ದೇಶ
ಮಹಿಳೆಯರು, ಶೋಷಿತರಿಗೆ ಕಾಂಗ್ರೆಸ್ ಅನ್ಯಾಯ ಬಿಜೆಪಿ ಟೀಕೆ

ಬೆಂಗಳೂರು: ರೈತರು, ಮಹಿಳೆಯರು ಹಾಗೂ ಶೋಷಿತರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಮದ ಅನ್ಯಾಯವಾಗುತ್ತಿದೆ ಎಂದು ಬಿಜೆಪಿ ವಿರೋಧಿಸಿದೆ,
ಈ ಬಗ್ಗೆ ಬಿಜೆಪಿ ಎಕ್ಸ್ ಪೋಸ್ಟ್ ಮಾಡಿದ್ದು ರೈತರ ಬದುಕಿನಲ್ಲಿ ಭರವಸೆ ಮೂಡುತ್ತಿಲ್ಲ, ಮಹಿಳೆಯರಿಗೆ ರಕ್ಷಣೆ ದೂರೆಯುತ್ತಿಲ್ಲ, ಶೋಷಿತರ ಪಾಲಿನ ಹಣ ಶೋಷಿತರಿಗೆ ಲಭಿಸುತ್ತಿಲ್ಲ, ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಕನ್ನಡರಿಗೆ ನೆಮ್ಮದಿಯಿಲ್ಲ ಎಂದು ಗುಡುಗಿದೆ,
ವಾಲ್ಮಿಕಿ ನಿಗಮ ಮತ್ತು ಮುಡಾ ಈ ಎರಡು ಹಗರಣ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ಹಾಗೂ ಮಹಿಳೆಯರ ನಾಪತ್ತೆ ಪ್ರಕರಣದಲ್ಲಿ ಕಾಂಗ್ರೆಸ್ ಪಾತ್ರವಿದೆ.
ಇವೆಲ್ಲದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಹೊಣೆಯಾಗುತ್ತಾರೆ, ಇದು ಕಾಂಗ್ರೆಸ್ ನ ಭ್ರಷ್ಟ ವ್ಯವಸ್ಧೆಯನ್ನು ಬಹಿರಂಗ ಪಡಿಸುತ್ತದೆ, ಕಾಂಗ್ರೆಸ್ ಪಕ್ಷದ ಆಡಳಿತ ಶಾಪದಂತಾಗಿದೆ ಎಂದು ಬಿಜೆಪಿ ಕಿಡಿಕಾರಿದೆ,