Connect with us

ಬೆಂಗಳೂರು

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದೆಂದು ಕೇಂದ್ರ ವಾಮಮಾರ್ಗ ಅನುಸರಿಸುತ್ತಿದೆ: ಸಿಎಂ ಸಿದ್ದರಾಮಯ್ಯ – CM Siddaramaiah

ಬೆಂಗಳೂರು: “ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದೆಂದು ಕೇಂದ್ರ ಸರ್ಕಾರ ವಾಮಮಾರ್ಗವನ್ನು ಅನುಸರಿಸುತ್ತಿದೆ” ಎಂದು ವಾಲ್ಮೀಕಿ ಹಗರಣದಲ್ಲಿ ಇಡಿ ತನಿಖೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಇಂದು ಪ್ರತಿಭಟನೆ ವೇಳೆ ಮಾತನಾಡಿದ ಅವರು, “ಇಡಿ ಅಧಿಕಾರಿಗಳು ಜೀವಭಯ ಉಂಟುಮಾಡಿ ಕಲ್ಲೇಶ್​ಗೆ ಅನಗತ್ಯವಾಗಿ ನನ್ನ ಹೆಸರು ಹೇಳುವಂತೆ ಬೆದರಿಸಿದ್ದಾರೆ. ಅವರು ದೂರು ಕೊಟ್ಟು ಕೇಸ್ ಕೂಡ ರಿಜಿಸ್ಟರ್ ಮಾಡಿದ್ದಾರೆ. ಒಟ್ಟಾರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಬೇಕು, ಸಿಎಂ ಅವರನ್ನು ಟಾರ್ಗೆಟ್​​ ಮಾಡಬೇಕು, ಸಿಎಂ ಇಮೇಜ್​ ಕಡಿಮೆ ಮಾಡಬೇಕು. ಪರಿಶಿಷ್ಟ ವರ್ಗದವರ ಪರವಾಗಿ ನಾವಿದ್ದೇವೆ ಅಂತಾ ಹೇಳಬೇಕು ಎಂದು ಈ ರೀತಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಶೇ.90ರಷ್ಟು ಎಸ್ಐಟಿಯಿಂದ ತನಿಖೆ ಮುಗಿದಿದೆ. ಬ್ಯಾಂಕ್​ನವರೇ ಕಾರಣ ಅಂತ ಅವರು ತಿಳಿಸಿದ್ದಾರೆ. ಹಾಗಾಗಿ, ಸಿಬಿಐ ತನಿಖೆ ಮಾಡುತ್ತಿದೆ. ಇಡಿಯವರು ನಾಗೇಂದ್ರ ದದ್ದಲ್​ ಮನೆ ಮೇಲೆ ದಾಳಿ​ ಮಾಡಿ, ಅವರನ್ನು ವಶಕ್ಕೆ ತೆಗೆದುಕೊಂಡು ಈಗ ಬಂಧನಕ್ಕೆ ಕೊಟ್ಟಿದ್ದಾರೆ. ಇದಕ್ಕೆ ಮುಖ್ಯಮಂತ್ರಿಯವರಿಂದ ಆದೇಶವಿದೆ ಅಂತಾ ಬರೆದುಕೊಡಿ ಎಂದು ಇಡಿಯವರು ಒತ್ತಡ ಹಾಕುತ್ತಿದ್ದಾರೆ” ಎಂದರು.

“ವಾಲ್ಮೀಕಿ ಹಗರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ತನಿಖೆ ಬಹಳ ವೇಗವಾಗಿ ನಡೆಯುತ್ತಿದೆ. ಹಿಂದೆ ಬಿಜೆಪಿ ಕಾಲದಲ್ಲಿ ನಡೆದ ಹಗರಣಗಳ ತನಿಖೆಗೆ ಇಡಿ ಬಂದೇ ಇಲ್ಲ. ಸಿಬಿಐ ತನಿಖೆಗೆ ಬಿಜೆಪಿ ಸರ್ಕಾರ ಯಾವುದೇ ಪ್ರಕರಣವನ್ನೂ ಕೊಟ್ಟಿಲ್ಲ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇರುವುದರಿಂದ ಪ್ರಕರಣವನ್ನು ಸಿಬಿಐಗೆ ಕೊಡಿ, ಸಿಬಿಐಗೆ ಕೊಡಿ ಅನ್ನುತ್ತಿದ್ದಾರೆ. ನಾವು ಹಲವು ಪ್ರಕರಣಗಳನ್ನು ಸಿಬಿಐ ತನಿಖೆಗೆ ಕೊಟ್ಟಿದ್ದೇವೆ. ಯಾವುದು ಅಗತ್ಯ ಇದೆಯೋ ಅದನ್ನೆಲ್ಲಾ ಕೊಟ್ಟಿದ್ದೇವೆ” ಎಂದರು.

