ದೇಶ
ವಾರ ಭವಿಷ್ಯ: ಈ ರಾಶಿಯಲ್ಲಿ ಜನಿಸಿದವರಿಗೆ ಬಹಳಷ್ಟು ಒಳಿತು – Weekly Horoscope
ಮೇಷ : ವಾರದ ಆರಂಭದಲ್ಲಿ ಹೆಚ್ಚನ ಹಣ ವೆಚ್ಚವಾಗಲಿದೆ, ಆದರೆ ವಾರಾಂತ್ಯದವರೆಗೆ ಪ್ರಯಾಣ ನಿಮಗೆ ಸಂತೋಷ ಉಂಟುಮಾಡಲಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ ಹಾಗೂ ನಿಮ್ಮ ಭವಿಷ್ಯದ ಬಗ್ಗೆ ಕೊಂಚ ಬೇಸರ ಮೂಡಲಿದೆ. ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವುದು ನಿಮ್ಮಲ್ಲಿ ಸಂತೋಷ ಮತ್ತು ಹೊಸ ಹುಮ್ಮಸ್ಸು ಮೂಡಿಸಲಿದೆ. ಯಾವುದೇ ತೀರ್ಥಯಾತ್ರೆ ನಿಮಗೆ, ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಈ ಸಮಯದಲ್ಲಿ ಒಳಿತನ್ನು ಉಂಟುಮಾಡಲಿದೆ. ವಹಿವಾಟಿನಲ್ಲಿ ತೊಡಗಿಸಿಕೊಂಡಿರುವವರು ತಮ್ಮ ವ್ಯಾಪಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ಹೂಡಿಕೆಗಳನ್ನು ಮಾಡಬಹುದು ಹಾಗೂ ಬಂಡವಳಿಗರು ತಮ್ಮ ವಹಿವಾಟನ್ನು ಎಂದಿನಂತೆ ನಡೆಸಿಕೊಂಡು ಹೋಗುವುದು ಉತ್ತಮ. ಕುಟುಂಬದೊಂದಿಗೆ ದೀರ್ಘಕಾಲದ ಪ್ರವಾಸ ಕೈಗೊಳ್ಳಲಿದ್ದೀರಿ. ಪರೀಕ್ಷೆ ಎದುರಿಸಲು ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಈ ವಾರ ಆಸಕ್ತಿ ಕಡಿಮೆಯಾಗಿ, ಓದಿನ ಕಡೆ ಗಮನ ಕೇಂದ್ರೀಕರಿಸಲು ಕಷ್ಟವೆನಿಸಬಹುದು. ಗಾಯಗೊಳ್ಳುವ ಸಾಧ್ಯತೆ ಇರುವುದರಿಂದ, ಮಕ್ಕಳು ತಮ್ಮ ದೈಹಿಕ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಿದೆ ಹಾಗೂ ಎಚ್ಚರಿಕೆಯಿಂದ ಇರಬೇಕಿದೆ. ದೈಹಿಕ ಕಸರತ್ತನ್ನು ದಿನಚರಿಯ ಭಾಗವಾಗಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ವೃಷಭ : ಈ ವಾರವು ವೃಷಭ ರಾಶಿಯವರಿಗೆ ಸಾಕಷ್ಟು ಅನುಕೂಲಗಳನ್ನು ತಂದುಕೊಡಲಿದೆ. ಜ್ಞಾನ ಮತ್ತು ಮನೋಬಲ ಹೆಚ್ಚಳವಾಗಲಿದೆ. ಪ್ರೀತಿ ಹಾಗೂ ಬೌದ್ಧಿಕ ಸಂಬಂಧಗಳ ಕಡೆಗಿನ ಒಲವು ಹೆಚ್ಚಲಿದೆ. ಒಂದು ತಂಡವಾಗಿ ಕೆಲಸ ಮಾಡುವಿಕೆ ಹಾಗೂ ಪರಸ್ಪರ ಸಹಕಾರದಂತಹ ಅನುಕೂಲಗಳು ನಿಮ್ಮದಾಗಲಿವೆ. ಕೌಟುಂಬಿಕ ಜೀವನ ಹೆಚ್ಚು ಸಂತಸದಾಯಕ ಹಾಗೂ ಶಾಂತಿಯುತವಾಗಿರಲಿದ್ದು, ಕುಟುಂಬದ ಸದಸ್ಯರಲ್ಲಿ ಪರಸ್ಪರ ಸಹಕಾರ ಹೆಚ್ಚಲಿದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕಲಿಯಲು ಕುಟುಂಬದ ಸದಸ್ಯರು ಪರಸ್ಪರರನ್ನು ಮಾರ್ಗದರ್ಶಕರಾಗಿ ಕಾಣಲಿದ್ದಾರೆ. ಭವಿಷ್ಯದ ಬಗೆಗಿನ ಕಳವಳ ನಿಮ್ಮಲ್ಲಿ ಆಧ್ಯಾತ್ಮಿಕ ಆಸಕ್ತಿಯನ್ನು ಜಾಗೃತಗೊಳಿಸಲಿದೆ. ಭಕ್ತಿಗೆ ಸಂಬಂಧಿಸಿದ ಕಾರ್ಯಗಳು ಹಾಗೂ ಸತ್ಸಂಗದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು, ಸ್ತ್ರೀಯರಿಂದ ಬೆಂಬಲ ಹಾಗೂ ಲಕ್ಷ್ಮಿಯ ಆಶೀರ್ವಾದ ದೊರೆಯಲಿದೆ. ಹೊಸ ಅವಕಾಶಗಳು ದೊರೆಯಲಿವೆ. ವ್ಯಕ್ತಿಗತ ಅಭಿವೃದ್ಧಿ ಹಾಗೂ ವೃತ್ತಿಜೀವನದಲ್ಲಿ ಹೊಸತನ್ನು ನಿರೀಕ್ಷಿಸುತ್ತಿರುವವರಿಗೆ ಈ ವಾರ ಶುಭವಾಲಿದೆ.
