ಬೆಂಗಳೂರು

ನಿಗಮಗಳಲ್ಲಿ ಕೆಲ MD, ಅಧಿಕಾರಿಗಳೇ ಖದೀಮರು- ಡಿ ಕೆ ಶಿವಕುಮಾರ್

ಬೆಂಗಳೂರು: ರಾಜ್ಯ ರಾಜಕಾರಂದಲ್ಲಿ ಭಾರೀ ಸದ್ದು ಮಾಡುತ್ತಿರುವ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಎಫೆಕ್ಟ್‍ನಿಂದಾಗಿ ನಿನ್ನೆಯಷ್ಟೇ ರಾಜ್ಯ ಹಣಕಾಸು ಇಲಾಖೆ ವಿವಿಧ ನಿಗಮಗಳಲ್ಲಿನ 2,250 ಕೋಟಿ ರೂಪಾಯಿ ವಾಪಸ್ ಪಡೆದಿತ್ತು,
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ನಿಗಮಗಳಲ್ಲಿ ಕೆಲವು ಎಂಡಿಗಳು ಹಾಗೂ ಅಧಿಕಾರಿಗಳು ಖದೀಮರಿದ್ದಾರೆ, ಅಲ್ಲಿಂದ ಬಂದು ಇಲ್ಲಿ ಸೇರಿಕೊಂಡಿದ್ದಾರೆ, ಅವರೇ ದೊಡ್ಡ ಖದೀಮರು, ಬಿಜೆಪಿ ಆಡಳಿತದಲ್ಲೂ ತಿಂದು ತೇಗಿ ಈಗಲೂ ಸೇರಿದ್ದಾರೆ, ಬಿಜೆಪಿ ಅವಧಿಯಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಅಕ್ರಮ ನಡೆದಿದೆ ಎಂದು ಡಿಕೆಶಿ ಆರೋಪಿಸಿದರು,
ಬಿಜೆಪಿ ಅವಧಿಯಲ್ಲಿ ಡಿ ಗ್ರೂಪ್ ನೌಕರರನ್ನು ಎಂಡಿ ಮಾಡಿದ್ದಾರೆ, ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚಲಾಗುವುದು, ನಿಗಮಗಳಲ್ಲಿ ಪಾರದರ್ಶಕತೆ ತರುವ ದೃಷ್ಟಿಯಿಂದ ಇಲಾಖೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಮುಂದಾಗಿದೆ ಎಂದರು,

Trending

Exit mobile version