ದೇಶ
ರಾಹುಲ್ ಗಾಂಧಿ ಚಕ್ರವ್ಯೂಹ ಹೇಳಿಕೆಗೆ ಪ್ರಲ್ಹಾದ್ ಜೋಷಿ ತಿರುಗೇಟು!

ನವದೆಹಲಿ: ನಮ್ಮ ಸರ್ಕಾರ ಕಾಂಗ್ರೆಸ್ ಹಗರಣಕ್ಕಾಗಿ ಚಕ್ರವ್ಯೂಹ ರಚಿಸಿದೆ, ಭ್ರಷ್ಟಾಚಾರ ನಾವು ಕಿಂಚಿತ್ತೂ ಸಹಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ ,
ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚಿಗೆ ನೀಡಿದ ಚಕ್ರವ್ಯೂಹ ಹೇಳಿಕೆ ಕುರಿತು ಪ್ರಲ್ಹಾದ್ ಜೋಶಿ ಮಾತನಾಡಿ ರಾಹುಲ್ ಗಾಂಧಿ ಮತ್ತು ಅವರ ತಾಯಿ ರಿವೋಟ್ ಕಂಟ್ರೋಲ್ ಮೂಲಕ ಸರ್ಕಾರವನ್ನು ಏಕೆ ಓಡಿಸಲಿಲ್ಲ? ಅವರು ಈಗ ನಾಟಕ ಮಾಡುತ್ತಿದ್ದಾರೆ, ಮಂಡಲ್ ಆಯೋಗ್ ಶಿಫಾರಸ್ಸುಗಳನ್ನು ತಿರಸ್ಕರಿಸಿದವರು ಕಳೆದ 60 ವರ್ಷಗಳ ಭ್ರಷ್ಟಾಚಾರ ಮತ್ತು ಹಗರಣಗಳನ್ನು ಮುಚ್ಚಿಹಾಕಲು ಮತ್ತು ಜನರು ನಂಬುವಂತೆ ಅವರು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು,
ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲಾಗಿದೆ, ಆ ಚಕ್ರವ್ಯೂಹವನ್ನು ಪಿಎಂ ನರೇಂದ್ರ ಮೋದಿ ನೇತೃತ್ವದಲ್ಲಿ 6 ಜನರು ನಡೆಸುತ್ತಿದ್ದಾರೆ, ಸಾವರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ 6 ಜನರು ಅಭಿಮಾನ್ಯುವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಂದರು, ನಾನು ಕೂಡ ಆ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಿದ್ದೇನೆ, ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದು ಕರೆಯಲಾಗುತ್ತದೆ, ಅದರ ಅರ್ಥ ಕಮಲ ರಚನೆ ಎಂದು ತಿಳಿಯಿತು, ಚಕ್ರವ್ಯೂಹವು ಕಮಲದ ಆಕಾರದಲ್ಲಿದೆ ಎಂದು ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ರಾಹುಲ್ ಗಾಂಧಿ ಹೇಳಿದ್ದರು,