ಮುಂದುವರೆದು ಮಾತನಾಡಿದ ಸಿಎಂ, “25 ಕೋಟಿಗಿಂತ ಅಧಿಕ ಹಣ ಹಗರಣವಾದರೆ ಸಿಬಿಐ ತನಿಖೆಗೆ ಬರಬೇಕು. ಬರಲಿ, ತನಿಖೆ ಮಾಡಲಿ, ನಮ್ಮದೇನೂ ತಕರಾರಿಲ್ಲ. ಆದರೆ ಕಾನೂನು ಬಾಹಿರವಾಗಿ ಯಾರನ್ನೋ ಗುರಿಯಾಗಿಸಿಕೊಂಡು ತನಿಖೆ ಮಾಡಬಾರದು. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಹೋಗಬಾರದು. ಇದನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್​ನಲ್ಲಿ ಪ್ರಸ್ತಾಪಿಸುತ್ತೇವೆ. ರಾಜಕೀಯ ದ್ವೇಷ, ರಾಜಕೀಯ ಸೇಡಿನ ಬಗ್ಗೆ ತೀವ್ರವಾಗಿ ಖಂಡಿಸುತ್ತೇವೆ. ಹೈಕಮಾಂಡ್ ನಾಯಕರ ಜೊತೆಗೂ ಮಾತಾಡಿದ್ದೇವೆ. ಲೋಕಸಭೆಯಲ್ಲಿ ಇದನ್ನು ಪ್ರಸ್ತಾಪಿಸಲು ಹೇಳಿದ್ದೇವೆ. ಯಾರ ಮುಲಾಜಿಗೂ ಒಳಗಾಗಲ್ಲ, ಯಾರನ್ನು ರಕ್ಷಣೆ ಮಾಡುವುದಿಲ್ಲ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು” ಎಂದು ವಾಗ್ಧಾಳಿ ಮಾಡಿದರು.

ಬೆಂಗಳೂರು

ಪತ್ನಿ ಬಳಿಯೂ ರಾಜಕೀಯ ಮಾತಾಡಲ್ಲ, ಪರಂ ಗರಂ!

ಬೆಂಗಳೂರು: ಮಂಗಳೂರಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳ ಬಳಿಕ ಇತ್ತೀಚಿಗೆ ಆರ್‍ಸಿಬಿ ತಂಡ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಜನ ಉಸಿರು ಚೆಲ್ಲಿದ್ದಾರೆ,
ನಿರಂತರವಾಗಿ ಕಾನೂನು ವ್ಯವಸ್ಧೆ ಹದಗೆಡುತ್ತಿದೆ, ಗೃಹ ಸಚಿವ ಜಿ.ಪರಮೇಶ್ವರ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳ ಆಗ್ರಹ ಬೆನ್ನಲ್ಲೇ ತಮಗಿರುವ ಗೃಹ ಇಲಾಖೆ ಖಾತೆ ಬದಲಾಯಿಸಿ ಎಂದು ಪರಮೇಶ್ವರ್ ಅವರು ಕೇಳಿಕೊಂಡಿದ್ದಾರೆ ಎಂಬ ವದಂತಿಗೆ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ,
ಏನೇ ಇದ್ದರೂ ನನ್ನ ಬಳಿಯೇ ಸ್ಪಷ್ಟನೇ ಕೇಳಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ನಾನು ನನ್ನ ಪತ್ನಿ ಬಳಿಯೂ ಯಾವತ್ತೂ ರಾಜಕೀಯ ಮಾತನಾಡಲ್ಲ, ಹೀಗಿರವಾಗ ಈ ವದಂತಿ ಏಕೆ? ಖಾತೆ ಬದಲಾವಣೆ ಅಂತಾ ನಿಮಗೆ ಯಾರು ಹೇಳಿದ್ದಾರೆ? ಏನೇ ಇದ್ದರೂ ನನ್ನ ಬಳಿ ಮಾಹಿತಿ ಪಡೆಯಿರಿ ಎಂದಿದ್ದಾರೆ,
ನಾನು ಸಾಫ್ಟ್ ಆಗಿಯೇ ನಡೆದುಕೊಂಡಿದ್ದೇನೆ, ಏನೇ ಕೇಳಿ ನಾನೇ ಉತ್ತರ ಕೊಡುತ್ತೇನೆ, ಸುಮ್ಮನೇ ಒಬ್ಬರ ವ್ಯಕ್ತಿತ್ವದ ಕೊಲೆ ಮಾಡಬಾರದು, ಅದು ಯಾರಿಗೂ ಶೋಭೆ ತರಲ್ಲ, ಖಾತೆ ಬದಲಾಯಿಸಿ ಎಂದು ಸಿಎಂ ಹೇಳಿದ್ದಾರೆ ಎಂಬ ಸುದ್ದಿ ಸುಳ್ಳು, ಈ ರೀತಿ ಹೇಳಬೇಡಿ, ಇಂತಹ ವದಂತಿಯಿಂದ ನಮ್ಮ ಮತದಾರರು ಅಭಿಮಾನಿಗಳಿಗೆ ತಪ್ಪಾಗಿ ಸಂದೇಶ ಹೋಗುತ್ತದೆ, ಇದೇ ಖಾತೆಯನ್ನೇ ನೀಡಿ ಎಂದು ನಾನು ಯಾರಿಗೂ ಕೇಳಿಲ್ಲ, ಕಾಲ್ತುಳಿತ ದುರಂತದಿಂದ ಎಲ್ಲರಿಗೂ ನೋವಾಗಿದೆ, ಇದರ ಮಧ್ಯೆ ಖಾತೆ ಬದಲಾವಣೆ ಎಂಬ ಸಂಗತಿ ಸತ್ಯಕ್ಕೆ ದೂರವಾದದ್ದು ಎಂದು ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.