ಮಿಥುನ : ಈ ವಾರ ನಿಮಗೆ ಖಂಡಿತವಾಗಿ ಹೊಸ ಸಂತೋಷ ತಂದುಕೊಡಲಿದೆ ಹಾಗೂ ಬಾಕಿ ಉಳಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಾಯಕವಾಗಿದೆ. ನಿಮ್ಮ ಹಾಗೂ ಸಂಗಾತಿಯ ನಡುವಿನ ಅಂತರ ಕಡಿಮೆಯಾಗಿ ಪ್ರೀತಿ ವೃದ್ಧಿಸಲಿದೆ. ವಾರಾಂತ್ಯದ ವೇಳೆಗೆ, ಕಲಿಕೆ ಹಾಗೂ ಪ್ರೇರಣೆಯ ಬಗೆಗಿನ ನಿಮ್ಮ ಪ್ರೀತಿ ಹೆಚ್ಚಲಿದೆ. ವಿವಾಹಿತರಿಗೆ ಸಾಂಸಾರಿಕ ಜೀವನ ತೃಪ್ತಿಕರವಾಗಿರಲಿದ್ದು, ಆಸೆಗಳು ಈಡೇರಲಿವೆ. ಜ್ಞಾನ ಪಡೆದುಕೊಳ್ಳಲು ಹಣ ಹೂಡಬೇಕಾಗಿ ಬರಬಹುದು, ಹಾಗಾಗಿ ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಎಚ್ಚರ ವಹಿಸಬೇಕು. ಉನ್ನತ ವ್ಯಾಸಂಗ ಮಾಡುತ್ತಿರುವವರು ತಮ್ಮ ಇಷ್ಟದ ವಿಷಯದ ಕುರಿತು ಆಳವಾಗಿ ಅರ್ಥೈಸಿಕೊಳ್ಳಲು ಈ ವಾರ ಸಹಾಯಕವಾಗಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಲಿದ್ದೀರಿ. ಅಧ್ಯಾಪಕರು ನಿಮಗೆ ಸಹಾಯ ಮತ್ತು ಮಾರ್ಗದರ್ಶನ ಒದಗಿಸಲಿದ್ದಾರೆ. ಪ್ರವಾಸಕ್ಕೆ ತೆರಳಲು ಅವಕಾಶ ದೊರೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭ ಕಾಣಲಿದ್ದು, ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ಪ್ರಯಾಣದಿಂದ ಅನುಕೂಲ ಉಂಟಾಗಲಿದೆ.
ಕರ್ಕಾಟಕ : ಈ ವಾರದಲ್ಲಿ ಕುಟುಂಬದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾದ ಅಗತ್ಯವಿದೆ. ಸಂಕೀರ್ತನೆ ಹಾಗೂ ಇನ್ನಿತರ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂತಸ ಹಾಗೂ ಶಾಂತಿ ಕಾಣಬಹುದಾಗಿದೆ. ವಿವಾಹಿತರಿಗೆ ಈ ವಾರವಿಡೀ ಭಕ್ತಿ ಹಾಗೂ ಪ್ರೀತಿಗಾಗಿ ಮೀಸಲಿದ್ದು, ಸಂತೋಷ ಹಾಗೂ ಪ್ರಗತಿ ಹೊಂದಲಿದ್ದೀರಿ. ಪರಿವಾರಗಳು ಪ್ರಮುಖವಾದ ಉಡುಗೊರೆಗಳನ್ನು ಪಡೆಯಬಹುದು. ಆರ್ಥಿಕ, ಮಾನಸಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಸಾಕಷ್ಟು ಗಟ್ಟಿಯಾಗಿರಲಿವೆ. ಕೊಟ್ಟ ಕೆಲಸವನ್ನು ನಿಗದಿತ ಸಮಯದೊಳಗೆ ಮಾಡಿ ಮುಗಿಸುವ ಕಡೆ ನೌಕರರು ಗಮನ ಹರಿಸಬೇಕು. ವಹಿವಾಟುದಾರರು ಹೊಸ ಉಪಕರಣಗಳು ಹಾಗೂ ಶಿಕ್ಷಣದಲ್ಲಿ ಹಣ ಹೂಡಿಕೆ ಮಾಡುವುದು ಒಳಿತು. ಸಮರ್ಥವಾದ ಕಲಿಕೆ ಸಾಧ್ಯವಿರುವುದರಿಂದ, ಈ ವಾರ ಕಲಿಕೆ ಉತ್ತಮವಾಗಿ ನಡೆಯಲಿದೆ. ಆರೋಗ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಆದರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಹೊರಗಿನ ಆಹಾರ ಪದಾರ್ಥಗಳ ಸೇವನೆ ಕಡಿಮೆಗೊಳಿಸಿ, ನಿಯಮಿತ ಆಹಾರಪದ್ಧತಿ ಹಾಗೂ ದೇಹದಲ್ಲಿ ಸಾಕಷ್ಟು ನೀರಿನಂಶ ಇರುವಂತೆ ನೋಡಿಕೊಳ್ಳುವುದು ಅಗತ್ಯ.
