ಅಪರಾಧ
ಅನ್ನಕ್ಕಾಗಿ ಹಾಹಾಕಾರ-ಗೋಗರೆದರೂ ದರ್ಶನ್ ಗಿಲ್ಲ ಮನೆಯೂಟ ಭಾಗ್ಯ!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಗೆ ಮನೆಯೂಟದ ಸೌಲಭ್ಯ ನೀಡುವ ಅರ್ಜಿಯನ್ನು ಕೋರ್ಟ್ ಸೆ.5 ಕ್ಕೆ ಮುಂದೂಡಿದೆ, ಅಲ್ಲಿಯವರೆಗೂ ದರ್ಶನ್ ಜೈಲೂಟ ತಿಂದು ಬದುಕಬೇಕಿರುವುದು ಅನಿವಾರ್ಯವಾಗಿದೆ, ಇದುವರೆಗೂ ದರ್ಶನ್ ಹಲವು ಬಾರಿ ಮನೆಯೂಟದ ಬಗ್ಗೆ ಅರ್ಜಿ ಸಲ್ಲಿಸಿದ್ದು ಎರಡು ಬಾರಿ ತಿರಸ್ಕರಿಸಲ್ಪಟ್ಟಿತ್ತು, ಈಗ ಜೈಲು ಅಧಿಕಾರಿಗಳು ದರ್ಶನ್ ಮನೆಯೂಟದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಜೈಲಿನ ಊಟದಿಂದ ತನ್ನ ಆರೋಗ್ಯ ಕೆಡುತ್ತಿದೆ, ಜೈಲೂಟ ಹಿಡಿಯದೇ ಬೇಧಿಯಾಗುತ್ತದೆ, ಹೀಗಾಗಿ ತನಗೆ ಮನೆಯೂಟ ತಲುಪಿಸಲು ವ್ಯವಸ್ಧೆ ಮಾಡಬೇಕೆಂದು ದರ್ಶನ್ ಕೋರಿದ್ದರು, ಅದರೆ ಈ ವಾದವನ್ನು ಒಪ್ಪದ ನ್ಯಾಯಾಲಯ ನಾಲ್ಕು ಸಾವಿರ ಕೈದಿಗಳು ಅದೇ ಊಟ ಮಾಡುತ್ತಿದ್ದಾರೆ, ಅವರ್ಯಾರಿಗೂ ಅನಾರೋಗ್ಯ ಉಂಟಾಗಿಲ್ಲ ಎಂದು ತಳ್ಳಿ ಹಾಕಿತ್ತು,
ಈ ನಡುವೆ ಇತ್ತೀಚೆಇಗಷ್ಟೇ ವಕೀಲರೊಬ್ಬರು ದರ್ಶನ್ ಗೆ ಮನೆಯೂಟ ನೀಡಬಾರದೆಂದು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು, ಇದಕ್ಕೆ ಕಿಡಿಕಿಡಿಯಾದ ನ್ಯಾಯಾಲಯ ಕೇವಲ ಪ್ರಚಾರದ ದೃಷ್ಟಿಯಿಂದ ಮಾಡುವ ಇಂಥಾ ಚಟುವಟಿಕೆಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದು ಅರ್ಜಿಯನ್ನು ರದ್ದುಪಡಿಸಿ ಅರ್ಜಿದಾರರಿಗೆ ದಂಡ ವಿಧಿಸಿತ್ತು,