ಬೆಂಗಳೂರು

ಪಟ್ಟಣಗರೆ ಶಡ್‍ಗೆ ಗೂಗಲ್‍ನಲ್ಲಿ ಫೈವ್ ಸ್ಟಾರ್ ರೇಟಿಂಗ್!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಗೂ ಮುನ್ನ ಪಟ್ಟಣಗೆರೆ ಶೆಡ್ ಬೆರಳೆಣಿಕೆ ಜನಕ್ಕೆ ಮಾತ್ರ ಗೊತ್ತಿತ್ತು, ಆದ್ರೆ ಕೊಲೆಯ ನಂತರ ಈ ಸ್ಧಳದ ಹೆಸರು ಗೂಗಲ್ ಗೆ ತಿಳಿದಿದ್ದು, ಇದೀಗ ಸಿಕ್ಕಾಪಟ್ಟೆ ರೇಟಿಂಗ್ ಕೂಡ ಸಿಕ್ಕಿದೆ, ರೇಣುಕಾಸ್ವಾಮಿ ಕೊಲೆಯಾದ ಸ್ಧಳಕ್ಕೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ 16 ಜನ ಆರೋಪಿಗಳನ್ನು ಕರೆದುಕೊಂಡು ಬಂದು ಪೊಲೀಸರು ಸ್ಧಳ ಮಹಜರು ಮಾಡಿದ್ದರು,
ಈ ವೇಳೆ ನಟ ದರ್ಶನ್‍ನನ್ನು ಪೊಲೀಸರು ಕಸ್ಟಡಿಯಿಂದ ಹೊರತೆ ಕರೆದುಕೊಂಡು ಬಂದಾಗ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಅಲ್ಲಿ ಸೇರಿದ್ದರು, ಇನ್ನು ಕೆಲವರು ಸ್ಧಳದ ಬಗ್ಗೆ ಮಾಹಿತಿ ಇಲ್ಲದೇ ಲೊಕೇಶನ್ ಬಗ್ಗೆ ಗೂಗಲ್ ಮ್ಯಾಪ್‍ನಲ್ಲಿ ಹುಡುಕಾಟ ಮಾಡಿದ್ದರು,
ಈ ಹಿನ್ನೆಲೆಯಲ್ಲಿ ಪಟ್ಟಣಗೆರೆ ಶೆಡ್ ಇರುವ ಸ್ಧಳವನ್ನು ಗೂಗಲ್ ಮ್ಯಾಪನಲ್ಲಿ ಐಡೆಂಟಿಫಿಕೇಶನ್ ಮಾಡಲಾಗಿದ್ದು, ಇದಕ್ಕೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ, ಅಷ್ಟೇ ಅಲ್ಲ ಇದಕ್ಕೆ 4.6 ರೇಟಿಂಗ್ ಕೂಡಾ ಕೊಟ್ಟಿದ್ದಾರೆ,
ಈ ಜಾಗಕ್ಕೆ ನಿಮ್ಮ ಪ್ರೇಯಸಿ, ಪತ್ನಿ ಯಾರನ್ನು ಬೇಕಾದರೂ ಕರೆದುಕೊಂಡು ಬರಬಹುದು, ಫ್ಯಾಮಿಲಿಗೆ ಸೂಕ್ತ ಸ್ಧಳ, ಕುಂಟೆ ಬಿಲ್ಲೆ ಆಡಲು ಪಟ್ಟಣಗೆರೆ ಶೆಡ್ ಬಹಳ ಉತ್ತಮ ಹೀಗೆ ಸಾವಿರಾರು ಕಾಮೆಂಟ್ ಗಳು ಬಂದಿದೆ.
ಇಷ್ಟೇ ಅಲ್ಲ ಒಂದು ರಾತ್ರಿ ತಂಗಲು ಪಟ್ಟಣಗೆರೆ ಶೆಡ್ ಶಿಫಾರಸು ಮಾಡಿ, ಉಚಿತ ಪಿಕಪ್ ಮತ್ತು ಡ್ರಾಪ್ ಲಭ್ಯವಿದೆ, ಇಲ್ಲಿ ಮೆಸಾಜ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಧಗಿತಗೊಳಿಸಲಾಗಿದೆ ಎಂದು ನೆಟ್ಟಿಗನೊಬ್ಬ ಬರೆದುಕೊಂಡಿದ್ದಾನೆ.
ಸದ್ಯ ನೆಟ್ಟಿಗರ ಈ ಕೆಲಸದಿಂದಾಗಿ ಪಟ್ಟಣಗೆರೆ ಶೆಡ್ ಪ್ರಪಂಚದದ್ಯಂತ ಸದ್ದು ಮಾಡುತ್ತಿದ್ದು, ನಿಮಗೂ ಗೂಗಲ್ ಮ್ಯಾಪ್‍ನಲ್ಲಿ ಶೆಡ್ ಬಗ್ಗೆ ರಿವ್ಯೂ ಬರೆಯುವಷ್ಟು ಸಮಯವಿದ್ರೆ ಲಿಂಕ್‍ನ್ನು ನೋಡಿ ಕಮೆಂಟ್ಸ್ ನೋಡಿ ನಕ್ಕು ಸಮ್ಮನಾಗಿ

Trending

Exit mobile version