ಬೆಂಗಳೂರು

Breaking News ಕುಮಾರಸ್ವಾಮಿ ತೋಟದ ಮನೆಗೆ ಆಪತ್ತು-ದಾಖಲೆಗಳನ್ನು ತರಿಸಿಕೊಂಡ ಸರ್ಕಾರ!

ಬೆಂಗಳೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಇತ್ತೀಚಿಗೆ ಮುಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತಾಗಿ ವಾಗ್ದಾಳಿ ನಡೆಸಿ, ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು, ದಾಖಲೆಗಳ ಮೂಲಕ ಸಿಎಂ ವಿರುದ್ಧ ಹಗರಣ ನಡೆಸಿದ್ದಾರೆಂದು ಆರೋಪಿಸಿದ್ದರು,
ಇದೀಗ ಇದಕ್ಕೆ ಕೌಂಟರ್ ಎಂಬAತೆ, ಕುಮಾರಸ್ವಾಮಿ ಅವರಿಗೆ ಸೇರಿದ ಬಿಡದಿಯ ಸುಮಾರ್ 30 ಕ್ಕೂ ಹೆಚ್ಚು ಎಕರೆಯ ತೋಟದ ಜಮೀನು ಕುರಿತಾದ ಮೂಲ ದಾಖಲೆಗಳನ್ನು ಕಂದಾಯ ಇಲಾಖೆಯಿಂದ ರಾಜ್ಯ ಸರ್ಕಾರ ಕಲೆಹಾಕಿದೆ ಎಂದು ಹೇಳಲಾಗುತ್ತಿದೆ,
ಈ ಮೂಲಕ ಕುಮಾರಸ್ವಾಮಿ ಅವರು ಜಮೀನು ಯಾವಾಗ ಖರೀದಿ ಮಾಡಿದ್ದರು ನ್ಯಾಯಸಮ್ಮತವಾಗಿದೆಯಾ, ದಾಖಲೆಗಳು ಸರಿಯಾಗಿವೆಯಾ? ಎಂಬಿತ್ಯಾದಿ ಮಾಹಿತಿಯನ್ನು ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ಕಲೆ ಹಾಕಿದ್ದಾರೆ, ಈ ದಾಖಲೆಗಳನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಸಲ್ಲಿದಿದ್ದಾರಂತೆ,
ಒAದು ವೇಳೆ ತೋಟದ ಜಮೀನು ಕಾನೂನು ವಿರುದ್ಧವಾಗಿ ಅಕ್ರಮವಾಗಿ ಪಡೆದಿದ್ದರೆ, ಖರೀದಿಯಲ್ಲಿ ಇನ್ನೇನಾದರೂ ಲೋಪವಾಗಿದ್ದರೆ ಆಗ ಕುಮಾರಸ್ವಾಮಿ ಅವರ ವಿರುದ್ಧ ಹೇಗೆ ಸಮರ ಸಾರಬೇಕು ಅಂತಾ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ವರದಿಯಾಗಿದೆ,

Trending

Exit mobile version