ಸಿಂಹ : ಈ ವಾರ ಕೆಲವು ಸವಾಲುಗಳನ್ನು ಒಡ್ಡಲಿದೆ. ಬೇಸರ ಕಾಣಿಸಿಕೊಳ್ಳಬಹುದು ಹಾಗೂ ಕೆಲಸಗಳು ಪೂರ್ಣಗೊಳ್ಳಲು ಮಾಮೂಲಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಕುಟುಂಬದಲ್ಲಿ ಅಹಿತವಾದ ವಾತಾವರಣ ಕಾಣಿಸಿಕೊಳ್ಳಬಹುದು, ಆದರೆ ಕಷ್ಟಕಾಲದಲ್ಲಿ ನಿಮ್ಮ ಪ್ರೀತಿಪಾತ್ರರ ಸಹಕಾರ ಇರಲಿದೆ. ಸ್ವಲ್ಪ ಕಾಲ ನೀವು ಹಿಂದುಳಿಯಬಹುದು, ವ್ಯವಹಾರದಲ್ಲಿ ಇತರರೊಂದಿಗೆ ಸೇರಿ ಕೆಲಸ ಮಾಡುವುದರಿಂದ ಹೊಸ ಹೊಸ ದಾರಿಗಳು ನಿಮ್ಮ ಎದುರು ತೆರೆದುಕೊಳ್ಳಬಹುದು. ಇಂದಿನ ಹೂಡಿಕೆಗಳ ಮೂಲಕ ಮುಂದಿನ ದಿನಗಳಲ್ಲಿ ಒಳಿತಾಗುವ ಆಶಾಭಾವನೆ ಇರಿಸಿಕೊಳ್ಳಬಹುದು, ಜೊತೆಗೆ ಆದಾಯವೂ ಹೆಚ್ಚಬಹುದು. ಕೆಲವು ಅನಿರೀಕ್ಷಿತ ಸಂತೋಷಗಳು ಸಹ ನಿಮ್ಮದಾಗಬಹುದು. ಹೊಸ ಶಿಕ್ಷಣ ಪಡೆಯುವ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಗಮನ ಕೇಂದ್ರೀಕರಿಸುವ ಜೊತೆಜೊತೆಗೆ, ಈಗ ಪಡೆಯುತ್ತಿರುವ ಶಿಕ್ಷಣವನ್ನು ಕಡೆಗಣಿಸದೆ ಇರುವುದು ಸಹ ಮುಖ್ಯವಾಗಿದೆ. ಅತಿಯಾದ ಕೆಲಸ ಮಾಡಿ ಆರೋಗ್ಯ ಹಾಳುಮಾಡಿಕೊಳ್ಳದೇ ನಿಮ್ಮ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕಿದೆ. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಹಾಗೂ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯದ ಪರಿಣಾಮವಾಗಿ ನೀವು ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆ ಇದೆ.
ಕನ್ಯಾ : ಈ ವಾರ ಏರಿಳಿತಗಳಿಂದ ಕೂಡಿರಲಿದೆ. ಸಧ್ಯಕ್ಕೆ ಆರೋಗ್ಯ ಸಂಬಂಧಿತ ತೊಂದರೆಗಳು ಕಾಣಿಸಿಕೊಂಡರೂ, ನಂತರದ ದಿನಗಳಲ್ಲಿ ಕ್ರಮೇಣ ಅವೆಲ್ಲವೂ ಬಗೆಹರಿಯಲಿವೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ದೊರೆಯಲಿದೆ ಹಾಗೂ ವಿವಾಹಿತರು ತಮ್ಮ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಹಳೆಯ ಸ್ನೇಹಿತರಿಂದ ಸಹಾಯ ಪಡೆದುಕೊಳ್ಳಬಹುದು. ಹಳೆಯ ಬಿಕ್ಕಟ್ಟುಗಳು ಬಗೆಹರಿದು, ಪರಿಹಾರ ನಿಮ್ಮ ಪರವಾಗಿ ಇರಲಿದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಸರ್ಕಾರಿ ಯೋಜನೆಗಳ ಸವಲತ್ತು ದೊರೆಯಲಿದೆ. ಸರ್ಕಾರಿ ಕೆಲಸದ ಹುಡುಕಾಟದಲ್ಲಿ ಇರುವವರಿಗೆ ಸಿಹಿಸುದ್ದಿ ಸಿಗಲಿದೆ. ಪ್ರೇಮಸಂಬಂಧಗಳು ಎಂದಿನಂತೆ ಇರಲಿದ್ದು, ಹಳೆಯ ಸ್ನೇಹಿತರಿಂದ ಹೆಚ್ಚಿನ ಆತ್ಮೀಯತೆ ಅನುಭವಿಸಲಿದ್ದೀರಿ. ರಾಜಕೀಯವಾಗಿ ಯಶಸ್ಸು ಸಿಗಲಿದ್ದು, ಆರ್ಥಿಕ ಅನುಕೂಲ ಉಂಟಾಗಲಿದೆ. ನಿಮ್ಮ ಕೌಶಲ್ಯ ಹಾಗೂ ಪ್ರಶಾಂತತೆಯ ಕಾರಣದಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನ ಎತ್ತರಕ್ಕೆ ಏರಲಿದೆ. ಪೋಷಕರ ಬಗ್ಗೆ ಗಮನ ವಹಿಸುವುದು ಮುಖ್ಯ. ಮದುವೆಗಾಗಿ ಹುಡುಕಾಟದಲ್ಲಿರುವ ಹುಡುಗಿಯರಿಗೆ ಈ ವಾರ ಸೂಕ್ತ ಸಂಗಾತಿ ದೊರೆಯಲಿದ್ದಾರೆ. ದಂಪತಿಗಳ ನಡುವಿನ ಆಳವಾದ ಪ್ರೇಮ ಇನ್ನಷ್ಟು ಹೆಚ್ಚಾಗಲಿದೆ. ಹೊಸ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಭವಿಷ್ಯ ರೂಪುಗೊಳ್ಳಲಿದೆ.
