ದೇಶ

ನಮಗೆ ಉಳಿದಿರೋದು ಮಗನ ಫೋಟೋ ಮಾತ್ರ: ಹುತಾತ್ಮಸಿಂಗ್ ಪೋಷಕರು

ನವದೆಹಲಿ: ತಮ್ಮ ಮಗ ಹುತಾತ್ಮನಾಗಿದ್ದಾನೆ, ಸೊಸೆ ಗೌರವ ಮತ್ತು ಪರಿಹಾರದ ಮೊತ್ತ ಎರಡನ್ನು ತೆಗೆದುಕೊಂಡಿದ್ದಾಳೆ, ಮಗನೂ ಹೊರಟುಹೋದ, ಸೊಸೆಯೂ ಎಲ್ಲವನ್ನು ತೆಗೆದುಕೊಂಡು ಹೋಗಿದ್ದಾಳೆ, ನಮಗೆ ಉಳಿದಿರುವುದು ಮಗನ ಫೋಟೋ ಮಾತ್ರ, ಇದು ಕಳೆದ ವರ್ಷ ಸಿಯಾಚಿನ್‍ನಲ್ಲಿ ಕರ್ತವ್ಯದಲ್ಲಿದ್ದಗ ಹುತಾತ್ಮರಾದ ಅಂಶುಮಾನ್ ಸಿಂಗ್ ಅವರ ಪೋಷಕರು ಮಾಧ್ಯಮದೆದುರು ತೋಡಿಕೊಂಡ ನೋವು..
ಯೋಧರ ಸಾವಿನ ಸಂದರ್ಭದಲ್ಲಿ ಕುಟುಂಬ ಸದಸ್ಯರಿಗೆ ಆರ್ಥಿಕ ನೆರವು ನೀಡಲು ಭಾರತೀಯ ಸೇನೆಯ ಮುಂದಿನ ಸಂಬಂಧಿಕರ(ಎನ್‍ಒಕೆ ನಿಯಮ) ಮನದಂಡವನ್ನು ಬದಲಾಯಿಸಬೇಕೆಂದೂ ಸಿಂಗ್ ಪೋಷಕರು ಒತ್ತಾಯಿಸಿದ್ದಾರೆ,
ಹುತಾತ್ಮ ಅಂಶುಮಾನ್ ಸಿಂಗ್ ಅವರಿಗೆ ಜುಲೈ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರಣೋತ್ತರವಾಗಿ ಕೀರ್ತಿ ಚಕ್ರವನ್ನು ನೀಡಿ ಗೌರಿವಿಸಿದರು, ಸಿಂಗ್ ಅವರ ಪತ್ನಿ ಸ್ಮøತಿ ಸಿಂಗ್ ಮತ್ತು ಅವರ ತಾಯಿ ಮಂಜು ದೇವಿ ಈ ಗೌರವವನ್ನು ಸ್ವೀಕರಿಸಿದರು, ಕಳೆದ ವರ್ಷ ಸಿಯಾಚಿನ್‍ನಲ್ಲಿ ಕರ್ತವ್ಯದಲ್ಲಿದ್ದಾಗ ಸಿಂಗ್ ತಮ್ಮ ಒಡನಾಡಿಗಳನ್ನು ಬೆಂಕಿಯಿಂದ ರಕ್ಷಿಸುವ ವೇಳೆ ಸಜೀವ ದಹನಗೊಂಡಿದ್ದರು,
ಹುತಾತ್ಮ ಸಿಂಗ್ ಅವರ ತಂದೆ ರವಿ ಪ್ರತಾಪ್ ಸಿಮಗ್ ಭಾರತೀಯ ಸೇನೆಯ ಮುಂದಿನ ಸಂಬಂಧಿಕರ ಮಾನದಂಡದಲ್ಲಿ ಬದಲಾವಣೆಯನ್ನು ಬಯಸುವುದಾಗಿ ಹೇಳಿದ್ದಾರೆ, ಇದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜೊತೆಗೆ ಮಾತುಕತೆ ನಡೆಸಲಾಗಿದೆ, ರಾಹುಲ್ ಗಾಂಧಿಯವರನ್ನು ಭೇಟಿಯಾದ ಸಂದರ್ಭದಲ್ಲೂ ಇದರಲ್ಲಿ ಬದಲಾವಣೆಯ ಆಶಯವನ್ನು ವ್ಯಕ್ತಪಡಿಸಿದ್ದಾರೆ, ಈ ಆರೋಪಗಳಿಗೆ ಸ್ಮøತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ,

Trending

Exit mobile version