ದೇಶ

ಟ್ರೈನಿ ಐಎಎಸ್ ಅಧಿಕಾರಿಯ ವಿಐಪಿ ಬೇಡಿಕೆಗೆ ರೋಸಿ ಹೋದ ಡಿಸಿ.!

ಪುಣೆ: ಅಧಿಕಾರ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಪ್ರೊಬೇಷನರಿ ಅಧಿಕಾರಿ ಡಾ.ಪೂಜಾ ಖೇಡ್ಕರ್ ಅವರನ್ನು ಎತ್ತಂಗಡಿ ಮಾಡಲಾಗಿದೆ,
ಪ್ರೋಬೇಷನರಿ ಅಧಿಕಾರಿಯಾಗಿದ್ದ ಅವರು ಖಾಸಗಿ ಆಡಿ ಕಾರನ್ನು ಬೀಕನ್ ಲೈಟ್ ಅನ್ನು ಬಳಸಲು ಅರ್ಹರಾಗಿರಲಿಲ್ಲ ಇದಲ್ಲದೇ ವಿಐಪಿ ನಂಬರ್ ಪ್ಲೇಟ್, ಮಹಾರಾಷ್ಟ್ರ ಸರ್ಕಾರ ಎಂಬ ಬೋರ್ಡ್ ಬಳಸಿದ್ದರು,
ಅದಲ್ಲದೇ ಅಧಿಕಾರಿಗಿರುವ ಎಲ್ಲಾ ಸವಲತ್ತು ಬೇಕೆಂದು ಪಟ್ಟು ಹಿಡಿದಿದ್ದರು ಎನ್ನಲಾಗಿದ,ಎ

ಇವರ ದುರ್ವರ್ತನೆ ಇಲ್ಲಿಗ ನಿಂತಿಲ್ಲ ಅಧಿಕೃತ ಕಾರು, ವಸತಿ, ಸಾಕಷ್ಟು ಸಿಬ್ಬಂದಿ ಹೊಂದಿರುವ ಅಧಿಕೃತ ಚೇಂಬರ್ ಮತ್ತು ಕಾನ್‍ಸ್ಟೇಬಲ್, ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್, ಪೇಪರ್ ವೇಟ್, ನಾಮಫಲಕ, ರಾಜಮುದ್ರೆ, ಇಂಟರ್ ಕಾಮ್ ಇತ್ಯಾದಿಗಳ ಬೇಡಿಕೆ ಇರಿಸಿದ್ದರು,
ಇವರ ವರ್ತನೆಯಿಂದ ರೋಸಿ ಹೋಗಿದ್ದ ಪುಣೆ ಜಿಲ್ಲಾಧಿಕಾರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು, ಅನಂತರ ಈ ಅಧಿಕಾರಿಯ ವರ್ತನೆ ತಾಳಲಾರದೇ ಪೂರಾರವರನ್ನು ಎತ್ತಂಗಡಿ ಮಾಡಲಾಗಿದೆ,
ನಿಯಮಗಳ ಪ್ರಕಾರ, ಪ್ರೊಬೇಷನರಿ ಅಧಿಕಾರಿಗಳಿಗೆ ಮೇಲಿನ ಸೌಕರ್ಯಗಳನ್ನು ಒದಗಿಸಲಾಗುವುದಿಲ್ಲ, ಇವೆಲ್ಲವೂ ಗೆಜೆಟೆಡ್ ಅಧಿಕಾರಿಯಾಗಿ ನೇಮಕವಾದ ಬಳಿಕ ಪಡೆಯುಬೇಕಾಗುತ್ತದೆ,

Trending

Exit mobile version