ತುಲಾ : ಈ ವಾರ ನಿಮಗೆ ಉಜ್ವಲ ಹಾಗೂ ರಚನಾತ್ಮಕವಾಗಿ ಇರಲಿದೆ. ಉದ್ಯೋಗಸ್ಥರು ಪ್ರಮುಖ ಕರ್ತವ್ಯಗಳನ್ನು ನಿರ್ವಹಿಸಬೇಕಾದ ಸಂದರ್ಭ ಎದುರಾಗಲಿದೆ. ಇದಕ್ಕಾಗಿ ನೀವು ಹೆಚ್ಚಿನ ಶ್ರಮ ಮತ್ತು ಬುದ್ಧಿಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಅಲ್ಲದೆ, ಇದರಿಂದ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ವ್ಯವಹಾರಸ್ಥರು ತಮ್ಮ ಇತರ ವೃತ್ತಿಬಾಂಧವರೊಂದಿಗೆ ಸ್ಪರ್ಧಿಸಿ ತಮ್ಮ ಬೆಲೆಯನ್ನು ನಿರೂಪಿಸಬೇಕಿದೆ. ಕೌಟುಂಬಿಕ ಬಿಕ್ಕಟ್ಟು ಎದುರಿಸುತ್ತಿರುವ ದಂಪತಿಗಳು ಸ್ನೇಹಿತರ ಸಹಾಯದೊಂದಿಗೆ ಸಮಸ್ಯೆಯನ್ನು ಅಂತ್ಯಗೊಳಿಸಬಹುದು. ನಿಮ್ಮ ಸಂಗಾತಿಯೆಡೆಗಿನ ಪ್ರೇಮ ವೃದ್ಧಿಸಲಿದ್ದು, ಒಟ್ಟಾಗಿ ಸುಂದರ ಕ್ಷಣಗಳನ್ನು ಜೀವಿಸಲಿದ್ದೀರಿ. ಮನೆಯಲ್ಲಿ ಸಂತೋಷ ಹಾಗೂ ಸಂತೃಪ್ತಿ ನೆಲೆಸಲಿದ್ದು, ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲಿದ್ದೀರಿ.
ವೃಶ್ಚಿಕ : ಈ ರಾಶಿಯಲ್ಲಿ ಜನಿಸಿದವರಿಗೆ ಈ ವಾರ ಬಹಳಷ್ಟು ಒಳಿತನ್ನು ಮಾಡಲಿದೆ. ವೈಯಕ್ತಿಕ ಜೀವನದಲ್ಲಿ ಎಷ್ಟೋ ಕಾಲದಿಂದ ಪೂರ್ಣಗೊಳಿಸದೆ ಉಳಿದ ಕೆಲಸಗಳು ಈಗ ಸುಲಲಿತವಾಗಿ ನಡೆದು, ಉತ್ತಮ ಫಲಿತಾಂಶ ದೊರೆಯಲಿದೆ. ಬಹಳ ಕಾಲದಿಂದ ಇತ್ಯರ್ಥವಾಗದೆ ಉಳಿದ ಭಿನ್ನಾಭಿಪ್ರಾಯಗಳು ಹಾಗೂ ಕಾನೂನು ಹೋರಾಟಗಳು ಈ ವಾರ ಬಗೆಹರಿಯಲಿವೆ. ಒಂದು ನಿರ್ದಿಷ್ಟ ಕ್ಷೇತ್ರದಲ್ಲಿನ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿದ್ದು, ನಿಮ್ಮ ಸಾಧನೆಯನ್ನು ಇತರರು ಗುರುತಿಸಲಿದ್ದಾರೆ. ಔದ್ಯೋಗಿಕ ಅವಕಾಶಗಳು ನಿಮ್ಮ ಆರ್ಥಿಕ ಬೆಳವಣಿಗೆಗೆ ಹೊಸ ದಾರಿ ಮಾಡಿಕೊಡಲಿದ್ದು, ನಿಮ್ಮ ಸಂಪತ್ತು ವೃದ್ಧಿಸಲಿದೆ. ವೃತ್ತಿಯಲ್ಲಿ ನೀವು ನಡೆಸುವ ಪ್ರಯತ್ನಗಳು ಹಾಗೂ ನಿಮ್ಮ ಆರ್ಥಿಕ ಸಾಧನೆಗಳು ನಿಮ್ಮಲ್ಲಿ ಹೊಸ ಉತ್ಸಾಹ ಹಾಗೂ ಚೈತನ್ಯ ಮೂಡಿಸಲಿವೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು ಸಂಪಾದನೆಯನ್ನು ಹೆಚ್ಚಿಸಿಕೊಳ್ಳಲು ಇದು ಸಕಾಲ. ಪ್ರಮುಖ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ನಿಮ್ಮ ವಹಿವಾಟು ಬೆಳೆಯಲಿದೆ ಹಾಗೂ ವೃತ್ತಿಯಲ್ಲಿ ನೀವು ಎತ್ತರಕ್ಕೆ ಬೆಳೆಯಲು ಸಹಾಯವಾಗಲಿದೆ. ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ನಿಮ್ಮ ಮನಸ್ಸಲ್ಲಿ ತುಂಬಿರಲಿವೆ.
