Connect with us

ರಾಜ್ಯ

ಒನ್ ಅಂಡ್ ಓನ್ಲಿ ವರು.. ಮಜಾ ಟಾಕೀಸ್‌ನಲ್ಲಿ ಅಭಿನಯಿಸಲು ಅಪರ್ಣಾ ಒಪ್ಪಿದ್ದು ಹೇಗೆ? ಸೃಜನ್ ಲೋಕೇಶ್ ಹೇಳಿದ್ದೇನು?

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ ನಿಧನರಾಗಿದ್ದಾರೆ. ಸ್ವಚ್ಛ ಕನ್ನಡದ ಮರೆಯಲಾಗದ ಧ್ವನಿ ಮೌನವಾಗಿರುವುದು ಕಲಾಭಿಮಾನಿಗಳಿಗೆ ಸಹಿಸಲಾರದ ನೋವು ತಂದಿದೆ. ಅಪರ್ಣಾ ಅವರ ಅಂತಿಮ ದರ್ಶನ ಪಡೆದ ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.

ಕನ್ನಡ ಭಾಷೆಯ ಸೊಗಸಾದ ನಿರೂಪಣೆಯಲ್ಲಿ ಅಪರ್ಣಾ ಅವರು ಸಾಕಷ್ಟು ಜನಮನ್ನಣೆ ಗಳಿಸಿದ್ದರು. ಇತ್ತೀಚೆಗೆ ಅಪರ್ಣಾ ಅವರ ಸಿನಿ ಪಯಣದಲ್ಲಿ ಹೊಸ ಹುರುಪು ತಂದಿದ್ದು, ಸೃಜನ್ ಲೋಕೇಶ್ ನಿರ್ಮಾಣದ ಮಜಾ ಟಾಕೀಸ್‌. ಮಜಾ ಟಾಕೀಸ್‌ನಲ್ಲಿ ಅಪರ್ಣಾ ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ.

ತುಂಬಾ ಗಂಭೀರ ಸ್ವಭಾವದ ಅಪರ್ಣಾ ಅವರು ಮಜಾಟಾಕೀಸ್‌ನಂತ ಕಾಮಿಡಿ ಪಾತ್ರದಲ್ಲಿ ಅಭಿನಯಿಸಿದ್ದೇ ಒಂದು ಅಮೋಘ. ಒನ್ ಅಂಡ್ ಓನ್ಲಿ ವರಲಕ್ಷ್ಮಿಯಾಗಿ ಅಪರ್ಣಾ ಅವರು ಅಭಿನಯಿಸಿದ್ದು ಮತ್ತೊಂದು ಅದ್ಭುತ. ಅಪರ್ಣಾ ಅವರನ್ನು ಮಜಾಟಾಕೀಸ್‌ನಲ್ಲಿ ಅಭಿನಯಿಸುವಂತೆ ಅವಕಾಶ ಕೊಟ್ಟ ಸೃಜನ್ ಲೋಕೇಶ್ ಅವರು ಭಾವುಕರಾಗಿದ್ದಾರೆ.

ಅಪರ್ಣಾ ಅವರ ಮೇರು ವ್ಯಕ್ತಿತ್ವದ ಬಗ್ಗೆ ಮಾತನಾಡಿದ ಸೃಜನ್ ಲೋಕೇಶ್ ಅವರು ಮಜಾ ಟಾಕೀಸ್ ರೀ ಲಾಂಜ್ ಬಗ್ಗೆ ನಿನ್ನೆಯೂ ಮಾತನಾಡುತ್ತಿದ್ದೆ. 20-30 ವರ್ಷಗಳ ಹಿಂದೆ ಅಪರ್ಣಾ ಅವರಿಗಿದ್ದ ಐಡೆಂಟಿಟಿ ಕಂಪ್ಲೀಟ್ ಬದಲಾಗಿದ್ದು ಮಜಾ ಟಾಕೀಸ್‌ನಲ್ಲಿ. ಈ ತರಹನೂ ಒಬ್ಬರ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬಹುದು ಅನ್ನೋದು ತೋರಿಸಿಕೊಟ್ಟ ಪ್ರತಿಭೆ ಅಪರ್ಣಾ ಅವರು. ಅಪರ್ಣಾ ಅವರಿಗೆ ಅಪರ್ಣಾನೇ ಸಾಟಿ ಎಂದರು.

