ಕ್ರೀಡೆ

T20 World Cup: ವಿಶ್ವಚಾಂಪಿಯನ್ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ಹಂಚಿದ್ದು ಹೇಗೆ? ಯಾರಿಗೆ ಎಷ್ಟು ಕೋಟಿ ಸಿಕ್ತು? ಇಲ್ಲಿದೆ ಮಾಹಿತಿ

ಭಾರತ ತಂಡದ ಐತಿಹಾಸಿಕ ವಿಶ್ವಕಪ್ ಜಯಿಸಿದ ನಂತರ ಬಿಸಿಸಿಐ ಮುಂಬೈನಲ್ಲಿ ಅದ್ಧೂರಿ ಸ್ವಾಗತ ನೀಡಿತ್ತು. ಗುರುವಾರ ಬಾರ್ಬಡೋಸ್‌ನಿಂದ ನವದೆಹಲಿ ತಲುಪಿದ ನಂತರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನಂತರ ಸಂಜೆ ಮುಂಬೈ ತಲುಪಿತು, ಅಲ್ಲಿ ಮೊದಲು ಭಾರತೀಯ ಆಟಗಾರರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಇದಾದ ಬಳಿಕ ಮರೈನ್ ಡ್ರೈವ್‌ನಿಂದ ವಾಂಖೆಡೆ ಸ್ಟೇಡಿಯಂಗೆ ತೆರೆದ ಬಸ್‌ನಲ್ಲಿ ವಿಜಯೋತ್ಸವದ ಮೆರವಣಿಗೆಯೊಂದಿಗೆ ತಂಡವನ್ನು ಸ್ವಾಗತಿಸಲಾಯಿತು. ವಿಜಯೋತ್ಸವದ ನಂತರ ಬಿಸಿಸಿಐ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡವನ್ನು ಅಭಿನಂದಿಸಿದ ನಂತರ ಇಡೀ ತಂಡಕ್ಕೆ 125 ಕೋಟಿ ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಿದರು.

ಆಟಗಾರರು, ಕೋಚ್​ ಸಿಬ್ಬಂದಿ, ಸಹಾಯಕ ಸಿಬ್ಬಂದಿ ಹಾಗೂ ರಿಸರ್ವ್​ ಪ್ಲೇಯರ್ಸ್ ಹಾಗೂ ಆಯ್ಕೆ ಸಮಿತಿ ಸೇರಿಸಿ ಈ ಬಹುಮಾನ ಮೊತ್ತವನ್ನ ಬಿಸಿಸಿಐ ನೀಡಿದೆ. ಹಾಗಾಗಿ ಯಾರಿಗೆ ಎಷ್ಟು ಹಣ ಸಂದಿರಬಹುದು ಎಂಬ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ಉಂಟಾಗಿತ್ತು.

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಬಿಸಿಸಿಐ ಘೋಷಿಸಿದ 125 ಕೋಟಿ ರೂಪಾಯಿಗಳ ಬಹುಮಾನದ ಹಣದಲ್ಲಿ, 15 ಸದಸ್ಯರ ಭಾರತೀಯ ತಂಡದ ಆಟಗಾರರು ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೆಚ್ಚು ಹಣವನ್ನು ಪಡೆದಿದ್ದಾರೆ. ಕುತೂಹಲಕಾರಿ ವಿಷಯವೆಂದರೆ ಈ 15 ಸದಸ್ಯರಲ್ಲಿ, ಒಂದೇ ಪಂದ್ಯದಲ್ಲಿ ಪ್ಲೇಯಿಂಗ್-11ರಲ್ಲಿ ಕಾಣಿಸಿಕೊಳ್ಳದ ಮೂವರು ಆಟಗಾರರು ಕೂಡ ಇದ್ದಾರೆ.

ವರದಿಯ ಪ್ರಕಾರ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ತಂಡದ 15 ಆಟಗಾರರಿಗೆ ತಲಾ 5 ಕೋಟಿ ರೂಪಾಯಿ ಪಡೆದಿದ್ದಾರೆ. ಇವರಲ್ಲಿ ಟೂರ್ನಿಯಲ್ಲಿ ಒಂದೂ ಪಂದ್ಯವಾಡ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಮತ್ತು ಯುಜ್ವೇಂದ್ರ ಚಹಾಲ್ ಕೂಡ ಸೇರಿದ್ದಾರೆ.

ಮುಖ್ಯ ಕೋಚ್ ರಾಹುಲ್ ದ್ರಾವಿಡ್ 5 ಕೋಟಿ ರೂಪಾಯಿ ಬಹುಮಾನ ಪಡೆದರೂ, ಇತರೆ ಕೋಚಿಂಗ್ ಸಿಬ್ಬಂದಿಗೆ ತಲಾ 2.5 ಕೋಟಿ ರೂ ನೀಡಲಾಗಿದೆ. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ತಲಾ 2.5 ಕೋಟಿ ರೂ ಪಡೆದಿದ್ದಾರೆ. ಅದೇ ಸಮಯದಲ್ಲಿ, ಫಿಸಿಯೋಥೆರಪಿಸ್ಟ್, ಥ್ರೋಡೌನ್ ಸ್ಪೆಷಲಿಸ್ಟ್ ಮತ್ತು ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್‌ನಂತಹ ಇತರ ಬ್ಯಾಕ್‌ರೂಮ್ ಸಿಬ್ಬಂದಿಗೆ ತಲಾ 2 ಕೋಟಿ ರೂಪಾಯಿ ಸಿಕ್ಕಿದೆ ಎಂದು ತಿಳಿದುಬಂದಿದೆ.

ವರದಿಯ ಪ್ರಕಾರ, ಮೀಸಲು ಆಟಗಾರರಾದ ರಿಂಕು ಸಿಂಗ್, ಶುಭ್‌ಮನ್ ಗಿಲ್, ಆವೇಶ್ ಖಾನ್ ಮತ್ತು ಖಲೀಲ್ ಅಹ್ಮದ್ ಹೊರತುಪಡಿಸಿ, ಆಯ್ಕೆ ಸಮಿತಿಯ ಐವರು ಸದಸ್ಯರು ಈ ಬಹುಮಾನದ ಮೊತ್ತದಿಂದ ತಲಾ 1 ಕೋಟಿ ರೂ. ಹಾಗೂ ವಿಡಿಯೋ ವಿಶ್ಲೇಷಕರು ಮತ್ತು ಬಿಸಿಸಿಐ ಸಿಬ್ಬಂದಿಗೆ ಹಂಚಿಕೆ ಮಾಡಲಾಗಿದೆ.

Trending

Exit mobile version