ದೇಶ
ಹೆಸರು ಹೇಳೋಕೆ ಕಷ್ಟಪಡಬೇಕಾದ ಜಗತ್ತಿನ 5 ಅಪರೂಪದ ಸ್ಕಾಚ್ಸ್!

ಸ್ಕಾಚ್ ವಿಸ್ಕಿ ಅಂದರೆ ಕುಡುಕರ ತಲೆ ಧಿಮ್ ಎನ್ನುತ್ತದೆ. ಆದರೆ, ಪ್ರಪಂಚದಲ್ಲಿ ಕೆಲವೊಂದು ಸ್ಕಾಚ್ ವಿಸ್ಕಿಗಳಿದ್ದು, ಅವುಗಳ ಹೆಸರನ್ನು ಉಚ್ಛಾರಣೆ ಮಾಡೋದೆ ಕಷ್ಟ. ಈ ಲೇಖನದಲ್ಲಿ ಪ್ರಪಂಚದ ಐದು ಸ್ಕಾಚ್ ವಿಸ್ಕಿಗಳು ಸುವಾಸನೆಯ ಕಾರಣಕ್ಕಾಗಿ ಮಾತ್ರವಲ್ಲ ತನ್ನ ಹೆಸರಿನಲ್ಲೂ ಹೊಸ ಸಾಹಸ ಮಾಡುತ್ತಿದೆ. ಇವುಗಳು ಸ್ಕಾಟ್ಲೆಂಡ್ನ ವಿಸ್ಕಿ ಪರಂಪರೆಯನ್ನು ಮಾತ್ರವಲ್ಲದೆ, ಅಲ್ಲಿನ ಶ್ರೀಮಂತ ಭಾಷಾ ಪರಂಪರೆಯನ್ನೂ ನೋಡಬಹುದಾಗಿದೆ.
Bruichladdich
ಬ್ರೂಚ್ಲಾಡಿಚ್ (Bruichladdich) ಅಂತಾ ನೀವು ಇದನ್ನು ಓದಬಹುದಾದರೂ ಇದರ ಉಚ್ಚಾರಣೆ ಬ್ರೂಕ್ಲಾಡೀ (bru-kla-dee). ಇಸ್ಲೇಯ ಲೊಚ್ ಇಂಡಾಲ್ನ ಪಶ್ಚಿಮ ತೀರದಲ್ಲಿ ರೆಮಿ ಕೊಯಿಂಟ್ರೂ-ಮಾಲೀಕತ್ವದ ಡಿಸ್ಟಿಲರಿಯ ಸ್ಕಾಚ್ ವಿಸ್ಕಿ ಇದು. 1881ರಲ್ಲಿ ಆರಂಭವಾದ ಈ ಡಿಸ್ಟಲರಿಯ ಬ್ರೂಕ್ಲಾಡೀ ಸೌಮ್ಯವಾದ, ಹೂವಿನ ಮತ್ತು ಜೇನುತುಪ್ಪದ ವಿಸ್ಕಿಗಳಿಗೆ ಹೆಸರುವಾಸಿಯಾಗಿದೆ. ಇದರ ಒಂದು ಬಾಟಲ್ನ ಬೆಲೆ 40 ಸಾವಿರ ರೂಪಾಯಿ. ಫೆಬ್ರವರಿ 2024 ರಲ್ಲಿ ಹೊಸ ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್ ಅನ್ನು ಪ್ರಾರಂಭಿಸುವುದರೊಂದಿಗೆ ಬ್ರೂಕ್ಲಾಡೀ 21 ವರ್ಷದ ಹಳೆಯ ಬಾಟಲ್ಅನ್ನು ನವೀಕರಿಸಿದ್ದಾರೆ. ಬ್ರೂಕ್ಲಾಡೀ ಥರ್ಟಿ ಅನ್ನು ಸಹ ಅನಾವರಣಗೊಳಿಸಲಾಯಿತು.