ಅಪರ್ಣಾ ಅವರ ಸಾಧನೆ ಹಾಗೂ ವ್ಯಕ್ತಿತ್ವ ಅಷ್ಟು ದೊಡ್ಡದು. ಅವರಿಗಿದ್ದ ಕ್ಯಾನ್ಸರ್ ಕಾಯಿಲೆ ಬಗ್ಗೆ ಯಾರಿಗೂ ಹೇಳದೆ ಮುಚ್ಚಿಟ್ಟಿದ್ದರು. ಈಗಲೂ ಮಜಾ ಟಾಕೀಸ್ ನೋಡುವಾಗ ಅಪರ್ಣಾ ತುಂಬಾ ಖುಷಿ ಪಡುತ್ತಿದ್ದರು. ಡಾಕ್ಟರ್ ಅಪರ್ಣಾ ಅವರಿಗೆ ಹೆಚ್ಚು ಹೆಚ್ಚು ಮಜಾ ಟಾಕೀಸ್ ನೋಡಲು ಸಲಹೆ ನೀಡುತ್ತಿದ್ದರು.

ಮಜಾ ಟಾಕೀಸ್‌ ಶೋಗೆ ಅಪರ್ಣಾ ಅವರನ್ನು ಮೊದಲು ಆಯ್ಕೆ ಮಾಡಿದ್ದು ನಾನಲ್ಲ, ನನ್ನ ಪತ್ನಿ. ನನ್ನ ಹೆಂಡ್ತಿ ಅಪರ್ಣಾ ಅವರ ಜೊತೆ ಕೆಲಸ ಮಾಡುವಾಗ ಅವರ ಹಾಸ್ಯ ಪ್ರಜ್ಞೆಯ ಬಗ್ಗೆ ಹೇಳಿದ್ದರು. ಅವರು ಎಷ್ಟು ನಗಿಸುತ್ತಾರೆ ಅನ್ನೋದು ನಿಮಗೆ ಗೊತ್ತಿಲ್ಲ ಎಂದಿದ್ದರು. ಆಗ ನಾನು ಅಪರ್ಣಾ ಅವರ ಜೊತೆ ಮಾತನಾಡಿದೆ. 2ನೇ ದಿನಕ್ಕೆ ಅಪರ್ಣಾ ಅವರು ತುಂಬಾ ಹೆದರಿಕೊಂಡಿದ್ದರು. ನನ್ನ ಬಗ್ಗೆ ತುಂಬಾ ಜನ ಮಾತನಾಡಿದ್ದಾರೆ ಎಂದರು ಆಗ ನಾನು ನನ್ನ ಮೇಲೆ ನಂಬಿಕೆಯಿಟ್ಟು ಧೈರ್ಯ ತುಂಬಿದೆ. ಆಸ್ಟ್ರೇಲಿಯಾ ಶೋ ಮಾಡಲು ಹೋದಾಗ ನಾನು ಅಂದು ಹೇಳಿದ ಮಾತನ್ನು ನೆನಪಿಸಿಕೊಂಡಿದ್ದರು.

ಅಪರ್ಣಾ ಅವರಿಗೆ ನಾನು ವರಲಕ್ಷ್ಮಿ ಅನ್ನೋ ಪಾತ್ರ ಮಾಡಲು ಹೇಳಿದ್ದೆ. ಅವರೇ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಅವರನ್ನು ಸೇರಿಸಿಕೊಂಡಿದ್ದರು. ತುಂಬಾ ತರ್ಲೆಗಳನ್ನು ಮಾಡಿದ್ದರು. ಮತ್ತೆ ಅದೇ ರೀತಿಯ ಅಪರ್ಣಾ ಅವರನ್ನು ಕಾಣಲು ಸಾಧ್ಯವಿಲ್ಲ ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.

ದೇಶ

ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ ಕಾಂಗ್ರೆಸ್ ಶಾಸಕ ವಿನಯ್!

ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದಾಗಿದೆ, ಅದ್ದರಿಂದ ಕೋರ್ಟ್ ಆದೇಶದಂತೆ ಇಂದು ವಿನಯ್ ಕುಲಕರ್ಣಿಯವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೋಟ್ ವಿಚಾರಣೆ ಮುಗಿದ ಬಳಿಕ ಶಾಸಕ ವಿನಯ್ ಕುಲಕರ್ಣಿಯವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುವುದು, ಇತ್ತೀಚಿಗೆ ಸುಪ್ರೀಂ ಕೋರ್ಟ್ ವಿನಯ್ ಕುಲಕರ್ಣಿಯ ಜಾಮೀನನ್ನು ರದ್ದುಪಡಿಸಿತು, ಒಂದು ವಾರದೊಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಿತ್ತು,
ಇವರ ಬೆಂಬಲಿಗರು ಸಿಟಿ ಸಿವಿಲ್ ಕೋರ್ಟ್ ಮುಂಭಾಗ ಜಮಾಯಿಸಿದ್ರು, ಪರಪ್ಪನ ಅಗ್ರಹಾರ ಜೈಲಿಗೆ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಕರೆದೊಯ್ದಿದ್ದಾರೆ, ಈ ವೇಳೆ ತಮ್ಮ ನಾಯಕ ಜೈಲು ಸೇರುತ್ತಿರೋದನ್ನು ಕಂಡು ಕೋರ್ಟ್ ಮುಂಭಾಗ ಬೆಂಬಲಿಗರು ಕಣ್ಣೀರು ಹಾಕಿದ್ದಾರೆ,