ಧನು : ಈ ವಾರ ಅದೃಷ್ಟ ನಿಮ್ಮ ಕಡೆಗೆ ಇರಲಿದ್ದು, ಅದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕಾದಲ್ಲಿ ನೀವು ಆಲಸ್ಯ ಮತ್ತು ದುರಹಂಕಾರಗಳಂತಹ ಗುಣಗಳನ್ನು ಬಿಡಬೇಕಿದೆ. ಕಾಲ ನಿರಂತರ ಎಂಬುದನ್ನು ಗುರುತಿಸುವುದು ಬಹಳ ಮುಖ್ಯ. ನೀವು ತೆಗೆದುಕೊಳ್ಳುವ ಯಾವುದೇ ವಿರಾಮ ನಿಮ್ಮನ್ನು ಪ್ರಗತಿಯತ್ತ ಕೊಂಡೊಯ್ಯುವ ಸಂಭವ ಇದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಲ್ಲಿ, ಅದನ್ನು ಪರಿಣಾಮಕಾರಿಯಾಗಿ ಪೂರೈಸುವ ಕಡೆ ನಿಮ್ಮ ಗುರಿ ಇರಲಿ. ಅಲ್ಲದೆ, ವೈರಿಗಳ ಕುರಿತು ಸಹ ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ. ವ್ಯಾಪಾರ-ವಹಿವಾಟಿನ ವಿಷಯದಲ್ಲಿ ಈ ವಾರ ಬಹಳ ಅದೃಷ್ಟದಾಯಕವಾಗಿದ್ದು, ನಿಮ್ಮ ಆರ್ಥಿಕ ಗುರಿ ತಲುಪಲಿದ್ದೀರಿ. ನಿಮ್ಮ ಬಾಳಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದು, ವೈವಾಹಿಕ ಜೀವನ ಸಂತೃಪ್ತಿಯಿಂದ ಕೂಡಿರಲಿದೆ. ವಿದ್ಯಾರ್ಥಿಗಳ ಸಾಧನೆಗೆ ಇದು ಸರಿಯಾದ ಕಾಲ, ಆದರೆ ಅತಿಯಾದ ವಿಶ್ವಾಸವು ನಿಮ್ಮ ಗಮನ ಬೇರೆಡೆಗೆ ಹರಿಯುವಂತೆ ಮಾಡಿ ಶೈಕ್ಷಣಿಕ ಸಾಧನೆಯಿಂದ ನಿಮ್ಮನ್ನು ದೂರಗೊಳಿಸಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯಕ್ಕೆ ಪ್ರಾಧಾನ್ಯತೆ ನೀಡಬೇಕಿದ್ದು, ಈ ವಾರ ನೆಮ್ಮದಿಯಿಂದ ಕಳೆಯಲಿದ್ದೀರಿ.
ಮಕರ : ಎಲ್ಲವೂ ಸರಿಯಾಗಿದ್ದರೂ ಈ ರಾಶಿಯವರು ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ. ವಾರದ ಆರಂಭದಲ್ಲಿ, ನಿಗದಿತ ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮುಗಿಸಲು ಸಾಧ್ಯವಾಗದಂತಹ ಅಡ್ಡಿಗಳು ಎದುರಾಗಬಹುದು. ಆಯಾ ಋತುವಿನಲ್ಲಿ ಕಾಣಿಸಿಕೊಳ್ಳುವಂತಹ ಅಥವಾ ಇತರ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳು ಸಹ ತಲೆದೋರಬಹುದು. ಕೆಲಸದೊತ್ತಡದ ಕಾರಣದಿಂದಾಗಿ ಹೆಚ್ಚಿನ ಸಮಯ ಕೆಲಸದಲ್ಲೇ ಕಳೆಯಬೇಕಿರುವುದರಿಂದ ಸಂಗಾತಿಯೊಡನೆ ಸಂಬಂಧ ಕೆಡದಂತೆ ಎಚ್ಚರ ವಹಿಸಬೇಕಿದೆ. ವ್ಯಾಪಾರಸ್ಥರು ಕೆಲವು ಏರುಪೇರುಗಳನ್ನು ಕಾಣಲಿದ್ದೀರಿ. ಸಣ್ಣಪುಟ್ಟ ಪ್ರಮಾದಗಳು ಸಹ ದೊಡ್ಡ ನಷ್ಟ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಯಾವುದೇ ಹೊಸ ಕೆಲಸದಲ್ಲಿ ಹಣ ಹೂಡುವ ಸಿದ್ಧತೆಯಲ್ಲಿರುವವರು ಅತಿ ಎಚ್ಚರ ವಹಿಸಬೇಕಿದೆ. ಸಂಗಾತಿಯ ಹಿನ್ನೆಲೆ ಹಾಗೂ ಅವರು ಇರುವ ಸ್ಥಿತಿಯನ್ನು ಅರ್ಥಮಾಡಿಕೊಂಡು ನಡೆದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಹಾಗೂ ನಿಮ್ಮ ಬಾಳಸಂಗಾತಿಯ ಕಾಳಜಿ ವಹಿಸುವುದರಿಂದ ನಿಮ್ಮ ವೈವಾಹಿಕ ಸಂಬಂಧ ಕೆಡದಂತೆ ನೋಡಿಕೊಳ್ಳಬಹುದು.
ಕುಂಭ : ನಿಮ್ಮ ಸಮಸ್ಯೆಗಳು ಈ ವಾರ ಕಡಿಮೆಯಾಗಲಿವೆ ಹಾಗೂ ಬಹಳ ಕಾಲದಿಂದ ಮುಗಿಸಲಾಗದೆ ಉಳಿಸಿದ ಕೆಲಸಗಳು ಈ ವಾರ ಪೂರ್ಣಗೊಳ್ಳಲಿವೆ. ವೃತ್ತಿಗೆ ಸಂಬಂಧಿಸಿದಂತೆ ಹೊಸ ದಾರಿ ಹುಡುಕಿಕೊಳ್ಳಲು ನಿಮ್ಮ ಕುಟುಂಬ ನಿಮ್ಮ ಸಹಾಯಕ್ಕೆ ನಿಲ್ಲಲಿದೆ. ವಾರದ ಮಧ್ಯದ ವೇಳೆಗೆ ನೀವು ದೀರ್ಘಕಾಲದ ಪ್ರವಾಸ ಕೈಗೊಳ್ಳಲಿದ್ದು, ಅದರಲ್ಲಿ ಭೇಟಿಯಾಗುವ ಹೊಸ ಜನರಲ್ಲಿ ಆತ್ಮೀಯ ಸ್ನೇಹಿತರು ದೊರೆಯಲಿದ್ದಾರೆ. ಮನೆಯ ದುರಸ್ತಿ ಹಾಗೂ ಅಲಂಕಾರಕ್ಕಾಗಿ ಹಣ ಖರ್ಚು ಮಾಡಬೇಕಾದ ಸಾಧ್ಯತೆ ಇದೆ. ಹಣ ಸಂಪಾದಿಸುವ ಹೊಸ ದಾರಿಗಳು ನಿಮ್ಮ ಮುಂದೆ ತೆರೆದುಕೊಳ್ಳಲಿವೆ ಹಾಗೂ ಹಣದ ಸುರಿಮಳೆಯಾಗಲಿದೆ. ವಾರಾಂತ್ಯದ ವೇಳೆಗೆ ಬಿಡುವಿಲ್ಲದಷ್ಟು ಕೆಲಸಗಳು ಎದುರಾಗಲಿದ್ದು, ಕೆಲವು ಕಾರ್ಯಕ್ರಮಗಳನ್ನು ಸದ್ಯದ ಮಟ್ಟಿಗೆ ಮುಂದೂಡಬೇಕಾಗಲಿದೆ.
