ಕ್ರೀಡೆ
ಅಮ್ಮ ಕೇರಳ, ಅಪ್ಪ ತಮಿಳುನಾಡು: ಕರ್ನಾಟದಿಂದ ಪ್ಯಾರಿಸ್ ಒಲಿಂಪಿಕ್ಸ್ಗೆ ಮಗಳು ಆಯ್ಕೆ – Dhinidhi Desingu
ಕೋಯಿಕ್ಕೋಡ್(ಕೇರಳ): ಪ್ಯಾರಿಸ್ ಒಲಿಂಪಿಕ್ಸ್ಗೆ ಕೇರಳ ಮೂಲದ ಈಜುಪಟು ಧಿನಿಧಿ ದೇಸಿಂಗು ತೆರಳುತ್ತಿದ್ದಾರೆ. ಅವರು ದೆಹಲಿಯಲ್ಲಿಂದು ನಡೆದ ಪ್ಯಾರಿಸ್ಗೆ ತೆರಳುವ ಕ್ರೀಡಾಪಟುಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಜೊತೆಗೆ ಪ್ರಧಾನಿಯೊಂದಿಗೆ ಸಂವಾದ ಕೂಡಾ ನಡೆಸಿದರು.
ಈ ವೇಳೆ ಮಾತನಾಡಿದ ಈಜುಪಟು ಧಿನಿಧಿ ದೇಸಿಂಗು, “ನಾನು ಧಿನಿಧಿ ದೇಸಿಂಗು, ನನಗೆ ಹದಿನಾಲ್ಕು ವರ್ಷ, ನಾನು ಮೂಲತಃ ಕೇರಳದವನಾದರೂ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದೇನೆ. ಈ ಬಾರಿ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿದ್ದೇನೆ. ಇದು ನನ್ನ ಕ್ರೀಡಾ ವೃತ್ತಿಜೀವನದ ಆರಂಭವಷ್ಟೇ. ಪ್ರತಿಭಾವಂತ ಆಟಗಾರರನ್ನು ಹೊಂದಿರುವ ಭಾರತ ತಂಡದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಖಂಡಿತ, ನಾವು ದೇಶದ ಕೀರ್ತಿಯನ್ನು ಹೆಚ್ಚಿಸುತ್ತೇವೆ ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಧಿನಿಧಿ ದೇಸಿಂಗು ಯಶಸ್ಸಿಗೆ ಶುಭ ಹಾರೈಸಿದರು. ಗುಂಪಿನಲ್ಲಿದ್ದ ಪಿ.ಆರ್.ಶ್ರೀಜೇಶ್, ದೀಪಿಕಾ ಕುಮಾರಿ ಸೇರಿದಂತೆ ಹಿರಿಯ ಅಥ್ಲೀಟ್ಗಳು ಚಪ್ಪಾಳೆ ತಟ್ಟಿ ತಮ್ಮ ಗುಂಪಿನ ಯುವ ತಾರೆಯನ್ನು ಪ್ರೋತ್ಸಾಹಿಸಿದರು. ಫೋಟೋ ಸೆಷನ್ ಸಮಯದಲ್ಲಿ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಅವರು ಧಿನಿಧಿ ದೇಸಿಂಗು ಅವರನ್ನು ಕರೆದು ಮುಂದಿನ ಸಾಲಿನಲ್ಲಿ ತಮ್ಮ ಬಳಿ ನಿಲ್ಲಿಸಿಕೊಂಡರು.
ಧಿನಿಧಿ ಹಿನ್ನೆಲೆ ಏನು?: ಧಿನಿಧಿ ಕೋಯಿಕ್ಕೋಡ್ನ ಪುತ್ಯಂಗಡಿ ಮೂಲದ ಜೆಸಿತಾ ವಿಜಯನ್ ಮತ್ತು ತಮಿಳುನಾಡು ಮೂಲದ ದೇಸಿಂಗು ಅವರ ಪುತ್ರಿ. ಒಂಬತ್ತನೇ ತರಗತಿ ಓದುತ್ತಿರುವ ಧಿನಿಧಿ, ಬೆಂಗಳೂರಿನ ತಮ್ಮ ಫ್ಲಾಟ್ ಲೈಫ್ನಲ್ಲಿ ಬೋರಿಂಗ್ನಿಂದ ಪಾರಾಗಲು ಈಜುಕೊಳದಲ್ಲಿ ಈಜಲು ಪ್ರಾರಂಭಿಸಿದ್ದರು. ಈಗ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಇದಕ್ಕಾಗಿ ಸಾಕಷ್ಟು ತ್ಯಾಗ ಮಾಡಬೇಕಾಯಿತು ಎನ್ನುತ್ತಾರೆ ಧಿನಿಧಿ.
