ದೇಶ
ನನ್ನ ಮೈಕ್ ಸ್ವಿಚ್ ಆಫ್- ನೀತಿ ಆಯೋಗ ಸಭೆಯಿಂದ ಹೊರ ಬಂದ ದೀದಿ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ದೆಹಲಿಯಲ್ಲಿ ನೀತಿ ಆಯೋಗದ ಆಡಳಿತ ಮಂಡಳಿ ಸಭೆ ನಡೆಯುತ್ತಿದೆ, ಈ ಸಭೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಭಾಗವಹಿಸಿದ್ದಾರೆ,
ಇಂಡಿಯಾ ಮೈತ್ರಿ ಬಿಹಿಷ್ಕಾರದ ನಡುವೆಯೂ ಪಶ್ಚಮ ಬಂಗಾಳ ಸಿಎಂ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು, ಅದರೆ ಇದೀಗ ಸಭೆಯಿಂದ ಮಧ್ಯದಲ್ಲಿಯೇ ಮಮತಾ ಬ್ಯಾನರ್ಜಿ ಹೊರಬಂದಿದ್ದಾರೆ ,
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಕೇಂದ್ರ ಸರ್ಕಾರ ವಿರುದ್ಧ ಗಂಭೀರ ಆರೋಪ ಮಾಡಿದರು, ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ, ಕೇವಲ 5 ನಿಮಿಷ ಮಾತನಾಡಲು ಸಮಯ ನೀಡಲಾಗಿದೆ ಎಂದು ಹೇಳಿದರು,
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ವಿರುದ್ಧ ತಾತರಮ್ಯ ಮಾಡಬಾರದು ಎಂದು ನಾನು ಹೇಳಿದೆ, ನಾನು ಮಾತನಾಡಲು ಬಯಸಿದ್ದೆ, ಅದರೆ ನನಗೆ ಕೇವಲ 5 ನಿಮಿಷ ಮಾತನಾಡಲು ಅವಕಾಶ ನೀಡಲಾಯಿತು, ನನಗಿಂತ ಮುಂಚೆ ಇದ್ದವರು 10-20 ನಿಮಿಷ ಮಾತನಾಡಿದರು, ಈ ಸಭೆಯಲ್ಲಿ ವಿರೋಧ ಪಕ್ಷದಿಂದ ನಾನೊಬ್ಬಳೇ ಭಾಗವಹಿಸಿದ್ದೆ ಅದರ ನನಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು,