ದೇಶ
Puri Jaganath ಜಗನ್ನಾಥನಿಗೆ ರಥಯಾತ್ರೆ ಸಂಭ್ರಮ- ಬೀದಿ ಗುಡಿಸಿದ ಸಿಎಂ, ಆರತಿ ಎತ್ತಿದ ಅಮಿತ್ ಶಾ!

ಭುವನೇಶ್ವರ: ಒಡಿಶಾದ ಕಡಲತಡಿಯಲ್ಲಿರುವ ಪುರಿಯಲ್ಲಿ ವಾರ್ಷಿಕ ಜನನ್ಯಾಥನ ರಥಯಾತ್ರೆ ಸಂಭ್ರಮ ಆರಂಭಗೊಂಡಿದ್ದು 147 ನೇ ರಥಯಾತ್ರೆಗೆ ಗುಜರಾತ್ನ ಅಹಮದಾಬಾದ್ ನಗರದಲ್ಲಿ ಚಾಲನೆ ನೀಡಲಾಗಿದೆ,
ಜಗನ್ಯಾಥ ದೇಸ್ಧಾನದಿಂದ ರಥಗಳು ಹೊರಡುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳಾರತಿ ಮಾಡಿದ್ದಾರೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಜಮಾಲ್ವುರ್ ಪ್ರದೇಶದಲ್ಲಿ ಚಿನ್ನದ ಪೊರಕೆ ಬಳಸಿ ಮಾರ್ಗವನ್ನು ಸ್ವಚ್ಚಗೊಳಿಸುವ ಪಹಿಂದ್ ವಿಧಿ ನೆರವೇರಿಸಿದ್ದಾರೆ,
ಹಲವು ಧಾರ್ಮಿಕ ಕಾರ್ಯಕ್ರಮಗಳು ಎರಡು ದಿನ ನಡೆಯಲಿವೆ, ರಾಷ್ಟ್ರಪತಿ ದ್ರೌಪದಿ ಮುರ್ಮು ರಥಯಾತ್ರೆಯನ್ನು ಪುರಿಯಲ್ಲಿ ಕಣ್ತುಂಬಿಸಿಕೊಂಡಿದ್ದಾರೆ, ಮೆರವಣಿಗೆ ಬೆಳಗ್ಗೆ ಪ್ರಾರಂಭವಾಗಿದೆ, ದೇಶದ ಹಲವಡೆಗಳಿಂದ ಲಕ್ಷಾಂತರ ಭಕ್ತರು ಬಂದು ಸಾಕ್ಷಿಯಾಗಿದ್ದಾರೆ,
ಉತ್ಸವವನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಒಡಿಶಾ ಸರ್ಕಾರವು ಭದ್ರತಾ ವ್ಯವಸ್ಧೆ ಆಂಬುಲೆನ್ಸ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿದೆ, ಒಡಿಶಾ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಮತ್ತು ಇತರ ಗಣ್ಯರಿಗೆ ವಿಐಪಿ ವಲಯ, ರಾಷ್ಟ್ರಪತಿಗಳಿಗೆ ಬಫರ್ ವಲಯವನ್ನು ನಿರ್ಮಿಸಲಾಗಿದೆ, ರಥಯಾತ್ತೆಗೆ 22,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯ ಕಾವಲು ಜೊತೆಗೆ ಬಲೂನ್ ಮೌಂಟೆಡ್ ಕ್ಯಾಮೆರಾಗಳನ್ನು ವ್ಯವಸ್ಧೆಗೊಳಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಧೆಯ ಎಡಿಜಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಈ ರಥಯಾತ್ರೆ ಒಂದು ದಿನದ ಕಾರ್ಯಕ್ರಮ, 1971 ರಲ್ಲಿ ಎರಡು ದಿನ ನಡೆದಿತ್ತು, ಈ ಬಾರಿಯೂ ಎರಡು ದಿನ ನಡೆಯಲಿದೆ, ಜಗನ್ಯಾಥ, ದೇವಿ ಸುಭದ್ರ ಮತ್ತು ಬಲಭದ್ರನಿಗೆ ಪೂಜೆ ನಡೆಯುವುದು, ಇವರ ರಥಗಳನ್ನು ಖಲಾಶಿ ಸಮುದಾಯದವರು ಸಂಜೆ ಎಳೆಯುತ್ತಾರೆ, ರಥಗಳಿಗೆ ಮರದ ಕುದುರೆಗಳನ್ನು ಜೋಡಿಸಿದ ನಂತರ ಎಳೆಯಲಾಗುತ್ತದೆ,