Bunnahabhain
ಬುನ್ನಾಹ್ಬೈನ್ ಎಂದು ನಾವಿದನ್ನು ಓದಬಹುದಾದರೂ, ಇದರ ಉಚ್ಛಾರಣೆ, ಬುನಾಹವ್ಎನ್ (Bu-Nah-Hav-En). ಒಂದು ಬಾಟಲ್ನ ಬೆಲೆ 2.60 ಲಕ್ಷ ರೂಪಾಯಿ. ಇಸ್ಲೇ ಡಿಸ್ಟಿಲರಿ ದ್ವೀಪದ ಈಶಾನ್ಯ ಕರಾವಳಿಯಲ್ಲಿದೆ. ಬ್ರೂಕ್ಲಾಡೀನಂತೆ, ಇದನ್ನು 1881 ರಲ್ಲಿ ವಿಕ್ಟೋರಿಯನ್ ವಿಸ್ಕಿಯ ಕ್ರಾಂತಿಯ ಮಧ್ಯೆ ಸ್ಥಾಪಿಸಲಾಯಿತು. ಡಿಸ್ಟಿಲರಿಯು ಈ ಹಿಂದೆ ಪೀಟೆಡ್ ಸಿಂಗಲ್ ಮಾಲ್ಟ್ಗಳನ್ನು ಉತ್ಪಾದನೆ ಮಾಡುತ್ತಿತ್ತು. 1960 ರ ದಶಕದಿಂದ ಬುನಾಹವ್ಎನ್ ಪ್ರಧಾನವಾಗಿ ಶೆರ್ರಿ ಪೀಪಾಯಿಗಳಲ್ಲಿ ಏಜಡ್ ಪೀಟ್ ಮಾಡದ ವಿಸ್ಕಿಯನ್ನು ಉತ್ಪಾದಿಸುತ್ತಿದೆ. ಇಲ್ಲಿಯವರೆಗೂ ಕೇವಲ 594 ಬಾಟಲ್ಗಳನ್ನು ಮಾತ್ರವೇ ಮಾರಾಟ ಮಾಡಲಾಗಿದೆ.
Glen Garioch
ಗ್ಲೆನ್ ಗ್ಯಾರಿಯೋಚ್ ಎಂದು ನಾವು ಹೇಳಬಹುದಾದರೂ, ಇದರ ಸರಿಯಾದ ಉಚ್ಛಾರಣೆ ಗ್ಲೆನ್ ಗೀರೇ (Glen-Geery). ಡಿಸ್ಟಿಲರಿಯು ತನ್ನ ಹೆಸರನ್ನು ಗೀರೇಯ ಹತ್ತಿರದ ಕಣಿವೆಯಿಂದ ಪಡೆದುಕೊಂಡಿದೆ, ಇದು ಸ್ಕಾಟ್ಲೆಂಡ್ನ ಅತ್ಯುತ್ತಮ ಬಾರ್ಲಿ-ಬೆಳೆಯುವ ಪ್ರದೇಶಗಳಲ್ಲಿ ಒಂದಾಗಿದೆ. ಸ್ಕಾಟ್ಲೆಂಡ್ನ ಅನೇಕ ಡಿಸ್ಟಿಲರಿಗಳು ‘ಗ್ಲೆನ್’ ಪೂರ್ವಪ್ರತ್ಯಯವನ್ನು ಹೊಂದಿರುತ್ತವೆ. ಸ್ಕಾಟ್ಸ್ ಗೇಲಿಕ್ನಲ್ಲಿ ‘ಗ್ಲೆನ್’ ಎಂದರೆ ‘ಕಣಿವೆ’ ಎಂದರ್ಥವಾಗಿದೆ. ಸ್ಕಾಟಿಷ್ ಹೈಲ್ಯಾಂಡ್ಸ್ನ ಓಲ್ಡ್ಮೆಲ್ಡ್ರಮ್ನಲ್ಲಿರುವ ಗ್ಲೆನ್ ಗೀರೇ ಅನ್ನು 1797 ರಲ್ಲಿ ಥಾಮಸ್ ಸಿಂಪ್ಸನ್ ಸ್ಥಾಪಿಸಿದರು. ಸ್ಕಾಟ್ಲೆಂಡ್ನ ಅತ್ಯಂತ ಹಳೆಯ ಕಾರ್ಯಾಚರಣೆಯ ಡಿಸ್ಟಿಲರಿಗಳಲ್ಲಿ ಒಂದಾಗಿದೆ. ಇದರ ಒಂದು ಸಿಂಗಲ್ ಬಾಟಲ್ನ ಬೆಲೆ 2.87 ಲಕ್ಷ ರೂಪಾಯಿ.
