ಅಪರಾಧ
Breaking News ರಾಜ್ಯವೇ ಖುಷಿಪಡುವ ಸುದ್ದಿ ಕೊಡುತ್ತಿದ್ದ ದಿವ್ಯಾ ವಸಂತ ಅಂದರ್!

ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ಕನ್ನಡ ಸುದ್ದಿವಾಹಿನಿ ನಿರೂಪಕಿ ವಸಂತ ಕೊನೆಗೂ ಇಂದು ಅರೆಸ್ಟ್ ಆಗಿದ್ದಾರೆ,
ರಾಜ್ಯವೇ ಖುಷಿಪಡುವ ಸುದ್ದಿ ಎನ್ನವುದರ ಮೂಲಕ ಮನೆಮಾತಾಗಿದ್ದ ದಿವ್ಯಾ ಹಣ ಸುಲಿಗೆ ಕೇಸ್ನಲ್ಲಿ ಅಂದರ್ ಆಗಿದ್ದಾಳೆ,
ಇಂದಿರಾನಗರದ ಸ್ಪಾ ಮ್ಯಾನೇಜರ್ ಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ ಪ್ರಕರಣದಲ್ಲಿ ರಾಜ್ ನ್ಯೂಸ್ ಸಿಬ್ಬಂದಿ ಎಂದು ಹೇಳಿಕೊಂಡಿದ್ದ ರಾಜಾನುಕುಂಟೆ ವೆಂಕಟೇಶ್ ಈಗಾಗಲೇ ಅರೆಸ್ಟ್ ಆಗಿದ್ದರು, ಇದೇ ಕೇಸ್ ನಲ್ಲಿ ನಿರೂಪಕಿ ದಿವ್ಯ ವಸಮತ ಕೂಡ ಇದೀಗ ಪೊಲೀಸರು ಅತಿಥಿಯಾಗಿದ್ದಾಳೆ.
ಪ್ರಕರಣ ಹೊರಬಂದಗಿನಿಂದ ದಿವ್ಯಾ ವಸಂತ ತಮಿಳುನಾಡು ಹಾಗೂ ಕೇರಳದಲ್ಲಿ ಸಂಚರಿಸುತ್ತಾ ತಲೆಮರಿಸಿಕೊಂಡಿದ್ದರು, ಇದೀಗ ಜೀವನ್ ಭೀಮಾನಗರ ಠಾಣಾ ಪೊಲೀಸರು ದಿವ್ಯ ವಸಂತಳನ್ನು ಕೇರಳದಲ್ಲಿ ಬಂಧಿಸಿ ಕರೆತಂದಿದ್ದಾರೆ,
ಇಂದಿರಾನಗರ ಸ್ಪಾ ವ್ಯವಸ್ಧಾಪಕನಿಗೆ ಬೆದರಿಸಿ 15 ಲಕ್ಷ ರೂ. ಹಣ ಸುಲಿಗೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖಾಸಗಿ ರಾಜಾನುಕುಂಟೆ ವೆಂಕಟೇಶ್, ದಿವ್ಯಾ ಸಹೋದರ ಸಂದೇಶ್ ಸೇರಿ ಮೂವರನ್ನು ಈಗಾಗಲೇ ಬಂಧಿಸಿದ್ದಾರೆ,
ದಿವ್ಯಾ ವಸಂತ ಈ ಹಿಂದೆ ಬಿಟಿವಿ ನ್ಯೂಸ್ ಚಾನಲ್ನಲ್ಲಿ ನಿರೂಪಕಿಯಾಗಿದ್ದರು, ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,