ಏನಿದು ಪ್ರಕರಣ?
9 ವರ್ಷಗಳ ಹಿಂದೆ ಅಂದರೆ 2016 ರ ಜೂನ್ 15 ರಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡನನ್ನು ಅವರದ್ದೇ ಮಾಲೀಕತ್ವದ ಜಿಮ್ ನಲ್ಲಿ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು, ಇದರಲ್ಲಿ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಕೈವಾಡ ಇದೆ ಎಂಬ ಆರೋಪವಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ 2020 ನವೆಂಬರ್ 5 ರಂದು ವಿನಯ್ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು, ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿ ಆದೇಶಿಸಿತ್ತು,

Continue Reading

ಬೆಂಗಳೂರು

ನಗರದ ಕಸ ಸಮಸ್ಯೆ ದೂರಾಗಿಸಲು BBMP ಕ್ರಮ: ದೂರು ನೀಡಲು ಪ್ರತ್ಯೇಕ ಕೇಂದ್ರ ಸ್ಥಾಪನೆ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ಸದಾ ಶ್ರಮವಹಿಸಿತ್ತಾರೆ. ಆದರೂ, ನಗರದಲ್ಲಿನ ಕಸದ ಸಮಸ್ಯೆ ಮಾತ್ರ ದೂರಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ಹೋಗುವವರನ್ನು ಹಿಡಿದುಕೊಡಲು ಬಿಬಿಎಂಪಿ ಕ್ರಮ ಕೈಗೊಂಡಿದ್ದು, ವಾಟ್ಸಪ್ ಸಂಖ್ಯೆಯೊಂದನ್ನು ಜನತೆಗೆ ನೀಡಿದೆ.

ಕಸ ಎಸೆಯುವವರ ಫೋಟೋ ತೆಗೆದು 9448197197 ಈ ನಂಬರ್‌ಗೆ ಕಳಿಸಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪಾಲಿಕೆ ಹೇಳಿದೆ,

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್ ಗಳ ಮೂಲಕ ಪ್ರತಿನಿತ್ಯ ಮನೆ-ಮನೆ ಭೇಟಿ ನೀಡಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೂ ಕೂಡಾ ನಾಗರಿಕರು ಆಟೋ ಟಿಪ್ಪರ್ ಗಳಿಗೆ ತ್ಯಾಜ್ಯವನ್ನು ನೀಡದೇ ರಾತ್ರಿ ವೇಳೆ ಅಥವಾ ಕೆಲಸಕ್ಕೆ ಹೋಗುವ ಸಮಯದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗ, ಖಾಲಿ ಸ್ಥಳ ಹಾಗೂ ರಾಜಕಾಲುವೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡಿ ಹೋಗುತ್ತಾರೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ.

ತ್ಯಾಜ್ಯ ಬಿಸಾಡುವುದರ ಜೊತೆಗೆ ಕಟ್ಟಡಗಳ ಭಗ್ನಾವಶೇಷಗಳನ್ನು ಕೂಡಾ ರಸ್ತೆ ಬದಿ, ಖಾಲಿ ಜಾಗದಲ್ಲಿ ಸುರಿದು ಹೋಗುತ್ತಾರೆ. ಅದಲ್ಲದೆ ಅನುಪಯುಕ್ತ ವಸ್ತುಗಳನ್ನು ಕೂಡ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ. ಆದ್ದರಿಂದ ಪಾಲಿಕೆಯ 8 ವಲಯಗಳಲ್ಲಿ ಬರುವ ಎಲ್ಲಾ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ಶಾಶ್ವತವಾಗಿ ತಪ್ಪಿಸಲು ಕ್ರಮ ಕೈಗೊಂಡಿದೆ.

