ಬೆಂಗಳೂರು

ಅನ್ಯ ಭಾಷಿಕರಿಗೆ ಅಆಇಈ ಪಾಠ- ಅನ್ನದ ಭಾಷೆಯಾಗಲಿದೆ ಕನ್ನಡ!

ಬೆಂಗಳೂರು; ದಿನೇ ದಿನೇ ಬೆಳೆಯುತ್ತಿದ್ದು ಬೇರೆ ಬೇರೆ ರಾಜ್ಯಗಳಿಂದ ಜನರು ಬರುತ್ತಿರುವುದು ಕೂಡ ಹೆಚ್ಚಾಗುತ್ತದೆ, ಅದರಲ್ಲಿಯೂ ನೆರೆಯ ರಾಜ್ಯ ಕೇರಳದ ಜನ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಈ ಕಾರಣದಿಂದ ಅವರೆಲ್ಲರಿಗೂ ಕನ್ನಡ ಕಲಿಸಲು ರಾಜ್ಯ ಸರ್ಕಾರ ಮುಂದಾಗಿದೆ,
ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದ ಮೂಲಕ ವಿಶೇಷ ಯೋಜನೆ ರೂಪಿಸಿದೆ, ಬೆಂಗಳೂರಿನಲ್ಲಿ ಮಲಯಾಳಂ ಭಾಷಕರಿಗೆ ಕನ್ನಡ ಕಲಿಕೆ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಾಳೆ ಚಾಲನೆ ನೀಡಲಿದೆ,
ವಿಕಾಸ ಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ಯುಟಿ ಖಾದರ್ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ್ ತಂಗಡಗಿ, ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಭಾಗವಹಿಸಲಿದ್ದಾರೆ ಎನ್ನಲಾಗಿದೆ,
ಈ ಉಪಕ್ರಮವು ಅನ್ಯಭಾಷಿಕರಿಗೆ ಭಾಷೆಯನ್ನು ಕಲಿಸಲ ನೆರವಾಗಲಿದೆ, ಇದಕ್ಕಾಗಿ ಬೆಂಗಳೂರು ನಗರದಾದ್ಯಂತ 20 ಕನ್ನಡ ಕಲಿಕಾ ಕೇಂದ್ರಗಳನ್ನು ಸ್ಧಾಪಿಸುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊಸ ಯೋಜನೆಯನ್ನು ರೂಪಿಸಿಕೊಂಡಿದೆ,
ಉದ್ಘಾಟನಾ ಸಂದರ್ಭದಲ್ಲಿ ತರಗತಿಗಳು ಮಲಯಾಳಂ ಮಿಷನ್, ಕೇರಳ ಸರ್ಕಾರದ ಸದಸ್ಯರನ್ನು ಒಳಗೊಂಡಿರುತ್ತವೆ, ವಿವಿಧ ವೃತ್ತಿಪರರಿಗೆ ಅವಕಾಶ ಕಲ್ಪಿಸಲು ವಾರಕ್ಕೆ ಮೂರು ಬಾರಿ ಸಂಜೆ 6 ರಿಂದ 7 ರವರೆಗೆ ತರಗತಿಗಳು ಮೂರು ತಿಂಗಳ ಕಾಲ ನಡೆಯಲಿವೆ ಎಂದು ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ..

Trending

Exit mobile version