ಮೀನ : ನಿಮ್ಮ ಕೌಶಲ್ಯಗಳನ್ನು ಚೆನ್ನಾಗಿ ತೋರಿಸಿಕೊಳ್ಳಲು ಹಾಗೂ ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಇದು ಅನುಕೂಲಕರವಾದ ವಾರ. ವಾರದ ಆರಂಭದಲ್ಲಿ, ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಸಿಹಿಸುದ್ದಿ ಕೇಳಲಿದ್ದು, ಇದರಿಂದ ವೃತ್ತಿಯಲ್ಲಿ ಮುಂದುವರೆಯಲು ಸಹಾಯವಾಗಲಿದೆ. ಉದ್ಯೋಗದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಿದ್ದಂತೆ ಮನೆಯವರು ಹಾಗೂ ಸಹೋದ್ಯೋಗಿಗಳಲ್ಲಿ ನಿಮ್ಮ ಬಗೆಗಿನ ಗೌರವ ಹಾಗೂ ಅಭಿಮಾನ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಇದು ಒಳ್ಳೆಯ ಸಮಯ. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶ ದೊರೆಯಲಿದೆ. ವಾರದ ಮಧ್ಯದ ವೇಳೆಗೆ, ಧಾರ್ಮಿಕವಾದ ಅಥವಾ ನಿಮಗೆ ಅದೃಷ್ಟ ತಂದುಕೊಡುವಂತಹ ಘಟನೆ ನಡೆಯುವ ಸಂದರ್ಭ ಬರಲಿದೆ. ಅವಿವಾಹಿತರಿಗೆ ಸಂಗಾತಿ ಸಿಗಬಹುದು. ವಿವಾಹಿತರಿಗೆ ನಿಮ್ಮ ಕುಟುಂಬ ವಿಸ್ತಾರಗೊಳ್ಳುವ ಸೂಚನೆ ದೊರೆಯಲಿದೆ. ಪ್ರೇಮಸಂಬಂಧಗಳು ಸಹ ಈ ವಾರ ಚೆನ್ನಾಗಿ ಅಭಿವೃದ್ಧಿಗೊಳ್ಳಲಿವೆ.
ದೇಶ
ಬೆಂಗಳೂರು ಜೀವನ ವೆಚ್ಚಕ್ಕೆ ಸವಾಲು: ಮಹಿಳೆಯ ಬಜೆಟ್ ಟ್ರಾವೆಲ್ ಸ್ಟೋರಿ
ಬೆಂಗಳೂರು: ಐಷಾರಾಮಿ ಜೀವನಶೈಲಿ ಮತ್ತು ಹೆಚ್ಚುತ್ತಿರುವ ವೆಚ್ಚಗಳಿಗೆ ಹೆಸರಾದ Bengaluru ನಗರದಲ್ಲಿ ಕೇವಲ 500 ರೂ.ಗಳಲ್ಲಿ ದಿನ ಕಳೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಯುವತಿ ನೀಡಿದ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಶ್ಚಿಮ ಬಂಗಾಳ ಮೂಲದ ಪ್ರಿಯಾಂಕಾ ಮಂಡಲ್ ಎಂಬ ಮಹಿಳೆ, ಸೀಮಿತ ಬಜೆಟ್ನಲ್ಲಿ ನಗರ ಜೀವನ ಹೇಗಿರುತ್ತದೆ ಎಂಬುದನ್ನು ಪರೀಕ್ಷಿಸಲು ಮುಂದಾಗಿದ್ದರು. ದಿನವನ್ನು ಇಡ್ಲಿ ಉಪಹಾರದಿಂದ ಆರಂಭಿಸಿದ ಅವರು, ಕ್ಯಾಬ್ ಬದಲು ಮೆಟ್ರೋ ಪ್ರಯಾಣವನ್ನು ಆಯ್ಕೆ ಮಾಡಿಕೊಂಡರು. ಇದರಿಂದ ಖರ್ಚನ್ನು ಕಡಿಮೆ ಮಾಡಲು ಸಹಾಯವಾಯಿತು.
ಹಗಲಿನಲ್ಲಿ ಚಹಾ ತೆಗೆದುಕೊಂಡು ಸಣ್ಣ ವಿರಾಮ ಮಾಡಿಕೊಂಡ ಅವರು, ಮಧ್ಯಾಹ್ನ ಊಟದ ವೇಳೆಗೆ ಸವಾಲು ಎದುರಿಸಿದರು. ಆಹಾರದ ಬೆಲೆಗಳು ಹೆಚ್ಚಿರುವುದರಿಂದ, 120 ರೂ. ಒಳಗೆ ಊಟ ಮುಗಿಸುವ ಗುರಿ ಇಟ್ಟುಕೊಂಡು ಖರ್ಚನ್ನು ನಿಯಂತ್ರಿಸಿದರು.
ಸಂಜೆ ವೇಳೆ ವಡಾ ಪಾವ್ ಮತ್ತು ಚಹಾ ಸೇವಿಸಿ ದಿನವನ್ನು ಮುಗಿಸಿದ ಪ್ರಿಯಾಂಕಾ, ಅಚ್ಚರಿಯ ರೀತಿಯಲ್ಲಿ ತಮ್ಮ ಬಜೆಟ್ನಿಂದ ಸುಮಾರು 200 ರೂ. ಉಳಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಕಡಿಮೆ ಹಣದಲ್ಲೂ ಸರಿಯಾದ ಯೋಜನೆ ಇದ್ದರೆ ದಿನವನ್ನು ನಿರ್ವಹಿಸಬಹುದು ಎಂಬುದನ್ನು ಅವರು ತೋರಿಸಿದ್ದಾರೆ.
ಈ ವಿಡಿಯೋ ವೈರಲ್ ಆದ ಬಳಿಕ, ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವರು Indira Canteen ನಲ್ಲಿ ಕಡಿಮೆ ದರದಲ್ಲಿ ಊಟ ಸಿಗುತ್ತದೆ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಇದು ಒಬ್ಬರಿಗೆ ಮಾತ್ರ ಸಾಧ್ಯ, ಕುಟುಂಬದೊಂದಿಗೆ ಬದುಕುವುದು ಬೆಂಗಳೂರಿನಲ್ಲಿ ಕಷ್ಟಕರ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಈ ಪ್ರಯೋಗ ನಗರ ಜೀವನದ ಖರ್ಚು ಹಾಗೂ ಬಜೆಟ್ ನಿರ್ವಹಣೆ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
ದೇಶ
ಪಾಪ ನಿವಾರಣೆಗಾಗಿ ವರುಥಿನಿ ಏಕಾದಶಿ ವ್ರತ: ಯಾವಾಗ, ಹೇಗೆ?
ನವದೆಹಲಿ: ಹಿಂದೂ ಧರ್ಮದಲ್ಲಿ Varuthini Ekadashi ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಈ ದಿನ Lord Vishnu ಅವರನ್ನು ಭಕ್ತಿಯಿಂದ ಆರಾಧಿಸಿದರೆ ಪಾಪಗಳು ನಿವಾರಣೆಯಾಗುತ್ತವೆ ಮತ್ತು ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ.
2026ರಲ್ಲಿ ವರುಥಿನಿ ಏಕಾದಶಿಯನ್ನು ಏಪ್ರಿಲ್ 13, ಸೋಮವಾರ ಆಚರಿಸಲಾಗುತ್ತದೆ. ಏಕಾದಶಿ ತಿಥಿ ಏಪ್ರಿಲ್ 13ರಂದು ಬೆಳಗಿನ ಜಾವ ಆರಂಭವಾಗಿ, ಏಪ್ರಿಲ್ 14ರವರೆಗೆ ಮುಂದುವರಿಯುತ್ತದೆ. ಈ ದಿನ ಭಕ್ತರು ಉಪವಾಸ ವ್ರತ ಆಚರಿಸಿ, ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತಾರೆ.
ಈ ಪವಿತ್ರ ದಿನದಲ್ಲಿ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ, ಮನೆಯಲ್ಲಿ ಪೂಜೆ ಸ್ಥಳವನ್ನು ಸ್ವಚ್ಛಗೊಳಿಸಿ ವಿಷ್ಣು, ಕೃಷ್ಣ ಅಥವಾ ಬಾಲಗೋಪಾಲನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಬೇಕು. ದೇವರಿಗೆ ಹೂವು, ದೀಪ, ನೈವೇದ್ಯ ಸಮರ್ಪಿಸಿ, ಭಕ್ತಿಯಿಂದ ಮಂತ್ರಗಳನ್ನು ಜಪಿಸಬೇಕು.
ದಿನಪೂರ್ತಿ ಉಪವಾಸದಿಂದ ದೇಹ-ಮನಸ್ಸು ಶುದ್ಧೀಕರಣವಾಗುತ್ತದೆ ಎಂದು ನಂಬಲಾಗುತ್ತದೆ. ಹಸಿವು ತಾಳಲಾರದವರು ಸಂಜೆ ಹಣ್ಣು ಹಾಗೂ ಹಾಲಿನ ಪದಾರ್ಥಗಳನ್ನು ಸೇವಿಸಬಹುದು. ಮರುದಿನ ಪಾರಣ ಸಮಯದಲ್ಲಿ ಉಪವಾಸ ಮುಕ್ತಾಯ ಮಾಡಬೇಕು.
ಮುಖ್ಯ ಮುಹೂರ್ತಗಳು:
- ಏಕಾದಶಿ ದಿನಾಂಕ: ಏಪ್ರಿಲ್ 13, 2026
- ಪಾರಣ ಸಮಯ: ಏಪ್ರಿಲ್ 14, ಬೆಳಗ್ಗೆ 6:54 ರಿಂದ 8:31
- ಅಮೃತ ಕಾಲ: ಬೆಳಗ್ಗೆ 5:58 ರಿಂದ 7:34
ಮಂತ್ರಗಳು:
- ಓಂ ನಮೋ ಭಗವತೇ ವಾಸುದೇವಾಯ
- ಓಂ ನಮೋ ನಾರಾಯಣಾಯ
- ಹರೇ ರಾಮ ಹರೇ ಕೃಷ್ಣ
ಒಟ್ಟಿನಲ್ಲಿ, ವರುಥಿನಿ ಏಕಾದಶಿ ವ್ರತವು ಆಧ್ಯಾತ್ಮಿಕ ಶುದ್ಧೀಕರಣಕ್ಕೆ ಮಹತ್ವದ ದಿನವಾಗಿದ್ದು, ಭಕ್ತರಲ್ಲಿ ಧಾರ್ಮಿಕ ಭಾವನೆಗಳನ್ನು ಹೆಚ್ಚಿಸುತ್ತದೆ.