ಭಾರತೀಯ ಆಟಗಾರರು ಎ ಮತ್ತು ಬಿ ಅರ್ಹತಾ ಸುತ್ತಿನಲ್ಲೇ ಹೊರ ಬೀಳುತ್ತಾರೆ. ಆದರೆ ಧಿನಿಧಿ ಅಜೇಯರಾಗಿ ಉಳಿದಿದ್ದಾರೆ. ಧಿನಿಧಿ ರಾಷ್ಟ್ರೀಯ ಕ್ರೀಡಾಕೂಟ ಮತ್ತು ಹಿರಿಯ ರಾಷ್ಟ್ರೀಯ ಚಾಂಪಿಯನ್ ಶಿಪ್ಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಈ ಸೀಸನ್ನಲ್ಲಿ ಈಜು ಫೆಡರೇಶನ್ನ ಅತ್ಯುತ್ತಮ ಮಹಿಳಾ ಈಜುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸದ್ಯ ಧಿನಿಧಿ ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ. ಅವರು 2028 ಮತ್ತು 2032ರ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಗುರಿ ಹೊಂದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವಗಳಿಸಲು ಮತ್ತು ವಿಶ್ವ ದರ್ಜೆಯ ಕ್ರೀಡಾಪಟುಗಳಿಂದ ಕಲಿಯಲು ಎದುರು ನೋಡುತ್ತಿದ್ದಾರೆ.
ಏಳು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಈಜುಗಾರ್ತಿ ಕೇಟಿ ಲೆಡೆಕಿ ಅವರನ್ನು ಭೇಟಿಯಾಗಲು ಧಿನಿಧಿ ಉತ್ಸುಕರಾಗಿದ್ದಾರೆ. ಅವಳು ಕಳೆದ ವರ್ಷ ಲೆಡೆಕಿಗಾಗಿ ಗ್ರೀಟಿಂಗ್ ಕಾರ್ಡ್ ಅನ್ನು ಸಿದ್ಧಪಡಿಸಿದ್ದರು ಮತ್ತು ಅದನ್ನು ವೈಯಕ್ತಿಕ ಅವರಿಗೆ ಕೊಡಲು ಕಾಯುತ್ತಿದ್ದಾರೆ.
ಧಿನಿಧಿಗೆ ಶುಭ ಕೋರಿದ ಡಿಸಿಎಂ: ಮತ್ತೊಂದೆಡೆ, ಜುಲೈ 26 ರಿಂದ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್’ಗೆ ಆಯ್ಕೆಯಾಗಿರುವ ಬೆಂಗಳೂರು ಮೂಲದ ಈಜುಪಟುಗಳಾದ ಶ್ರೀಹರಿ ನಟರಾಜ್ ಹಾಗೂ ಧಿನಿಧಿ ದೇಸಿಂಗು ಅವರಿಗೆ ತುಂಬು ಹೃದಯದ ಅಭಿನಂದನೆಗಳು. 14 ವರ್ಷದ ಧಿನಿಧಿ ಅವರು ಮಹಿಳೆಯರ ವಿಭಾಗದಲ್ಲಿ, 23ರ ವರ್ಷದ ಶ್ರೀಹರಿ ಅವರು ಪುರುಷರ ವಿಭಾಗದಲ್ಲಿ ಆಯ್ಕೆಯಾಗುವ ಮೂಲಕ ಇಬ್ಬರು ಕನ್ನಡ ನೆಲದ ಪ್ರತಿಭೆಗಳು ಭಾರತವನ್ನು ಪ್ರತಿನಿಸುತ್ತಿದ್ದಾರೆ. ಇಬ್ಬರೂ ಕೂಡ ಗೆಲುವು ಸಾಧಿಸಿ ದೇಶಕ್ಕೆ ಕೀರ್ತಿ ತರಲಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಶುಭ ಹಾರೈಸಿದ್ದಾರೆ.
ಕ್ರೀಡೆ
T20 World Cup 2026: ಆಸ್ಟ್ರೇಲಿಯಾಗೆ ಶಾಕ್ – ಜಿಂಬಾಬ್ವೆ 23 ರನ್ಗಳ ಸಂಚಲನ ಜಯ
2026ರ **ICC Men’s T20 World Cup**ನ 19ನೇ ಪಂದ್ಯದಲ್ಲಿ ಬಲಿಷ್ಠ Australia national cricket team ವಿರುದ್ಧ Zimbabwe national cricket team ಸಂಚಲನ ಗೆಲುವು ಸಾಧಿಸಿದೆ. ಕೊಲಂಬೊದ **R. Premadasa Stadium**ನಲ್ಲಿ ನಡೆದ ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿಯ ಫಲಿತಾಂಶ ನೀಡಿತು.
ಜಿಂಬಾಬ್ವೆ ಬ್ಯಾಟಿಂಗ್ ಮಿಂಚು
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 169 ರನ್ಗಳ ಭದ್ರ ಮೊತ್ತ ಕಲೆಹಾಕಿತು. ತಂಡದ ಟಾಪ್ಆರ್ಡರ್ ಬ್ಯಾಟ್ಸ್ಮನ್ಗಳು ಸಮರ್ಥ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ಬೌಲರ್ಗಳಿಗೆ ಸವಾಲು ಹಾಕಿದರು.
ಆಸ್ಟ್ರೇಲಿಯಾ ಕುಸಿತ
170 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಜಿಂಬಾಬ್ವೆ ಬೌಲರ್ಗಳ ಯೋಜಿತ ದಾಳಿಗೆ ತತ್ತರಿಸಿತು. ನಿರಂತರ ವಿಕೆಟ್ಗಳ ಪತನದಿಂದ ತಂಡ 146 ರನ್ಗಳಿಗೆ ಸೀಮಿತವಾಗಿ 23 ರನ್ಗಳ ಸೋಲು ಅನುಭವಿಸಿತು.
ಐತಿಹಾಸಿಕ ದಾಖಲೆ
ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆಯ ಎರಡನೇ ಗೆಲುವು ಇದಾಗಿದೆ. ಇದಕ್ಕೂ ಮೊದಲು 2007ರಲ್ಲಿ ಜಿಂಬಾಬ್ವೆ ಆಸ್ಟ್ರೇಲಿಯಾವನ್ನು ಮಣಿಸಿತ್ತು.
ಪಾಯಿಂಟ್ಸ್ ಟೇಬಲ್ ಬದಲಾವಣೆ
ಈ ಗೆಲುವಿನೊಂದಿಗೆ ಜಿಂಬಾಬ್ವೆ ಬಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದೆ. ಸೋಲಿನ ಪರಿಣಾಮ ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಕುಸಿದಿದೆ.
ಕ್ರೀಡೆ
T20 WORLD CUP : ಪಾಕ್ ಪಂದ್ಯಕ್ಕೂ ಅಭಿಷೇಕ್ ಶರ್ಮಾ ಅನುಮಾನ: ನಾಯಕ ಸೂರ್ಯಕುಮಾರ್ ಸ್ಪಷ್ಟನೆ
ನವದೆಹಲಿ, ಫೆ.13: ಹೊಟ್ಟೆನೋವಿನಿಂದ ಚೇತರಿಸಿಕೊಳ್ಳುತ್ತಿರುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಗುರುವಾರ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡಲಿಲ್ಲ. ಭಾನುವಾರ ನಡೆಯಲಿರುವ ಪಾಕಿಸ್ತಾನ ಎದುರಿನ ಮಹತ್ವದ ಪಂದ್ಯಕ್ಕೂ ಅವರ ಲಭ್ಯತೆ ಅನುಮಾನಾಸ್ಪದವಾಗಿದೆ ಎಂದು ನಾಯಕ Suryakumar Yadav ತಿಳಿಸಿದ್ದಾರೆ.
