕ್ಕೆ ಇಬ್ಬರೂ ಸಹ ಒಪ್ಪಿಕೊಂಡರು,
ನಂದಲಾಲ್ ಮತ್ತು ಹನುಮಾನ್ ಇಬ್ಬರೂ ತಮ್ಮ ಗ್ರಾಮಗಳಿಗೆ ಹೋಗುವ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ನಿಂತರು, ನಂತರ ಪೊಲೀಸರು ಎಮ್ಮೆಯನ್ನು ಪೊಲೀಸ್ ಠಾಣೆಯಿಂದ ಬಿಡುಗಡೆ ಮಾಡಿದರು ಅದು ನಂದಲಾಲ್ ಅವರ ಬಳಿ ಹೋಗಿದೆ, ಅದರ ನಿರ್ಧಾರದಂತೆ ಎಮ್ಮೆಯನ್ನು ನಂದಲಾಲ್ಗೆ ಒಪ್ಪಿಸಲಾಯಿತು, ಘಟನೆಯ ಹಿನ್ನೆಲೆಯಲ್ಲಿ ಹನುಮಾನ್ಗೆ ಪೊಲೀಸರು ಮತ್ತು ಗ್ರಾಮಸ್ಧರು ಛೀಮಾರಿ ಹಾಕಿದರು,