ದೇಶ
ಆಂಧ್ರದಲ್ಲಿ ಶುರುವಾಯ್ತು ಸೇಡಿಗೆ.. ಸವ್ವಾ ಸೇರು! ಜಗನ್ ಅರೆಸ್ಟ್ ಸಾಧ್ಯತೆ

ಆಂಧ್ರಪ್ರದೇಶ: ರಾಜ್ಯದ ಮಾಜಿ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಿರುದ್ಧ ಕೊಲೆ ಯತ್ನ ಆರೋಪದಡಿ ದೂರು ದಾಖಲಾಗಿದೆ,
ಟಿಡಿಪಿ ಶಾಸಕ ರಘುರಾಮ್ ಕೃಷ್ಣರಾಜು ದೂರು ನೀಡಿದ್ದಾರೆ, ಕೇಸ್ ದಾಖಲಾಗಿದ್ದು ಇದೀಗ ಜಗನ್ ಗೆ ಬಂಧನದ ಭೀತಿ ಎದುರಾಗಿದ, ಈ ಹಿಂದೆ ಜಗನರ ಆಡಳಿತದಲ್ಲಿ ಈಗಿನ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಹಲವು ಬಾರಿ ಅರೆಸ್ಟ್ ಮಾಡಲಾಗಿತ್ತು, ಈ ಬೆಳವಣಿಗೆ ರಾಜಕೀಯ ಸಂಘರ್ಷ, ಸೇಡಿನ ಸ್ವರೂಪ ಪಡೆದುಕೊಂಡಿತ್ತು,
ಇದೀಗ ಆಡಳಿತರೂಢ ಡಿಪಿಪಿ ಮತ್ತು ಜನಸೇನಾ ಸರ್ಕಾರ ಜಗನ್ ವಿರುದ್ಧ ತೊಡೆತಟ್ಟಿದ್ದು ಕಾನೂನು ಸಮರಕ್ಕೆ ಸಿದ್ಧವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ, ಟಿಡಿಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜಗನ್ ವಿರುದ್ಧ ತಂತ್ರ ಹೆಣೆಯಲಾಗಿದ್ದು ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಳಾಗುತ್ತಿದೆ,