Continue Reading

ಬೆಂಗಳೂರು

ಚಿನ್ನಸ್ವಾಮಿ ಸ್ಟೇಡಿಯಂ ಸೇನೆ ಜಾಗ, ವಶಕ್ಕೆ ಪಡೆಯಿರಿ! ಪ್ರಧಾನಿಗೆ ಪತ್ರ ಬರೆಯಲು ಮುಂದಾದ ಸಂಘಟನೆ!

ಬೆಂಗಳೂರು: ಆರ್‍ಸಿಬಿ ತಂಡದ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದ ಘಟನೆಯಲ್ಲಿ 11 ಜನರ ಸಾವಿನ ದುರಂತ ಇಡೀ ಸರ್ಕಾರಕ್ಕೆ ಮುಜುಗರವುಂಟು ಮಾಡಿದೆ, ಇನ್ನೊಂದೆಡೆ ಪ್ರತಿಪ್ಕಷಗಳು ಮಾತ್ರವಲ್ಲ ಹೈಕೋರ್ಟ್ ಸಹ ಘಟನೆ ಟೀಕಿಸಿ ರಾಜ್ಯ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದೆ,
ರಾಜ್ಯಕ್ಕೆ ಈ ಘಟನೆ ಕಪ್ಪು ಚುಕ್ಕೆಯಾಗಿರುವ ಬೆನ್ನಲ್ಲೇ ಇದೀಗ ಚಿನ್ನಸ್ವಾಮಿ ಸ್ಟೇಡಿಯಂ ಸ್ಧಳಾಂತರದ ಬಗ್ಗೆ ಚರ್ಚೆಗಳೂ ಆರಂಭವಾಗಿದೆ, ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು ಕಡಿಮೆ ಸಾರ್ಮಥ್ಯವಿರುವ ಕ್ರಿಕೆಟ್ ಕ್ರೀಡಾಂಗಣವನ್ನು ಬೇರೆಡೆಗೆ ಸ್ಧಳಾಂತರಿಸುವ ಬಗ್ಗೆ ಸರ್ಕಾರ ಗಮನಹರಿಸಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಈ ವಿಷಯ ಸರ್ಕಾರ ಪರಿಶೀಲಿಸಲಿದೆ, ಯಾವ ಸರ್ಕಾರದ ಅವಧಿಯಲ್ಲಿಯೂ ಇಂತಹ ಅಹಿತಕರ ಘಟನೆ ನಡೆಯಬಾರದು, ವೈಯಕ್ತಿಕವಾಗಿ ಈ ಘಟನೆ ಸರ್ಕಾರಕ್ಕೆ ನೋವು ತಂದಿದೆ ಎನ್ನುತಲೇ ಸ್ಧಳಾಂತರದ ಸುಳಿವು ನೀಡಿದ್ದರು,
ಇದೀಗ ಮಹತ್ವದ ಬೆಳವಣಿಗೆ ಎಂಬಂತೆ ಚಿನ್ನಸ್ವಾಮಿ ಸ್ಟೇಡಿಯಂ ಸ್ಧಳಾಂತರಿಸುವಂತೆ ಕೋರಿ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ನಿರ್ಧರಿಸಿದೆ, ಕ್ರೀಡಾಂಗಣವಿರುವ ಜಾಗ ಭಾರತೀಯ ಸೇನೆಗೆ ಸೇರಿದ್ದು, ಈ ಸ್ಧಳ ವಶಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿಸಿದ್ದೇವೆ ಎಂದು ಸಂಘಟನೆ ತಿಳಿಸಿದೆ, ಈ ಕುರಿತು ಮಾತನಾಡಿರುವ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಶೆಟ್ಟಿ ಚಿನ್ನಸ್ವಾಮಿ ಸ್ಟೇಡಿಯಂ ಸೇನೆಗೆ ಸೇರಿದ ಜಾಗ, 18.50 ಎಕರೆ ಈ ಜಾಗವಾಗಿದೆ, ಇದು ಆರ್ಮಿಗೆ ಸೇರಿದ್ದು, ನಗರದಿಂದ ಇದನ್ನು ಸ್ಧಳಾಂತರಿಸಲಿ, ಸ್ಟೇಡಿಯಂ ನಿಂದಲೇ ಟ್ರಾಫಿಕ್ ಸಮಸ್ಯೆಯೂ ಆಗುತ್ತಿದೆ, ಹೀಗಾಗಿ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವರಿಗೆ ಪತ್ರ ಬರೆದು ಈ ಕುರಿತು ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ,