ಅಭಿಷೇಕ್ ಸೋಮವಾರ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಬುಧವಾರ ತಂಡಕ್ಕೆ ಮರಳಿದರೂ ತರಬೇತಿಯಲ್ಲಿ ಭಾಗವಹಿಸಲಿಲ್ಲ. ಈ ಬಗ್ಗೆ Board of Control for Cricket in India (BCCI) ಪ್ರಕಟಣೆಯಲ್ಲಿ, “ಅಭಿಷೇಕ್ ಇನ್ನೂ ಚೇತರಿಕೆ ಹಂತದಲ್ಲಿದ್ದಾರೆ. ವೈದ್ಯಕೀಯ ತಂಡ ನಿಗಾ ವಹಿಸಿದೆ” ಎಂದು ತಿಳಿಸಿತ್ತು.
ಟಾಸ್ ವೇಳೆ ಮಾತನಾಡಿದ ಸೂರ್ಯಕುಮಾರ್, “ಅಭಿಷೇಕ್ ಒಂದು ಅಥವಾ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆಯಬಹುದು. ಸಂಪೂರ್ಣ ಫಿಟ್ ಆಗಿಲ್ಲ” ಎಂದರು. ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಅವರು ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. 24 ವರ್ಷದ ಅಭಿಷೇಕ್ ಪಾಕಿಸ್ತಾನ ವಿರುದ್ಧ ಮೂರು ಪಂದ್ಯಗಳಲ್ಲಿ 189 ಸ್ಟ್ರೈಕ್ ರೇಟ್ನಲ್ಲಿ 110 ರನ್ ಗಳಿಸಿದ್ದಾರೆ.
🇮🇳 ಭಾರತಕ್ಕೆ ಭರ್ಜರಿ ಜಯ
ಗುರುವಾರ ನಡೆದ ಪಂದ್ಯದಲ್ಲಿ ಭಾರತ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 9 ವಿಕೆಟ್ಗೆ 209 ರನ್ ಪೇರಿಸಿತು. ಕಠಿಣ ಗುರಿ ಬೆನ್ನಟ್ಟಿದ ನಮೀಬಿಯಾ 18.2 ಓವರ್ಗಳಲ್ಲಿ 116 ರನ್ಗಳಿಗೆ ಆಲೌಟ್ ಆಯಿತು.
ಆರಂಭಿಕ ಆಟಗಾರ Ishan Kishan ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ Hardik Pandya 52 ರನ್ ಗಳಿಸಿ ತಂಡದ ಮೊತ್ತವನ್ನು 200 ದಾಟಿಸಿದರು. ಬೌಲಿಂಗ್ನಲ್ಲಿ Varun Chakravarthy 3 ವಿಕೆಟ್ ಪಡೆದರೆ, Axar Patel ಮತ್ತು ಹಾರ್ದಿಕ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು
ಕ್ರೀಡೆ
BENGALURU : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ಗೆ ಒಪ್ಪಿಗೆ: 35 ಸಾವಿರ ಜನ ಮಿತಿ, ಭದ್ರತೆಗೆ ಸಮಿತಿ
ಬೆಂಗಳೂರು: ನಗರದ **M. Chinnaswamy Stadium**ನಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. ಭದ್ರತೆ ಹಾಗೂ ಜನಸಂಚಾರ ನಿಯಂತ್ರಣಕ್ಕೆ ವಿಶೇಷ ಸಮಿತಿ ರಚನೆ ಮಾಡಲಾಗಿದೆ ಎಂದು ಗೃಹಸಚಿವ G. Parameshwara ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹೊಸದಾಗಿ ಏನೂ ಮಾಡುವುದಿಲ್ಲ. ಸೇಫ್ಟಿ ಮೋಸ್ಟ್ ಇಂಪಾರ್ಟೆಂಟ್. ಸಮಿತಿ ಎಲ್ಲಾ ಕ್ರಮ ಕೈಗೊಳ್ಳುತ್ತದೆ” ಎಂದು ಸ್ಪಷ್ಟಪಡಿಸಿದರು.
