ದೇಶ

Mohammed Siraj: ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ವೇಗಿ ಸಿರಾಜ್​ಗೆ ಭರ್ಜರಿ ಬಹುಮಾನ ಕೊಟ್ಟ ಸಿಎಂ ರೇವಂತ್ ರೆಡ್ಡಿ

ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ನಡೆದ ಟಿ20 ವಿಶ್ವಕಪ್​ಅನ್ನ ಟೀಮ್ ಇಂಡಿಯಾ ಗೆದ್ದು ಇತಿಹಾಸ ಸೃಷ್ಟಿಸಿದೆ. 17 ವರ್ಷಗಳ ಬಳಿಕ ವಿಶ್ವಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ಬಹುಮಾನ ಕೊಟ್ಟಿದ್ದು ಗೊತ್ತೇ ಇದೆ. ಇದೀಗ ಆಯಾ ರಾಜ್ಯದ ಕ್ರಿಕೆಟಿಗರಿಗೂ ಅಲ್ಲಿನ ಸರ್ಕಾರ ಭರ್ಜರಿ ಉಡುಗೊರೆ ನೀಡುತ್ತಿದ್ದಾರೆ.

ಮುಂಬೈನಿಂದ ಹೈದರಾಬಾದ್‌ಗೆ ಬಂದ ಸಿರಾಜ್​ಗೆ ಅದ್ಭುತ ಸ್ವಾಗತ ಸಿಕ್ಕಿತ್ತು. ಮೆಹದಿಪಟ್ಟಣಂನ ಸರೋಜನಿ ಕಣ್ಣಿನ ಆಸ್ಪತ್ರೆಯಿಂದ ಈದ್ಗಾ ಮೈದಾನದವರೆಗೆ ರೋಡ್ ಶೋನಲ್ಲಿ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದರು. ಮಂಗಳವಾರ ಸಿಎಂ ಭೇಟಿಯಾದ ಸಿರಾಜ್ ಟೀಂ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.

ಭಾರತ ತಂಡದ ಭಾಗವಾಗಿದ್ದ ವೇಗಿ ಮೊಹಮ್ಮದ್​ ಸಿರಾಜ್ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಮಂಗಳವಾರ ಭೇಟಿಯಾದರು ಸಿರಾಜ್​ರನ್ನ ಅಭಿನಂದಿಸಿದ ಸಿಎಂ ರೇವಂತ್ ರೆಡ್ಡಿ, ಇದೇ ವೇಳೆ ಉಡುಗೊರೆಯನ್ನು ಘೋಷಿಸಿದರು.

ಇದೇ ವೇಳೆ ಟಿ20 ವಿಶ್ವಕಪ್ ಚಾಂಪಿಯನ್ ಸಿರಾಜ್​ಗೆ ಸರ್ಕಾರಿ ಉದ್ಯೋಗ ಹಾಗೂ ಮನೆ ನಿರ್ಮಿಸಲು ಸ್ಥಳ ನೀಡಲಾಗುತ್ತದೆ ಎಂದು ಸಿಎಂ ಘೋಷಣೆ ಮಾಡಿದರು. ಹೈದರಾಬಾದ್ ಆಸುಪಾಸಿನಲ್ಲಿ ಸ್ಥಳ ಹುಡುಕುವಂತೆ ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.

Trending

Exit mobile version