Continue Reading

ಬೆಂಗಳೂರು

ಆರೋಗ್ಯ ಇಲಾಖೆಯಿಂದ ಗಂಭೀರ ರೋಗಿಗಳಿಗೆ ಉಚಿತ ಒಪಿಡಿ ಸೇವೆ: ಇನ್ಮುಂದೆ ಮನೆ ಬಾಗಿಲಿಗೆ ಚಿಕಿತ್ಸೆ!

ಕರ್ನಾಟಕ ಆರೋಗ್ಯ ಇಲಾಖೆಯು ಬಡವರಿಗೆ, ಕ್ಯಾನ್ಸರ್ ಪೀಡಿತರಿಗೆ, ವಯೋವೃದ್ಧರಿಗೆ ಮತ್ತು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮನೆ ಬಾಗಿಲಿಗೆ ಉಚಿತ ಒಪಿಡಿ (OPD) ಸೇವೆ ಒದಗಿಸಲು ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ, ಸಿವಿ ರಾಮನ್ ನಗರದ ಸಾರ್ವಜನಿಕ ಆಸ್ಪತ್ರೆಯಿಂದ ಮೊಬೈಲ್ ಆಸ್ಪತ್ರೆ ಮಾದರಿಯಲ್ಲಿ ಚಿಕಿತ್ಸೆ ಆರಂಭವಾಗಿದೆ. ಈ ಕಾರ್ಯಕ್ರಮವು ಆರೋಗ್ಯ ಕ್ಷೇತ್ರದಲ್ಲಿ ಸಮಾಜದ ದುರ್ಬಲ ವರ್ಗಕ್ಕೆ ಗುಣಮಟ್ಟದ ಚಿಕಿತ್ಸೆಯನ್ನು ತಲುಪಿಸುವ ಗುರಿಯನ್ನು ಹೊಂದಿದೆ.

ಯೋಜನೆಯ ವಿಶೇಷತೆಗಳೇನು?

ರಾಜ್ಯದಲ್ಲಿ ಮೊದಲ ಬಾರಿಗೆ, ಕ್ಯಾನ್ಸರ್, ಹೃದಯ ಸಮಸ್ಯೆ, ಬ್ರೇನ್ ಹೆಮರೇಜ್ ಮತ್ತು ಇತರ ಗಂಭೀರ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಆರೋಗ್ಯ ಇಲಾಖೆಯು ಮನೆಗೆ ತೆರಳಿ ಉಚಿತ ಒಪಿಡಿ ಸೇವೆ ಒದಗಿಸಲಿದೆ. ಸಿವಿ ರಾಮನ್ ನಗರದ ಸಾರ್ವಜನಿಕ ಆಸ್ಪತ್ರೆಯಿಂದ ಈ ಯೋಜನೆಯನ್ನು ಪೈಲಟ್ ಯೋಜನೆಯಾಗಿ ಆರಂಭಿಸಲಾಗಿದೆ. ಈ ಸೇವೆಯಿಂದ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡದೆಯೇ ತಮ್ಮ ಮನೆಯ ಬಳಿಯೇ ಚಿಕಿತ್ಸೆ ಪಡೆಯಬಹುದು.

