ಬೆಂಗಳೂರು

ಜಿಟಿ ಮಾಲ್‍ಗೆ ಶಾಕ್ 7 ದಿನ ಮಾಲ್ ಬಂದ್!

ಬೆಂಗಳೂರು: 3ನೇ ದಿನದ ವಿಧಾನಮಂಡಲದ ಅಧಿವೇಶನ ಆರಂಭವಾಗಿದ್ದು ಬೆಂಗಳೂರಿನ ಪ್ರತಿಷ್ಠಿತ ಜಿಟಿ ಮಾಲ್ ಯಡವಿಟ್ಟಿನ ಬಾರೀ ಚರ್ಚೆ ನಡೆಯಿತು. ರೈತ ಫಕೀರಪ್ಪ ಎಂಬುವವರು ಪಂಚೆ ಧರಿಸಿದ್ದ ಕಾರಣ ಅವರನ್ನು ಒಳಗೆ ಪ್ರವೇಶಕ್ಕೆ ನಿರಾಕರಣೆ ಮಾಡಲಾಗಿತ್ತು, ಈ ವಿಚಾರವಾಗಿ ಇಂದು ಸದನದಲ್ಲಿ ಧ್ವನಿ ಎತ್ತಿದ ಶಾಸಕ ಲಕ್ಷಣ್ ಸವದಿ, 7 ದಿನಗಳ ಕಾಲ ಜೆಟಿ ಮಾಲ್ ಗೆ ವಿದ್ಯತ್ ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು,
ಇದೇ ವೇಳೆ ಧ್ವನಿಗೊಡಿಸಿದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ, ಕರೆಂಟ್ ಕಟ್ ಮಾತ್ರವಲ್ಲ, ಮಾಲ್‍ನ ಸೆಕ್ಯೂರಿಟಿ ಏಜೆನ್ಸಿಯನ್ನೇ ಬ್ಯಾನ್ ಮಾಡಬೇಕು ಎಂದರು, ಅತ್ತ ಸಚಿವ ಬೈರತಿ ಸುರೇಶ್ ಎದ್ದು ನಿಂತು ಸರ್ಕಾರಕ್ಕೆ ಎಲ್ಲ ಅಧಿಕಾರವಿದೆ, ಏಳು ದಿನಗಳ ಕಾಲ ಜಿಟಿ ಮಾಲ್ ಬಂದ್ ಮಾಡಿಸುತ್ತೇವೆ ಎಂದು ಸದನಕ್ಕೆ ಉತ್ತರಿಸಿದರು,

Trending

Exit mobile version