ಬೆಂಗಳೂರು
ಮೋಹನ್ ದಾಸ್ ಪೈ, ಮಜುಂದಾರ್ ವಿರುದ್ಧ ಚೇತನ್ ಕಿಡಿ!

ಬೆಂಗಳೂರು: ಕರ್ನಾಟಕದಲ್ಲಿ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಮೀಸಲಾತಿ ನೀಡಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಇತ್ತೀಚಿಗೆ ಹೇಳಿಕೆ ನೀಡಿದ ಇನ್ಫೋಸಿಸ್ನ ಮಾಜಿ ಸಿಎಫ್ಒ ಮೋಹನ್ ದಾಸ್ ಪೈ ಹಾಗೂ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ವಿರುದ್ಧ ನಟ ಚೇತನ್ ಕಿಡಿಕಾರಿದ್ದಾರೆ,
ಈ ಬಗ್ಗೆ ಎಕ್ಸ್ ನಲ್ಲಿ ಬರೆದುಕೊಂಡಿರುವ ಚೇತ್ನ ಕಡಿವಾಣವಿಲ್ಲದ ಬಂಡವಾಳಶಾಹಿಗಳಾದ ಮೋದನ್ ದಾಸ್ ಪೈ ಮತ್ತು ಕಿರಣ್ ಮಜುಂದಾರ್ ಶಾ ಕರ್ನಾಟಕದ ಸ್ಧಳೀಯರಿಗೆ ಉದ್ಯೋಗ ಮೀಸಲಾತಿಯನ್ನು ವಿರೋಧಿಸುತ್ತಾರೆ,
ವಿಪರ್ಯಾಸವೆಂದರೆ ಈ ಇಬ್ಬರು ಗಣ್ಯರು 2002 ಮತ್ತು 2004 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನ ಪಡೆದವರು,
ಕನ್ನಡಿಗರ ವಿರೋಧಿ ಚಿಂತಕರು ನಮ್ಮ ಸ್ಧಳೀಯರ ಸಾಮಥ್ರ್ಯವನ್ನು ಕಡಿಮೆ ಎಂದುಕೊಂಡಿದ್ದಾರೆ ಮತ್ತು ಯಾವುದೇ ಪ್ರಶಸ್ತಿ ಅಥವಾ ಸರ್ಕಾರವು ಪ್ರಯೋಜನಗಳಿಗೆ ಅರ್ಹರಲ್ಲ ಎಂದು ವಾಗ್ದಾಳಿ ನಡಿಸಿದ್ದಾರೆ,