ಬೆಂಗಳೂರು
ನಿಮ್ಮ ಮೈಕ್ ನನ್ನ ಕಂಟ್ರೋಲ್ನಲ್ಲಿದೆ… ಶಾಸಕರ ಮೈಕ್ ಆಫ್ ಮಾಡಿದ ಸ್ಪೀಕರ್!

ಬೆಂಗಳೂರು; ವಾಲ್ಮೀಕಿ ಹಗರಣದ ವಿಚಾರವಾಗಿ ವಿಧಾನಸಭೆಯ 2 ನೇ ದಿನದ ಮುಂಗಾರು ಅಧಿವೇಶನದಲ್ಲಿ ಆಡಳಿತ ಪಕ್ಷದ ಹಾಗೂ ವಿಪಕ್ಷ ನಾಯಕರ ವಾದ..ಪ್ರತಿವಾದ ಗದ್ದಲ ತಾರಕ್ಕೇರಿದೆ, ವಾಲ್ಮೀಕಿ ಹಗರಣದಲ್ಲಿ ದಲಿತರ ಹಣ ಲೂಟಿ ಆಗಿದೆ ಎಂಬ ಕನಿಷ್ಠ ಆತ್ಮಸಾಕ್ಷಿಗಾಗದರೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ವಿಪಕ್ಷ ನಾಯಕ ಆರ್ ಆಶೋಕ್ ಬಿಗಿಪಟ್ಟು ಹಿಡಿದರು,
ಇದಕ್ಕೆ ಎದ್ದು ನಿಂತ ಆಡಳಿತ ಪಕ್ಷದ ನಾಯಕರು ಭೋವಿ ಹಗರಣ..ದೇವರಾಜ್ ಅರಸು ಟ್ರಕ್ ಟರ್ಮಿನಲ್ ಹಗರಣ ಹೀಗೆ ಅನೇಕ ಹಗರಣಗಳು ನಿಮ್ಮ ಅವಧಿಯಲ್ಲಿ ಬಂದಾಗ ಯಾವ ಸಿಎಂ,ಮAತ್ರಿ ರಾಜೀನಾಮೆ ನೀಡಿದ್ದರು ಎಂದು ಸದನಕ್ಕೆ ತಿಳಿಸಿ ಎಂದು ಸಚಿವರಾದ ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು,
ಭೋವಿ ನಿಗಮ, ತಾಂಡಾ ನಿಗಮದಲ್ಲಿ ಹಗರಣ ನಡೆದಾಗ ಯಾಕೆ ಇಡಿ ತನಿಖೆಗೆ ಬರಲಿಲ್ಲ, ನಿಮ್ಮ ಪಕ್ಷದವರೇ ದುಬೈನಲ್ಲಿ ಆಸ್ತಿ ಮಾಡಿದ್ದಾರೆ ಎನ್ನುವ ಯತ್ನಾಳ್ ಅವರೇ ಅಲ್ಲಿಗೂ ಇಡಿ ಕಳುಹಿಸಿ ಎಂದ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದರು, ಇದಕ್ಕೆ ಎದ್ದು ಶಾಸಕ ಯತ್ನಾಳ್ ಅವರು ನಿಮ್ಮ ಪಕ್ಷವೂ ಸ್ವಚ್ಛವಾಗಲಿ ಎಂದು ನಿನ್ನೆಯಂತೆಯೇ ಪುನರುಚ್ಚರಿಸಿದರು,
ಎಲ್ಲರೂ ಟೈಂ ವೇಸ್ಟ್ ಮಾಡಬೇಡಿ, ಸುಮ್ಮನಿರಿ ಎಂದು ಸ್ಟೀಕರ್ ಯು.ಟ.ಖಾದರ್ ಅವರು ಎಷ್ಟೇ ಮನವಿ ಮಾಡಿದರೂ ಸದನದಲ್ಲಿ ಸದ್ದು-ಗದ್ದಲ ಮುಂದುವರಿಯಿತು, ಆಗ ನಿಮ್ಮ ಮೈಕ್ ನನ್ನ ಕಂಟ್ರೋಲ್ನಲ್ಲಿದೆ ಬಂದ್ ಮಾಡಿದ್ದೇನೆ, ಸುಮ್ಮನಿರಿ ಎಂದು ಕೆಲ ಕಾಲ ಸ್ಟೀಕರ್ ಶಾಸಕರ ಮೈಕ್ ಬಂದ ಮಾಡಿದ ಪ್ರಸಂಗ ನಡೆಯಿತು…