ದೇಶ

ಲಡ್ಡು ತಾಜಾತನದ ಬಗ್ಗೆ ಅನುಮಾನ-ವದಂತಿಗಳಿಗೆ ತೆರೆ ಎಳೆದ ತಿರುಪತಿ ದೇವಾಲಯ!

ತಿರುಪತಿ ಲಡ್ಡುವಿನ ತಾಜಾತನದ ಬಗ್ಗೆ ಯಾವುದೇ ಊಹಾಪೂಹಗಳನ್ನು ನಂಬಬೇಡಿ ಎಂದು ತಿರುಪತಿ ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ,
ಲಡ್ಡುಗಳನ್ನು ನಿತ್ಯವೂ ಹೊಸದಾಗಿಯೇ ಸಿದ್ಧಗೊಳಿಸಲಾಗುತ್ತಿದ್ದು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ದೇವಾಲಯ ಮನವಿ ಮಾಡಿದೆ,
ಭಕ್ತರಿಗೆ ಹಂಚುವ ಲಡ್ಡುಗಳು ತಾಜಾ ಅಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು, ಈ ಕುರಿತು ಇದೀಗ ಸ್ವಷ್ಟನೆ ನೀಡಲಾಗಿದ್ದು ಸುಳ್ಳು ಸುದ್ದಿಗಳನ್ನು ಮಾಡಿದ್ದ ಯೂಟ್ಯೂಬ್ ಚಾನೆಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ಎಚ್ಚರಿಸಿದೆ,
ತಿರುಪತಿ ಲಡ್ಡುವಿನ ಬಗ್ಗೆ ಅನುಮಾನ ಬೇಡ ನಿತ್ಯವೂ ಹೊಸದಾಗಿ ಲಡ್ಡುಗಳನ್ನು ತಯಾರಿಸಲಾಗುತ್ತಿದೆ, ವದಂತಿಗಳಿಗೆ ಕಿವಿಕೊಡಬೇಡಿ ಎಂದು ಆಡಳಿತ ಭಕ್ತರಲಿ ಮನವಿ ಮಾಡಿಕೊಂಡಿದೆ,
ಲಡ್ಡು ತಯಾರಿಕೆಯಲ್ಲಿ ಸುಮಾರು 980 ಜನರು ಕೆಲಸ ಮಾಡುತ್ತಿದ್ದಾರೆ, ಬಹಳಷ್ಟು ವರ್ಷಗಳಿಂದ ಇದೇ ಪರಂಪರೆ ಮುಂದುವರೆದಿದೆ,
ತಿರುಮಲ ತಿರುಪತಿ ದೇವಸ್ಧಾನಗಳು ಒಂದು ಲಕ್ಷ ತಿರುಪತಿ ಲಡ್ಡುಗಳನ್ನು ಅಯೋಧ್ಯೆಗೆ ಕಳುಹಿಸಿತ್ತು, ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಶಂಕುಸ್ಧಾಪನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಭಕ್ತರು ತಿರುಪತಿ ಲಡ್ಡು ಪ್ರಸಾದವನ್ನು ಪಡೆದಿದ್ದರು,

Trending

Exit mobile version