Auchentoshan
ಔಚೆಂಟೋಶನ್ ಎಂದು ನಾವಿದನ್ನು ಕರೆಯಬಹುದಾದರೂ ಇದರ ಉಚ್ಛಾರಣೆ ‘ಔಕುಂತೋಷ್ಉನ್'(Ock-Un-Tosh-Un). ಇದು ಲೋಲ್ಯಾಂಡ್ ಡಿಸ್ಟಿಲರಿಯಾಗಿದ್ದು, ಇದು ಗ್ಲ್ಯಾಸ್ಗೋದ ಉತ್ತರಕ್ಕೆ ಕ್ಲೈಡ್ ನದಿಯ ಮುಖಭಾಗದಲ್ಲಿದೆ. ‘ಉಚ್ಛಾರ ಮಾಡೋಕೆ ಕಷ್ಟ, ಕುಡಿಯಲು ಸುಲಭ..’ ಸಂತಾ ಸ್ವತಃ ಈ ಕಂಪನಿಯೇ ಹೇಳಿಕೊಳ್ಳುತ್ತದೆ. ಡಿಸ್ಟಿಲರಿಯು ಸ್ಕಾಟಿಷ್ ಗೇಲಿಕ್ ನುಡಿಗಟ್ಟು ‘ಅಚಾದ್ ಆನ್ ಓಸಿನ್’ ಅಂದರೆ ಇಂಗ್ಲಿಷ್ನಲ್ಲಿ ‘ಸ್ಥಳದ ಮೂಲೆ’ಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.1817 ರಲ್ಲಿ ಜಾನ್ ಬುಲೋಚ್ ಸ್ಥಾಪಿಸಿದ ಔಕುಂತೋಷ್ಉನ್, ಸ್ಕಾಟ್ಲೆಂಡ್ನಲ್ಲಿ ಟ್ರಿಪಲ್ ಡಿಸ್ಟಿಲೇಷನ್ ಅನ್ನು ಪ್ರತ್ಯೇಕವಾಗಿ ಬಳಸುವ ಏಕೈಕ ವಿಸ್ಕಿ ಡಿಸ್ಟಿಲರಿ ಎಂದು ಪ್ರಸಿದ್ಧವಾಗಿದೆ. ಎಲ್ಲಾ ಉತ್ಪಾದನೆಯನ್ನು ಸಿಂಗಲ್ ಮಾಲ್ಟ್ಗಳಿಗೆ ಬಳಸಲಾಗುತ್ತದೆ. ಇದರ ಒಂದು ಸಿಂಗಲ್ ಬಾಟಲ್ನ ಬೆಲೆ 55 ಸಾವಿರ ರೂಪಾಯಿ.
Caol Ila
ಕಾಲ್ ಇಲಾ ಎಂದು ನೀವಿದನ್ನೂ ಉಚ್ಛಾರ ಮಾಡಿದರೂ, ಇದರ ಸರಿಯಾದ ಉಚ್ಛಾರಣೆ ಕುಲ್ ಇಲಾಹ್ (Cull-Ee-Lah). ಇದರ ಒಂದು ಸಿಂಗಲ್ ಬಾಟಲ್ನ ಬೆಲೆ 59 ಸಾವಿರ ರೂಪಾಯಿ. ಕುಲ್ ಇಲಾಹ್ ಎಂಬುದು ಸೌಂಡ್ ಆಫ್ ಇಸ್ಲೇಗೆ ಸ್ಕಾಟಿಷ್ ಗೇಲಿಕ್ ಹೆಸರಾಗಿದೆ. ಐಲ್ ಆಫ್ ಜುರಾದಿಂದ ಇಸ್ಲೇಯನ್ನು ಪ್ರತ್ಯೇಕಿಸುವ ನೀರಿನ ಭಾಗ ಇದು. ಈ ಡಿಸ್ಟಿಲರಿ ಬುನಾಹವ್ಎನ್ ದಕ್ಷಿಣಕ್ಕೆ ಪೋರ್ಟ್ ಅಸ್ಕೈಗ್ನ ಉತ್ತರದಲ್ಲಿದೆ.
ದೇಶ
ನವರಾತ್ರಿ ಸಮಯದಲ್ಲಿ ವಿಮಾನ ನಿಲ್ದಾಣಗಳಲ್ಲಿ ಭಯೋತ್ಪಾದಕ ದಾಳಿ ಎಚ್ಚರಿಕೆ – ಭದ್ರತೆ ಬಿಗಿ ಕ್ರಮ

ಭಾರತದ ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ನವರಾತ್ರಿಯ ವೇಳೆ ಭಯೋತ್ಪಾದಕ ದಾಳಿಯ ಅಪಾಯವಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದು, ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮ ಜಾರಿಯಲ್ಲಿದೆ.
ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಆಗಸ್ಟ್ 4ರಂದು ಎಚ್ಚರಿಕೆ ಪ್ರಕಟಿಸಿ, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಭಯೋತ್ಪಾದನೆ ಅಥವಾ ಸಮಾಜ ವಿರೋಧಿ ಶಕ್ತಿಗಳಿಂದ ದಾಳಿ ಸಂಭವಿಸಬಹುದೆಂದು ಸೂಚಿಸಿದೆ.