ದೇಶ
Kumar Bangarappa : ಶಹನಾಯಿ ನಾದಕ್ಕೆ ಮನಸೋತ ಕುಮಾರ್ ಬಂಗಾರಪ್ಪ: ಕಲಾವಿದ ರಾಮಪ್ಪಗೆ ಭಾರಿ ಮೆಚ್ಚುಗೆ
ಶಿವಮೊಗ್ಗ: ಮಾಜಿ ಸಚಿವ Kumar Bangarappa ಅವರು ಸ್ಥಳೀಯ ಶಹನಾಯಿ ಕಲಾವಿದರೊಬ್ಬರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೊರಬ ಪ್ರದೇಶದ Ramappa Anavatti ಅವರ ನಾದಸುಧೆ ಬಂಗಾರಪ್ಪ ಅವರ ಮನಸೂರೆಗೊಂಡಿದೆ.
ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ರಾಮಪ್ಪ ಅವರ ಶಹನಾಯಿ ವಾದನವನ್ನು ಕೇಳಿದ ಬಂಗಾರಪ್ಪ, ಆ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಂಗೀತಕ್ಕೆ ಭಾಷೆಯ ಅಡ್ಡಿ ಇಲ್ಲ, ಅದು ನೇರವಾಗಿ ಹೃದಯವನ್ನು ತಲುಪುತ್ತದೆ ಎಂಬುದಕ್ಕೆ ರಾಮಪ್ಪ ಅವರ ಕಲೆ ಜೀವಂತ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.
ರಾಮಪ್ಪ ಅವರ ವಾದನ ಕೇಳುತ್ತಿದ್ದಾಗ ಅವರಿಗೆ Sanadi Appanna ಚಿತ್ರದ ನೆನಪು ಮೂಡಿದುದಾಗಿ ಹೇಳಿದರು. ಆ ಚಿತ್ರದಲ್ಲಿ Dr. Rajkumar ಅಭಿನಯಿಸಿದ ಪಾತ್ರದಂತೆ, ರಾಮಪ್ಪ ಅವರು ತಮ್ಮ ಕಲೆಯಿಂದ ಮದುವೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ, ರಾಮಪ್ಪ ಅವರ ವಾದನದಲ್ಲಿ Bismillah Khan ಅವರ ನಾದಮಾಧುರ್ಯ ಹಾಗೂ ರಾಜ್ಕುಮಾರ್ ಅವರ ಗಾಂಭೀರ್ಯ ಎರಡೂ ಮೇಳೈಸಿದಂತಿದೆ ಎಂದು ಶ್ಲಾಘಿಸಿದರು.
ನಮ್ಮ ಮಣ್ಣಿನ ಇಂತಹ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ರಾಮಪ್ಪ ಆನವಟ್ಟಿ ಅವರಿಗೆ ಆಯುರಾರೋಗ್ಯ ಲಭಿಸಲಿ ಎಂದು ಕುಮಾರ್ ಬಂಗಾರಪ್ಪ ಅವರು ಹಾರೈಸಿದರು.
-
ದೇಶ6 hours agoKumar Bangarappa : ಶಹನಾಯಿ ನಾದಕ್ಕೆ ಮನಸೋತ ಕುಮಾರ್ ಬಂಗಾರಪ್ಪ: ಕಲಾವಿದ ರಾಮಪ್ಪಗೆ ಭಾರಿ ಮೆಚ್ಚುಗೆ
-
ಕ್ರೀಡೆ8 hours agoCSK ಮೊದಲ ಜಯದ ನಡುವೆ ವಿವಾದ: ಡಿಸಿ ತಂಡದ ಕೋಪ ಸಿಡಿತ
-
ಅಪರಾಧ7 hours agoಶಕ್ತಿ ಯೋಜನೆ ಹೆಸರಿನಲ್ಲಿ ಲೂಟಿ: BMTC ಸಿಬ್ಬಂದಿ ವಿರುದ್ಧ ಕಠಿಣ ಕ್ರಮ
-
ದೇಶ7 hours ago“ಪರಮಾಣು ಬದ್ಧತೆ ಕಾಣಿಸಲಿಲ್ಲ” – ವ್ಯಾನ್ಸ್ ಹೇಳಿಕೆ
-
ದೇಶ5 hours agoಬೆಂಗಳೂರು ಜೀವನ ವೆಚ್ಚಕ್ಕೆ ಸವಾಲು: ಮಹಿಳೆಯ ಬಜೆಟ್ ಟ್ರಾವೆಲ್ ಸ್ಟೋರಿ
-
ಕ್ರೀಡೆ9 hours agoಕುಸ್ತಿ ಪರಂಪರೆಗೆ ಹೊಸ ಚೈತನ್ಯ: ಕುಂಬಾರ ಕೊಪ್ಪಲಲ್ಲಿ ಕ್ರೀಡಾಂಗಣ ನಿರ್ಮಾಣ
-
ದೇಶ9 hours agoಹೆಲಿಪ್ಯಾಡ್ನಿಂದ ಲೈವ್ ಕಮೆಂಟರಿ: ಪ್ರಧಾನಿ ಮೋದಿ ಹೊಸ ಪ್ರಯೋಗ
-
ದೇಶ8 hours agoಶಾಂತಿ ಮುಖ್ಯ, ಸ್ಪರ್ಧೆ ಬೇಡ: ಪಾಕಿಸ್ತಾನ ಬಗ್ಗೆ ತರೂರು ಸ್ಪಷ್ಟನೆ