ನಗರದಲ್ಲಿ ಕಸ ಸುರಿಯುವ ಸ್ಥಳ (ಬ್ಲಾಕ್ ಸ್ಪಾಟ್) ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಿರುವ ಬಿಬಿಎಂಪಿ, ಇದಕ್ಕಾಗಿ ದೂರು ಕೇಂದ್ರ ಸ್ಥಾಪಿಸಿ ಪ್ರತ್ಯೇಕವಾಗಿ ವಾಟ್ಸಪ್ ಸಂಖ್ಯೆಯನ್ನು ನೀಡಿದೆ. ಜನರು ಸದರಿ ವಾಟ್ಸಪ್ ಸಂಖ್ಯೆಗೆ ಸಂದೇಶದ ಮೂಲಕ ದೂರು ದಾಖಲಿಸಬಹುದಾಗಿದೆ.

ಜನರಪು 9448197197 ಈ ಸಂಖ್ಯೆಗೆ ಛಾಯಾಚಿತ್ರದೊಂದಿಗೆ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದು. ಆ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ತ್ಯಾಜ್ಯ/ಕಸ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಲಿದ್ದಾರೆ.

Continue Reading

ರಾಜಕೀಯ

ನಾಯಕತ್ವದಿಂದ ಸಿದ್ದರಾಮಯ್ಯ ಕಲಿಯಬೇಕು: ಕೇಂದ್ರ ಸಚಿವ ವಿ.ಸೋಮಣ್ಣ

ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಬದಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 8 ದಿನಗಳ ಕಾಲ ನವದೆಹಲಿಗೆ ಭೇಟಿ ನೀಡಿ ಪ್ರಧಾನಿಮಂತ್ರಿಗಳ ಆಡಳಿತ ಶೈಲಿಯನ್ನು ವೀಕ್ಷಿಸಿ, ಕರ್ನಾಟಕದಲ್ಲಿ “ಜನಪರ ವಿಧಾನ” ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ 11 ವರ್ಷಗಳ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತಕ್ಕೆ ಸಿದ್ದರಾಮಯ್ಯ ಶೂನ್ಯ ಅಂಕ ನೀಡಿದ್ದರ ಕುರಿತು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರ ಹೇಳಿಕೆಗಳು ಅಪ್ರಬುದ್ಧವಾಗಿವೆ. ರಾಜ್ಯದ ಜನರು ಸಿಎಂ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಿದ್ದರಾಮಯ್ಯ ಅಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ ಪ್ರಧಾನಿ ಮೋದಿ ಅವರ ನಾಯಕತ್ವ ನೋಡಿ ಕಲಿಯಬೇಕಿದೆ ಎಂದು ಹೇಳಿದರು.

ನಾನು ಕೂಡ ಮೊದಲು ಕಾಂಗ್ರೆಸ್ ಜೊತೆಗಿದ್ದೆ. ಅಂದಿನ ಸಿದ್ದರಾಮಯ್ಯ ಮತ್ತು ಇಂದಿನ ಸಿದ್ದರಾಮಯ್ಯ ನಡುವೆ ಅಗಾಧ ವ್ಯತ್ಯಾಸವಿದೆ. ಕಾಂಗ್ರೆಸ್ ನಾಯಕರಿಗೆ ನೈತಿಕ ಸಮಗ್ರತೆಯ ಕೊರತೆಯಿದೆ. ಮೋದಿಯವರ ಜನಪರ ಆಡಳಿತವನ್ನು ನೋಡಿ, ಅವರು ತಮ್ಮದೇ ಆದ ನ್ಯೂನತೆಗಳ ಬಗ್ಗೆ ಅರಿತುಕೊಳ್ಳುತ್ತಿದ್ದಾರೆ.

ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರುನಾಮಕರಣ ಮಾಡುವ ಬಗ್ಗೆ ನಡೆಯುತ್ತಿರುವ ಚರ್ಚೆ ಕುರಿತು ಮಾತನಾಡಿ, ಇದು ನರಿ ಮತ್ತು ಕುರಿಮರಿಯ ಕಥೆಯಂತೆ ಎಂದು ವ್ಯಂಗ್ಯವಾಡಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ಈ ವಿಷಯದಲ್ಲಿ ಆತುರದಿಂದ ವರ್ತಿಸುವುದಿಲ್ಲ ಎಂದು ನಾನು ನಂಬುತ್ತೇನೆ. ನಾನು ಇನ್ನೂ ಯಾವುದೇ ನಿಲುವನ್ನು ತೆಗೆದುಕೊಂಡಿಲ್ಲ. ಅದು ಪ್ರಯೋಜನಕಾರಿ ಎಂದು ತೋರಿದರೆ, ನಾನು ಅದನ್ನು ಬೆಂಬಲಿಸುತ್ತೇನೆ

Continue Reading

Trending