🕵️ ಗುಪ್ತಚರ ಮೂಲದ ಮಹತ್ವದ ಎಚ್ಚರಿಕೆ:
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಸಿದ್ಧತೆ ನಡೆಸುತ್ತಿವೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳು, ಏರ್ಸ್ಟ್ರಿಪ್ಗಳು, ಹೆಲಿಪ್ಯಾಡ್ಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳಾಗಿ ಈ ಕೆಳಗಿನ ಕ್ರಮಗಳು ಜಾರಿಗೆ ಬಂದಿವೆ:
- ಸಿಬ್ಬಂದಿ ಮತ್ತು ಸಂದರ್ಶಕರ ಗುರುತಿನ ಪರಿಶೀಲನೆ
- ಸಿಸಿಟಿವಿ ಕಣ್ಗಾವಲು ಬಿಗಿತ
- ಸರಕು, ಪಾರ್ಸೆಲ್ ಮತ್ತು ಮೇಲ್ಗಳ ತಪಾಸಣೆ
- ಸ್ಥಳೀಯ ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಸಹಕಾರ
🇮🇳 ರಾಷ್ಟ್ರೀಯ ಭದ್ರತೆಗೆ ಒತ್ತು:
ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳು ಈ ಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಪ್ರಯಾಣಿಕರು ತಮ್ಮ ಗುರುತಿನ ದಾಖಲೆಗಳನ್ನು ಸಿದ್ಧವಾಗಿಡಬೇಕು. ತಪಾಸಣೆ ವಿಳಂಬದ ಸಾಧ್ಯತೆಯಿರುವುದರಿಂದ ಸಹಕಾರ ನೀಡುವಂತೆ BCAS ಮನವಿ ಮಾಡಿದೆ.
ದೇಶ
ಅಮೆರಿಕ-ರಷ್ಯಾ ವ್ಯವಹಾರ: ಭಾರತದ ಟೀಕೆಗೆ ಟ್ರಂಪ್ ನುಣುಚು ಪ್ರತಿಕ್ರಿಯೆ

ವಾಷಿಂಗ್ಟನ್: ರಷ್ಯಾದಿಂದ ಈಗಲೂ ವ್ಯವಹಾರ ನಡೆಸುತ್ತಿರುವ ಅಮೆರಿಕದ ಕುರಿತಾಗಿ ಭಾರತ ಮಾಡಿರುವ ಗಂಭೀರ ಆರೋಪಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನುಣುಚು ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ಆರೋಪಿಸಿದಂತೆ, ಅಮೆರಿಕ 2024ರಲ್ಲಿ 1.1 ಶತಕೋಟಿ ಡಾಲರ್ ಮೌಲ್ಯದ ರಸಗೊಬ್ಬರ, 878 ಮಿಲಿಯನ್ ಡಾಲರ್ ಮೌಲ್ಯದ ಪಲ್ಲಾಡಿಯಮ್ ಸೇರಿದಂತೆ ಹಲವು ಅಮೂಲ್ಯ ಲೋಹಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಯುರೇನಿಯಂ ಹೆಕ್ಸಾಫ್ಲೋರೈಡ್ನಂತಹ ಪರಮಾಣು ಉತ್ಪನ್ನಗಳ ಆಮದು ಕೂಡ ಮುಂದುವರಿದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಟ್ರಂಪ್, “ನನಗೆ ಈ ವ್ಯಾಪಾರದ ವಿವರಗಳು ತಿಳಿದಿಲ್ಲ, ನಾನು ಪರಿಶೀಲನೆ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ಭಾರತದ ಖಡಕ್ ಪ್ರತಿಕ್ರಿಯೆ:
ಭಾರತ, ತನ್ನ ರಷ್ಯಾ ತೈಲ ಆಮದು ಬಗ್ಗೆ ಅಮೆರಿಕದ ಟೀಕೆಗೆ ಅಂಕಿ-ಅಂಶಗಳೊಂದಿಗೆ ತಿರುಗೇಟು ನೀಡಿದೆ. ಯುರೋಪ್ ದೇಶಗಳೇ ರಷ್ಯಾದಿಂದ ಭಾರಿ ಪ್ರಮಾಣದಲ್ಲಿ ಎಲ್ಎನ್ಜಿ, ರಸಗೊಬ್ಬರ, ಲೋಹಗಳನ್ನು ಆಮದು ಮಾಡಿಕೊಳ್ಳುತ್ತಿವೆ. 2024ರಲ್ಲಿ ಯುರೋಪಿಯನ್ ಒಕ್ಕೂಟವು 67.5 ಬಿಲಿಯನ್ ಯುರೋಗಳಷ್ಟು ಸರಕು ವ್ಯಾಪಾರ ಹಾಗೂ 17.2 ಬಿಲಿಯನ್ ಯುರೋಗಳಷ್ಟು ಸೇವಾ ವ್ಯಾಪಾರವನ್ನು ರಷ್ಯಾ ಜೊತೆ ನಡೆಸಿದೆ.
