ರಾಜಕೀಯ
ಗಾಳಿಯಲ್ಲಿ ಗುಂಡು ಹಾರಿಸಬೇಡಿ, ರಾಜೀನಾಮೆ ಕೊಡಿ ಎಂದ ದೋಸ್ತಿ ನಾಯಕರು

ಮಂಡ್ಯ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಚಾರದಲ್ಲಿ ಮುಳುಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದರು,
ಮುಡಾ ವಿಚಾರವಾಗಿ ಸಿಎಂ ವಿರುದ್ಧ ನಡೆಯುತ್ತಿರುವ ಮೈಸೂರು ಚಲೋ 4 ನೇ ದಿನದ ಪಾದಯಾತ್ರೆಯು ನಿಡಘಟ್ಟದಿಂದ ಇಂದು ಆರಂಭವಾಗಿದೆ, ಈ ವೇಳೆ ಮಾತನಾಡಿ ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಹೆಸರು ಕೇಳಿಬಂದಿದೆ, ಪ್ರಕರಣಗಳಲ್ಲಿ ಸಿಎಂ ಖುದ್ದು ಆರೋಪಿಯಾಗಿದ್ದಾರೆ, ಕೂಡಲೇ ಸಿಎಂ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು,
ಅತ್ತ ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ್ ಅವರು ಈ ಸರ್ಕಾರಕ್ಕೆ ತನ್ನ ವರ್ಗಾವಣೆಗಾಗಿ ಲಕ್ಷ ಲಕ್ಷ ಹಣ ಕೊಟ್ಟು ಕೊನೆಗೆ ಅನುಮಾನಸ್ವದವಾಗಿ ಸಾವನ್ನಪ್ಪಿದ್ದಾರೆ, ಇದಕ್ಕೆ ಭ್ರಷ್ಟ ರಾಜ್ಯ ಸರ್ಕಾರವೇ ಕಾರಣ ಎಂದು ಗುಡುಗಿದರು,
ಗಾಳಿಯಲ್ಲಿ ಗುಂಡು ಹಾರಿಸಬೇಡಿ
ಪಾದಯಾತ್ರೆಯಲ್ಲಿ ಮಾತನಾಡಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನಮ್ಮ ಕುಟುಂಬದ ವಿರುದ್ಧ ಡಿಕೆ ಶಿವಕುಮಾರ್ ಅವರು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ, ಅಧಿಕಾರ ನಿಮ್ಮ ಕೈಯಲ್ಲಿದೆ ದಾಖಲೆ ಮುಂದಿಟ್ಟು ತನಿಖೆ ಮಾಡಿ, ಗಾಳಿಯಲ್ಲಿ ಗುಂಡು ಹಾರಿಸಬೇಡಿ ಎಂದು ಸವಾಲು ಹಾಕಿದ್ದಾರೆ,
ಡಿಕೆಶಿ ಅವರ ಗೊಡ್ಡು ಬೆದರಿಕೆಗಳಿಗೆ ಹೆದರುವ ಮಕ್ಕಳು ನಾವಲ್ಲಿ, ಕುಮಾರಸ್ವಾಮಿ ಅವರು ಏನು ಎಂಬುವುದು ರಾಜ್ಯದ ಜನರಿಗೆ ಗೊತ್ತಿದೆ, ಇನ್ನು ನಮ್ಮ ಕುಮಾರಣ್ಣ ಅವರ ಬಗ್ಗೆ ಶಿವಕುಮಾರ್ ಅವರ ಏಕವಚನದ ಮಾತು ಸರಿಯಲ್ಲ ಎಂದರು,
ಇತ್ತ ಮುಡಾ ವಿಚಾರವಾಗಿ ಬಿಜಪಿ-ಜೆಡಿಎಸ್ ಪಾದಯಾತ್ರೆ ವಿರೋಧಿಸಿ ಕಾಂಗ್ರೆಸ್ ಸಹ ನಡೆಸಯುತ್ತಿರುವ ಜನಾಂದೋಲನಾ ಸಮಾವೇಶ ಇಂದಿಗೆ 5 ನೇ ದಿನಕ್ಕೆ ಕಾಲಿಟ್ಟಿದೆ, ಕುಮಾರಸ್ವಾಮಿ ಕ್ಷೇತ್ರ ಮಂಡ್ಯದಲ್ಲಿ ದೋಸ್ತಿ ನಾಯಕರ ವಿರುದ್ಧ ಕಾಂಗ್ರೆಸ್ ರಣಕಹಳೆ ಮೂಳಗಿಸಲು ಸಜ್ಜಾಗಿದೆ, ಇದೀಗ ಡಿಸಿಎಂ ಡಿಕೆಶಿ ಸೇರಿದಂತೆ ಸಮಾವೇಶಕ್ಕೆ ಅನೇಕ ಕೈ ನಾಯಕರು ಆಗಮಿಸುತ್ತಿದ್ದಾರೆ,