35 ಸಾವಿರ ಜನರ ಮಿತಿ
ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ Indian Premier League (IPL) ಪಂದ್ಯ ಆಯೋಜನೆಗೆ ಷರತ್ತುಬದ್ಧ ಒಪ್ಪಿಗೆ ನೀಡಲಾಗಿದೆ. ಒಂದು ಪಂದ್ಯಕ್ಕೆ ಗರಿಷ್ಠ 35 ಸಾವಿರಕ್ಕಿಂತ ಹೆಚ್ಚು ಪ್ರೇಕ್ಷಕರು ಸೇರಬಾರದು ಎಂಬ ನಿಯಮ ವಿಧಿಸಲಾಗಿದೆ.
ಕ್ಯಾಬಿನೆಟ್ ಸಭೆಗೆ ಮುನ್ನ ವಿಧಾನಸೌಧದಲ್ಲಿ ಗೃಹ ಸಚಿವರು, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ನೇತೃತ್ವದ ಸಮಿತಿ, Karnataka State Cricket Association (KSCA) ಹಾಗೂ Royal Challengers Bengaluru (RCB) ಪ್ರತಿನಿಧಿಗಳು ಭಾಗವಹಿಸಿದ್ದರು.
ಬೈರತಿ ಬಸವರಾಜ್ ಬಂಧನ ಕುರಿತು ಪ್ರತಿಕ್ರಿಯೆ
ಬಿಜೆಪಿ ಶಾಸಕ Bairathi Basavaraj ಬಂಧನ ಪ್ರಕರಣದ ಕುರಿತು ಮಾತನಾಡಿದ ಗೃಹಸಚಿವರು, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬಳಿಕ ಅವರು ಸಿಐಡಿ ಮುಂದೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ. ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
-
ದೇಶ24 hours agoವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಎಚ್ಚರಿಕೆ: “ಭಾರತಕ್ಕೆ ಮರಳದಿದ್ದರೆ ಅರ್ಜಿ ವಿಚಾರಣೆ ಇಲ್ಲ”
-
ದೇಶ6 hours agoSHAKTI SCHEME : ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್: ಸಚಿವ ಸಂಪುಟದ ಮಹತ್ವದ ನಿರ್ಧಾರ
-
ದೇಶ5 hours agoಫುಟ್ಪಾತ್ನಲ್ಲಿ ಬೈಕ್ಗೆ ಮಹಿಳೆಯ ಅಡ್ಡಿ: ಕೇರಳದಲ್ಲಿ ವೈರಲ್ ವಿಡಿಯೋ
-
ದೇಶ4 hours agoRBI : ಸಾಲ ವಸೂಲಿಗೆ ಹೊಸ ನಿಯಮಗಳು: ಆರ್ಬಿಐ ಕಟ್ಟುನಿಟ್ಟಿನ ಮಾರ್ಗಸೂಚಿ
-
ದೇಶ6 hours agoBangladesh Election 2026: ಬಿಎನ್ಪಿ ಭರ್ಜರಿ ಗೆಲುವು, ತಾರಿಖ್ ರೆಹಮಾನ್ ಮುಂದಿನ ಪ್ರಧಾನಿ
-
ಕ್ರೀಡೆ4 hours agoBENGALURU : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ಗೆ ಒಪ್ಪಿಗೆ: 35 ಸಾವಿರ ಜನ ಮಿತಿ, ಭದ್ರತೆಗೆ ಸಮಿತಿ
-
ದೇಶ6 hours agoದೇವನಹಳ್ಳಿ ಸಮೀಪ ಭೀಕರ ರಸ್ತೆ ಅಪಘಾತ: 7 ಮಂದಿ ದುರ್ಮರಣ
-
ದೇಶ3 hours agoಶಾಂಘೈನಲ್ಲಿ ದೈತ್ಯ ಸಿಂಕ್ಹೋಲ್: ರಸ್ತೆ ಕುಸಿದು ವಾಹನಗಳು ಒಳಗೆ, ಭಯಾನಕ ವಿಡಿಯೋ ವೈರಲ್
