ದೇಶ

Viral News ವ್ಯಕ್ತಿಯನ್ನು ಜೀವಂತ ಹೊತು ಹಾಕಿದ ದುಷ್ಕರ್ಮಿಗಳು- ಪ್ರಾಣ ಉಳಿಸಿದ ಬೀದಿ ನಾಯಿಗಳು!

ಆಗ್ರಾ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಾಲ್ವರು ವ್ಯಕ್ತಿಗಳು ತನ್ನನ್ನು ಜೀವಂತವಾಗಿ ಸಮಾಧಿ ಮಾಡಿದ್ದು ಸಮಾಧಿ ಜಾಗವನ್ನು ಬೀದಿ ನಾಯಿಗಳು ಅಗೆದ ಕಾರಣ ತಾನು ಹೊರೆ ಬಂದು ಬದುಕುಳಿಯಲು ಸಾಧ್ಯವಾಯಿತು ಎಂದು ರೂಪ್ ಕಿಶೋರ್ ಎಂಬವರು ಹೇಳಿಕೊಂಡಿದ್ದಾರೆ,
ತನ್ನ ಮಗ ರೂಪ್ ಕಿಶೋರ್ ಮೇಲೆ ಅಂಕಿತ್, ಅಂಕಿತ್, ಗೌರವ್, ಕರಣ್ ಮತ್ತು ಆಕಾಶ್ ಎಂಬ ನಾಲ್ವರು ಆಗ್ರಾದ ಅರ್ಟೋನಿ ಪ್ರದೇಶದಲ್ಲಿ ಹಲ್ಲೆ ನಡೆಸಿದ್ದಲ್ಲದೆ ತಮ್ಮ ಮನೆಯಿಂದ ಆತನನ್ನು ಬಲವಂತವಾಗಿ ಕರೆದೊಯ್ದು ಹಲ್ಲೆ ನಡೆಸಿ ಸತ್ತಿದ್ದಾನೆಂದು ಭಾವಿಸಿ ಜಮೀನಿನಲ್ಲಿದ್ದ ಹಳ್ಳದಲ್ಲಿ ಹೊತು ಹಾಕಿದ್ದಾರೆ ಎಂದು ತಾಯಿ ಹೇಳಿದ್ದಾರೆ,
ಬೀದಿ ನಾಯಿಗಳು ಕಿಶೋರ್ ನನ್ನು ಸಮಾಧಿ ಮಾಡಿದ ಪ್ರದೇಶವನ್ನು ಅಗದು ಆತನಿಗೆ ಕಚ್ಚಿವೆ, ಆಗ ಕಿಶೋರ್‍ಗೆ ಪ್ರಜ್ಞೆ ಮರಳಿದೆ, ಬಳಿಕ ಕಿಶೋರ್ ಎದ್ದು ಹೋಗಿದ್ದು, ಸ್ಧಳೀಯರು ಸಹಾಯ ಮಾಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು, ನಾಲ್ವರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ,

Trending

Exit mobile version