ಟ್ರಂಪ್ ಅವರ ಆರೋಪ:
ಟ್ರಂಪ್ ಹೇಳುವಂತೆ, ಭಾರತ ರಷ್ಯಾದ ತೈಲವನ್ನು ಖರೀದಿ ಮಾಡುತ್ತಿದ್ದು, ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ಅವರು ಈ ಕಾರಣಕ್ಕಾಗಿ ಭಾರತದಿಂದ ಸಂಗ್ರಹಿಸಬೇಕಾದ ಸುಂಕವನ್ನು ಹೆಚ್ಚಿಸುವುದಾಗಿ ಹೇಳಿದ್ದಾರೆ.
ಭಾರತದ ನಿಲುವು:
ಭಾರತ, ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇಂಧನದ ದರಗಳನ್ನು ಜನತೆಗೆ ಕೈಗೆಟುಕುವಂತೆ ಇರಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕ್ರೀಡೆ
ರಿಷಭ್ ಪಂತ್ ಮಾನವೀಯತೆ: ಬಡ ವಿದ್ಯಾರ್ಥಿನಿಗೆ BCA ಪ್ರವೇಶಕ್ಕೆ ₹40,000 ನೆರವು!

ಬಾಗಲಕೋಟೆ: ಟೀಂ ಇಂಡಿಯಾದ ವಿಕೆಟ್ ಕೀಪರ್ ಹಾಗೂ ತೀಕ್ಷ್ಣ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರು ಕ್ರೀಡಾಕ್ಷೇತ್ರದಷ್ಟೇ ದಾನಶೀಲತೆಯಲ್ಲೂ ಮಾದರಿಯಾಗಿದ್ದಾರೆ. ಇತ್ತೀಚೆಗೆ ಅವರು ಬಾಗಲಕೋಟೆ ಜಿಲ್ಲೆಯ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಆರ್ಥಿಕ ನೆರವು ನೀಡಿ ಜನಮನ ಗೆದ್ದಿದ್ದಾರೆ.
ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರಮಠ ದ್ವಿತೀಯ ಪಿಯುಸಿಯಲ್ಲಿ 85% ಅಂಕ ಗಳಿಸಿದ್ದರೂ, ಮನೆ ಪರಿಸ್ಥಿತಿಯಿಂದ BCA ಕೋರ್ಸ್ಗೆ ಸೇರುವ ಕನಸು ತೊಡೆತಗೊಂಡಿತ್ತು. ತಂದೆ ಚಿಕ್ಕ ಟೀ ಅಂಗಡಿ ನಡೆಸುವವರಾಗಿದ್ದು ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ.
ಇದನ್ನು ಗುತ್ತಿಗೆದಾರ ಅನಿಲ್ ಹುಣಸಿಕಟ್ಟಿ ಅವರು ಗಮನಿಸಿ, ತಮ್ಮ ಸಂಪರ್ಕಗಳಿಂದ ರಿಷಭ್ ಪಂತ್ ಅವರ ಗಮನಕ್ಕೆ ತಂದರು. ಇದನ್ನು ಕೇಳಿದ ಪಂತ್, ಜುಲೈ 17ರಂದು ₹40,000 ನೇರವಾಗಿ BLDE ಕಾಲೇಜಿನ ಖಾತೆಗೆ ವರ್ಗಾಯಿಸಿ, ಜ್ಯೋತಿಯ ಮೊದಲ ಸೆಮಿಸ್ಟರ್ ಶುಲ್ಕವನ್ನು ಭರಿಸಿದರು.
ಜ್ಯೋತಿ ಎಮೋಶನಲ್ ಆಗಿ, “ರಿಷಭ್ ಪಂತ್ ಸಹಾಯದಿಂದ ನನ್ನ ಕನಸು ಸಾಧ್ಯವಾಯಿತು. ಅವರಿಗೆ ದೇವರು ಆಯುಷ್ಯ ಕೊಡಲಿ,” ಎಂದಿದ್ದಾರೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