ಬೆಂಗಳೂರು
ಸಿಎಂಗೆ ಸುಳ್ಳು ಹೇಳುವ ಅಭ್ಯಾಸವೋ, ಚಾಳಿಯೋ ಗೊತ್ತಿಲ್ಲ- ಹೆಚ್ಡಿಕೆ ಟೀಕೆ

ಬೆಂಗಳೂರು: ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ್ದಾರೆ,
ಟ್ವೀಟ್ ಮಾಡಿ ಮುಡಾದವರು ನನಗೆ ನಿವೇಶನ ಹಂಚಿದ್ದು ನಿಜ, ಸ್ವಾಧೀನ ಪತ್ರವನ್ನೂ ನೀಡಿದ್ದಾರೆ, ಆ ಪತ್ರ ಈಗಾಗಲೇ ಮಾಧ್ಯಮಗಳ ಮುಂದೆಯೂ ತೋರಿಸಿದ್ದೇನೆ, ಹಂಚಿಕ ನಿವೇಶನದ ಜಾಗ ನನ್ನ ಸುಪರ್ದಿಗೆ ಕೊಡಬೇಕಲ್ಲವೇ? ಕೊಟ್ಟಿಲ್ಲ ಹಾಗಾದರೆ, ಇದರಲ್ಲಿ ಸಿದ್ದರಾಮಯ್ಯ ಮಾಡಿದ ಸಂಶೋಧನ ಏನಿದೆ ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ,
ಸುಳ್ಳು ಸಂಶೋಧಕ ಸಿದ್ದರಾಮಯ್ಯನವರೇ, ನಿಮ್ಮ ಮುಖಕ್ಕೆ ಮೆತ್ತಿಕೊಂಡಿರುವ ಕೊಳಕನ್ನು ನನ್ನ ಮೇಲೆ, ಇನ್ನಿತರರ ಮೇಲೆ ಸಿಡಿಸಲು ಹೊರಟು ಲಜ್ಜೆಗೇಡಿತನದ ಪರಮಾವಧಿ ಮೆರೆದಿದ್ದೀರಿ, ಮುಡಾ ಭೂವಿಯನ್ನು ಸಿಎಂ ಕುಟುಂಬ ಮುಕ್ಕಿ ತಿಂದಿದೆ ಎಂದು ಕಿಡಿಕಾರಿದ್ದಾರೆ,
ನಿಮ್ಮ ಸಮಾಜವಾದಿ ಮುಖವಾಡ ಅಹಿಂದಾ ಅಲಂಕಾರ, ಸತ್ಯವಂತನ ಸಿಂಗಾರ, ಇದೆಲ್ಲವೂ ಕಳಚಿಬಿದ್ದಿದೆ, ಸುಳ್ಳು ಹೇಳುವುದು ನಿಮಗೆ ಅಭ್ಯಾಸವೋ, ಅಚಾರವೋ, ಚಾಳಿಯೋ ಗೊತ್ತಿಲ್ಲ ಎಂದು ಹೆಚ್ಡಿಕೆ ಟೀಕಿಸಿದ್ದಾರೆ,