ಗಂಭೀರ ರೋಗಿಗಳಿಗೆ ಆಸ್ಪತ್ರೆಗೆ ತೆರಳುವುದು ಕಷ್ಟಕರವಾಗಿರುತ್ತದೆ. ಆಸ್ಪತ್ರೆಯಲ್ಲಿ ಕಾಯುವ ಸಾಲುಗಳು, ದೀರ್ಘ ಕಾಯುವಿಕೆ, ಮತ್ತು ಆರ್ಥಿಕ ಒತ್ತಡದಿಂದ ಬಳಲುವವರಿಗೆ ಈ ಯೋಜನೆಯು ತುರ್ತು ಚಿಕಿತ್ಸೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ, ಮೊಬೈಲ್ ಆಸ್ಪತ್ರೆಗಳ ಮೂಲಕ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ನೇರವಾಗಿ ರೋಗಿಗಳ ಮನೆಗೆ ತೆರಳಿ ಚಿಕಿತ್ಸೆ ನೀಡಲಿದ್ದಾರೆ.

ಪ್ರಸ್ತುತ, ಸಿವಿ ರಾಮನ್ ನಗರದಿಂದ ಐದಕ್ಕೂ ಹೆಚ್ಚು ಪ್ರದೇಶಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಬೆಂಗಳೂರಿನ ಇತರ ಪ್ರದೇಶಗಳಿಗೆ ಮತ್ತು ರಾಜ್ಯದ ಇತರ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆಯಿದೆ ಎಂದು ಸಿವಿ ರಾಮನ್ ನಗರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್ ತಿಳಿಸಿದ್ದಾರೆ.

ಈ ಯೋಜನೆಯಿಂದ ಬಡವರಿಗೆ, ವಯೋವೃದ್ಧರಿಗೆ, ಮತ್ತು ಗಂಭೀರ ರೋಗಿಗಳಿಗೆ ಆರ್ಥಿಕ ಹೊರೆಯಿಲ್ಲದೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಲಿದೆ. ಒಬ್ಬ ರೋಗಿಯ ತಾಯಿ ಆಶಾದೇವಿ, “ಈ ಸೇವೆಯಿಂದ ಬಡವರಿಗೆ ತುಂಬಾ ಉಪಯೋಗವಾಗಲಿದೆ. ಸರ್ಕಾರ ಈ ಯೋಜನೆಯನ್ನು ಎಲ್ಲೆಡೆ ವಿಸ್ತರಿಸಬೇಕು,” ಎಂದು ಒತ್ತಾಯಿಸಿದ್ದಾರೆ.

ಯೋಜನೆಯ ಪ್ರಯೋಜನಗಳು:
  • ಉಚಿತ ಚಿಕಿತ್ಸೆ: ಕ್ಯಾನ್ಸರ್, ಹೃದಯ ಸಮಸ್ಯೆ, ಬ್ರೇನ್ ಹೆಮರೇಜ್ ಇತ್ಯಾದಿ ಗಂಭೀರ ರೋಗಿಗಳಿಗೆ ಉಚಿತ ಒಪಿಡಿ ಸೇವೆ.
  • ಮನೆ ಬಾಗಿಲಿಗೆ ಸೇವೆ: ಆಸ್ಪತ್ರೆಗೆ ತೆರಳುವ ತೊಂದರೆ ತಪ್ಪಿಸಲು ಮೊಬೈಲ್ ಆಸ್ಪತ್ರೆ ಮಾದರಿ.
  • ದುರ್ಬಲ ವರ್ಗಕ್ಕೆ ಒತ್ತು: ಬಡವರು, ವಯೋವೃದ್ಧರು, ಮತ್ತು ಗಂಭೀರ ರೋಗಿಗಳಿಗೆ ಆದ್ಯತೆ.
  • ತುರ್ತು ಚಿಕಿತ್ಸೆ: ಆಸ್ಪತ್ರೆಯ ಕಾಯುವಿಕೆಯಿಂದ ರೋಗಿಗಳಿಗೆ ಮುಕ್ತಿ.
Continue Reading

Trending